ಮೂರ್ಖ ನಾನು

ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು
ನಿನ್ನನು ನಾನು ಕ್ಷಮಿಸುವಂತೆಯೇ
ನನ್ನನು ನೀನು

ಬಸವಳಿದು ಬೆಂಡಾಗಿ ಕುಳಿತೆ ನೀನು
ಬಸವಳಿದು ಬಂಡಾಗಿ ನಿಂತೆ ನಾನು
ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು
ಚಳಿ ಮಳೆ ಗಾಳಿಯಲಿ ಕಂಗೆಟ್ಟೆ ನಾನು

ಒಂದೆ ಪೃಥವಿಯ ಹಾಸಿಗೆ ಹಾಸಿ
ಒಂದೆ ಬಾನಿನ ಛದ್ದರ ಹೊದ್ದು
ಒಂದೆ ನಿದ್ದೆಗೆ ಬಿದ್ದೆವು ನಾವು
ಒಂದೆ ಕನಸೊಳಗಿದ್ದೆವು ನಾವು

ಆಮೇಲೆ ಏನಾಯ್ತೊ ಆಮೇಲೆ ಯಾತಕ್ಕೊ
ಒಬ್ಬರೊಬ್ಬರ ಮೇಲೆ ಹಾಯ್ದು ಹೋದವೊ
ಕುತ್ತಿಗೆ ಹಿಸುಕಿದೆವೊ ಕೈ ಕಾಲು ಮುರಿದೆವೊ
ಭಾರಿ ಪ್ರಪಾತಕ್ಕೆ ತಳ್ಳಿಬಿಟ್ಟೆವೊ

ಬೇರೊಂದು ದಾರಿಯ ಯೋಚಿಸಲೆ ಇಲ್ಲ
ಕೈಯಲಿ ಕೈಯ ಹಿಡಿಯಲೆ ಇಲ್ಲ
ಉಭಯ ಕುಶಲೋಪರಿ ವಿಚಾರಿಸಲಿಲ್ಲ
ನಗುವಂತು ನಾವು ನಗಲೆ ಇಲ್ಲ

ಇನ್ನೊಂದು ಜನ್ಮ ಬರುವುದಿಲ್ಲ
ಈಯೊಂದು ಜನ್ಮದಲೆ ಆಗಬೇಕೆಲ್ಲ
ಇರುವುದೊಂದೇ ಕ್ಷಣ ಕ್ಷಮೆಯ ಕೇಳಲು
ಇರುವುದೊಂದೇ ಕ್ಷಣ ಸ್ವರ್ಗದ ಬಾಗಿಲನು ತೆರೆಯಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೧೨
Next post ಕನ್ನಡತಾಯ ನೋಟ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys