ಏ ಬಕಾಸುರ ಕಾಲ! ಸಿಂಹದುಗುರುಗಳನ್ನು

ಏ ಬಕಾಸುರ ಕಾಲ! ಸಿಂಹದುಗುರುಗಳನ್ನು
ಮೊಂಡಾಗಿಸುವೆ, ಭೂಮಿ ತನ್ನ ಸಂತತಿಯನ್ನೆ
ನುಂಗುತಿದೆ ನಿನ್ನಿಂದ, ವ್ಯಾಘ್ರದ ಬಾಚಿ ಹಲ್ಲನ್ನು
ಕಿತ್ತೆಸೆವೆ ನೀನು, ಪ್ರಾಚೀನ ಫೀನಿಕ್ಸನ್ನೆ
ರಕ್ತದಲಿ ಕುದಿಸುವೆ, ಹರ್ಷದುಃಖಗಳನ್ನು
ಓಡುತ್ತಲೇ ಎಲ್ಲ ಋತುಗಳಿಗೆ ಬಡಿಸುವೆ;
ಸುವಿಶಾಲ ಲೋಕದ ಅಂದ ಚೆಂದಗಳನ್ನು
ಚಿಂದಿಗೂಳಿಸಲು ಏನೆ ಮಾಡು ನೀ ಒಪ್ಪುವೆ;
ಆದರೀ ಕೀಳು ಅಪರಾಧವನು ಮಾಡದಿರು
ನನ್ನವನ ಮಧುಮುಖವ ಸೋಕದಿರು ನಿನ್ನ ಸುಡು-
ಗಳಿಗೆ ಚಾಣಗಳಿಂದ, ಅಲ್ಲಿ ಗೆರೆ ಕೊರೆಯದಿರು
ಬರುವ ಪೀಳಿಗೆಗೆ ಸವಿ ಮಾದರಿಯ ಉಳಿಯಬಿಡು
ಮುದಿ ಕಾಲ ನೀ ಏನೆ ಮಾಡು, ಈ ಕವಿತೆಯಲಿ
ನನ್ನ ಪ್ರಿಯ ಉಳಿವ ಚಿರಕಾಲ ಯೌವನದಲಿ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 19
Devouring Time blunt thou the Lion’s paws

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಪ್ನ ಮಂಟಪ – ೧೦
Next post ಯೌವನ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…