ಮುಮ್ತಾಜಳ ಮಹಲು

ನನ್ನ ಅಖಂಡ ಪ್ರೀತಿಯನ್ನು
ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು
ತೂಗಬೇಡ ಮುಮ್ತಾಜ್
ದೌಲತ್ತಿನ ಆಸರೆಯಿಂದ
ನಿನ್ನ ಜಹಾಂಪನಾಹ್
ನಿನಗೊಂದು ಇಮಾರತ್ತು ಕಟ್ಟಿಸಿ,
ಅದರಲ್ಲಿ ನಿನ್ನ ಗೋರಿ ಮಾಡಿರಬಹುದು
ಆದರೆ ನನ್ನ ಪ್ರೀಯತಮನ
ಹೃದಯಲೇ ಕಟ್ಟಿದ
ಭಾವ ತುಂಬಿದ ಭವ್ಯ ಇಮಾರತ್ತಿಗೆ
ನಿನ್ನ ಅಮೃತ ಶಿಲೆಗಳು
ಸಾಟಿಯಾಗಲಾರವು ಮುಮ್ತಾಜ್.

ಪ್ರಿಯ ಮುಮ್ತಾಜ್
ನಿನ್ನ ಸುಂದರ ವದನದ ಮೇಲೆ
ಒಮ್ಮೆ ಕಣ್ಣಾಡಿಸಿ ನೋಡು-
ಅಲ್ಲಿ ನಿನ್ನ ಜಹಾಂಪನಾರ
ಶಾಹಿ ದರ್ಪದ ಮೊಹರುಗಳು ಕಂಡಾವು.
ಮುಮ್ತಾಜ್ ಯಮುನೆಯ
ತೀರದಲ್ಲೊಮ್ಮೆ ನಿಂತು
ಕಣ್ಬಿಟ್ಟು ನೋಡಿದರೆ ನಿನಗೆ
ವೀರ ಸೈನಿಕರ ರಕ್ತದಿಂದ
ತಿಳಿಜಲದ ಯಮುನೆ
ಕೆಂಪಾದುದ ಕಂಡೀತು.

ಸುಂದರ ತಾಜಮಹಲೇ
ನಿನ್ನ ಹಕೀಕತ್ತು ಎನೆಂದು
ಎಲ್ಲರಿಗೂ ಗೊತ್ತು.
ನಿನ್ನ ಪ್ರೇಮ ಸ್ಮಾರಕದ
ಮುಸುಕಿನ ಮರೆಯಲ್ಲಿ
ನಿಟ್ಟುಸಿರಿಟ್ಟ ಬೇಗಂಗಳೆಷ್ಟೋ?
ತಲೆದಿಂಬಿನಲ್ಲಿ ಇಂಗಿ ಹೋದ
ಅವರ ಬಿಸಿ ಕಂಬನಿಗಳೆಷ್ಟೋ?
ಉಕ್ಕಿದ ಹರೆಯ ಬಚ್ಚಿಡಲು
ಬಿಕ್ಕಿದ ಜನಾನಾಗಳೇಷ್ಟೋ?
ನಿನ್ನ ಅಡಿಪಾಯದಡಿಯಲ್ಲಿ
ಜಜ್ಜಿ ಹೋಗಿರುವ ಅವಶೇಷಗಳು
ಅಮೃತಶಿಲೆಗಳಲ್ಲಿ ಸಿಲುಕಿ
ನಲುಗಿ ಹೋಗಿರುವ
ಬಡಶಿಲ್ಪಿಗಳ ಆಕ್ರಂದನಗಳೆಷ್ಟೋ
ಹೆಪ್ಪುಗಟ್ಟಿದ ಅವರ ಕನಸುಗಳೆಷ್ಟೋ?
ಅವರ ನಿಟ್ಟುಸಿರಿನ ಶಬ್ದ
ಇಂದಿಗೂ ಸಹ ತಾಜಮಹಲಿನ
ಮಿನಾರುಗಳಲ್ಲಿ ಪ್ರತಿಧ್ವನಿಸುತ್ತದೆ.
ಅಳಿದು ಹೋಗುತ್ತಿರುವ
ಗೋರಿಗಳಲ್ಲಿ ಗುಣುಗುಟ್ಟುತ್ತದೆ.
ನೂಪುರಗಳ ನುಣುಪಾದ
ಗೋಡೆಗಳಲ್ಲಿ ರಕ್ತಸಿಕ್ತವಾಗುತ್ತದೆ.

ನಿನ್ನ ಬಾದಶಹನ ಹೃದಯದಲ್ಲಿ
ನೀನೊಬ್ಬಳೇನೂ ಅಲ್ಲ
ತುಂಬಿದ ಜನಾನಾಗಳುಂಟು
ಮುಜರಾಗಳಲ್ಲಿ ಮುಳುಗುವ
ಗೆಜ್ಜೆಯ ನಾದದಲ್ಲಿ ಮೈಮರವ
ಬಡವರ ರಕ್ತ ಹೀರುವ
ಅನೇಕ ಖೂನಿ ಹಕಿಕತ್ತುಗಳಿಂದ
ಸುತ್ತುವರೆದ ನಿನ್ನ ಬಾದಶಹನ
ತಾಜಮಹಲು ಪ್ರೀತಿಯ ಪ್ರತೀಕ
ಹೇಗಾದೀತು ಹೇಳು ಮುಮ್ತಾಜ್?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಲೆಯಕ್ಷರಕ್ಕೂ ಕೃತಕಗೊಬ್ಬರಕ್ಕೂ ಏನಾದರೂ ವ್ಯತ್ಯಾಸವುಂಟಾ?
Next post ಅಡುಗೆ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…