ಮಾನವೀಯತೆ

ಮಾನವೀಯತೆ,
ಏನಾಗಿದೆ ನಿನಗೆ?
ಹೀಗೇಕೆ ನಡುಬೀದಿಯಲಿ
ಮೌನವಾಗಿ ಮಲಗಿರುವೆ,

ಸತ್ಯಕ್ಕೆ ಜಯವೆಂಬ
ನಿನ್ನ ವಾಕ್ಯ ಏನಾಯಿತಿಂದು?
ನಿನ್ನ ಸಂಗಾತಿಗಳೆಲ್ಲ ಇಂದು
ಯಾಕೆ ಪಕ್ಷಾಂತರ ಮಾಡಿದರು?

ಈ ಕೊರಗಿನಲ್ಲಿಯೇ ನೀನು
ಸ್ವರಗಿ ಹೋಗುತ್ತಲಿರುವೆಯಾ?
ನೆಲದಲಿ ಹುಗಿದು ಹೋಗಿ
ಆವಶೇಷವಾಗುತ್ತಲಿರುವೆಯಾ?

ಹೀಗೆ ಬೀದಿಯಲ್ಲಿ ಬಿದ್ದು
ಒದ್ದಾಡಿ ಕೊನೆಯ ಬಿಕ್ಕು
ಹತ್ತಿದಾಗಲೂ ಜನ ನಿನಗೆ
ಕಲ್ಲುಹೊಡೆದು ಘಾಸಿಗೊಳಿಸಿ
ಗಾಯ ಮಾಡಿದರು.

ನಿನ್ನ ದೇಹದಿಂದ ಹರಿದು
ಸೇರಿದ ರಕ್ತದ ಕೆಂಪು
ಬಡಿದೆಬ್ಬಿಸಿತು ನನ್ನ
ಮಲಗಿರುವ ಆತ್ಮವ
ಸಿಡಿದೇಳುವಂತೆ ಮಾಡಿತು.

ಹಾದಿ ಬೀದಿಯಲಿ ಹೀಗೆ
ನಿನಗೆ ಅವಮಾನಿಸುತ್ತಿರುವಾಗ
ನಾನು ನಿನ್ನ ಹತ್ತಿರ ಬಂದು
ಎಬ್ಬಿಸಿ ಮಾತನಾಡಿಸಿದೆ.

ಇದನ್ನು ಕಂಡೂ ಕಾಣದಂತೆ
ಸತ್ಯ ಮಾನವೀಯತೆಗಳ ಬಗ್ಗೆ
ಭಾಷಣ ಮಾಡುವ ಮಾಸ್ತರರು
ಮೂಗು ಮುಚ್ಚಿಕೊಂಡು
ರಸ್ತೆಯಂಚಿನಲಿ ಮುಖ
ತಿರುವಿಕೊಂಡು ಹೋಗುತ್ತಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?
Next post ಹೆಣ್ಣು

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…