ಮಾನವೀಯತೆ

ಮಾನವೀಯತೆ,
ಏನಾಗಿದೆ ನಿನಗೆ?
ಹೀಗೇಕೆ ನಡುಬೀದಿಯಲಿ
ಮೌನವಾಗಿ ಮಲಗಿರುವೆ,

ಸತ್ಯಕ್ಕೆ ಜಯವೆಂಬ
ನಿನ್ನ ವಾಕ್ಯ ಏನಾಯಿತಿಂದು?
ನಿನ್ನ ಸಂಗಾತಿಗಳೆಲ್ಲ ಇಂದು
ಯಾಕೆ ಪಕ್ಷಾಂತರ ಮಾಡಿದರು?

ಈ ಕೊರಗಿನಲ್ಲಿಯೇ ನೀನು
ಸ್ವರಗಿ ಹೋಗುತ್ತಲಿರುವೆಯಾ?
ನೆಲದಲಿ ಹುಗಿದು ಹೋಗಿ
ಆವಶೇಷವಾಗುತ್ತಲಿರುವೆಯಾ?

ಹೀಗೆ ಬೀದಿಯಲ್ಲಿ ಬಿದ್ದು
ಒದ್ದಾಡಿ ಕೊನೆಯ ಬಿಕ್ಕು
ಹತ್ತಿದಾಗಲೂ ಜನ ನಿನಗೆ
ಕಲ್ಲುಹೊಡೆದು ಘಾಸಿಗೊಳಿಸಿ
ಗಾಯ ಮಾಡಿದರು.

ನಿನ್ನ ದೇಹದಿಂದ ಹರಿದು
ಸೇರಿದ ರಕ್ತದ ಕೆಂಪು
ಬಡಿದೆಬ್ಬಿಸಿತು ನನ್ನ
ಮಲಗಿರುವ ಆತ್ಮವ
ಸಿಡಿದೇಳುವಂತೆ ಮಾಡಿತು.

ಹಾದಿ ಬೀದಿಯಲಿ ಹೀಗೆ
ನಿನಗೆ ಅವಮಾನಿಸುತ್ತಿರುವಾಗ
ನಾನು ನಿನ್ನ ಹತ್ತಿರ ಬಂದು
ಎಬ್ಬಿಸಿ ಮಾತನಾಡಿಸಿದೆ.

ಇದನ್ನು ಕಂಡೂ ಕಾಣದಂತೆ
ಸತ್ಯ ಮಾನವೀಯತೆಗಳ ಬಗ್ಗೆ
ಭಾಷಣ ಮಾಡುವ ಮಾಸ್ತರರು
ಮೂಗು ಮುಚ್ಚಿಕೊಂಡು
ರಸ್ತೆಯಂಚಿನಲಿ ಮುಖ
ತಿರುವಿಕೊಂಡು ಹೋಗುತ್ತಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?
Next post ಹೆಣ್ಣು

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys