ಏ ಬಕಾಸುರ ಕಾಲ! ಸಿಂಹದುಗುರುಗಳನ್ನು
ಮೊಂಡಾಗಿಸುವೆ, ಭೂಮಿ ತನ್ನ ಸಂತತಿಯನ್ನೆ
ನುಂಗುತಿದೆ ನಿನ್ನಿಂದ, ವ್ಯಾಘ್ರದ ಬಾಚಿ ಹಲ್ಲನ್ನು
ಕಿತ್ತೆಸೆವೆ ನೀನು, ಪ್ರಾಚೀನ ಫೀನಿಕ್ಸನ್ನೆ
ರಕ್ತದಲಿ ಕುದಿಸುವೆ, ಹರ್ಷದುಃಖಗಳನ್ನು
ಓಡುತ್ತಲೇ ಎಲ್ಲ ಋತುಗಳಿಗೆ ಬಡಿಸುವೆ;
ಸುವಿಶಾಲ ಲೋಕದ ಅಂದ ಚೆಂದಗಳನ್ನು
ಚಿಂದಿಗೂಳಿಸಲು ಏನೆ ಮಾಡು ನೀ ಒಪ್ಪುವೆ;
ಆದರೀ ಕೀಳು ಅಪರಾಧವನು ಮಾಡದಿರು
ನನ್ನವನ ಮಧುಮುಖವ ಸೋಕದಿರು ನಿನ್ನ ಸುಡು-
ಗಳಿಗೆ ಚಾಣಗಳಿಂದ, ಅಲ್ಲಿ ಗೆರೆ ಕೊರೆಯದಿರು
ಬರುವ ಪೀಳಿಗೆಗೆ ಸವಿ ಮಾದರಿಯ ಉಳಿಯಬಿಡು
ಮುದಿ ಕಾಲ ನೀ ಏನೆ ಮಾಡು, ಈ ಕವಿತೆಯಲಿ
ನನ್ನ ಪ್ರಿಯ ಉಳಿವ ಚಿರಕಾಲ ಯೌವನದಲಿ.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 19
Devouring Time blunt thou the Lion’s paws
Related Post
ಸಣ್ಣ ಕತೆ
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಒಂದು ಹಿಡಿ ಪ್ರೀತಿ
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…