ಮಾನವೀಯತೆ

ಮಾನವೀಯತೆ,
ಏನಾಗಿದೆ ನಿನಗೆ?
ಹೀಗೇಕೆ ನಡುಬೀದಿಯಲಿ
ಮೌನವಾಗಿ ಮಲಗಿರುವೆ,

ಸತ್ಯಕ್ಕೆ ಜಯವೆಂಬ
ನಿನ್ನ ವಾಕ್ಯ ಏನಾಯಿತಿಂದು?
ನಿನ್ನ ಸಂಗಾತಿಗಳೆಲ್ಲ ಇಂದು
ಯಾಕೆ ಪಕ್ಷಾಂತರ ಮಾಡಿದರು?

ಈ ಕೊರಗಿನಲ್ಲಿಯೇ ನೀನು
ಸ್ವರಗಿ ಹೋಗುತ್ತಲಿರುವೆಯಾ?
ನೆಲದಲಿ ಹುಗಿದು ಹೋಗಿ
ಆವಶೇಷವಾಗುತ್ತಲಿರುವೆಯಾ?

ಹೀಗೆ ಬೀದಿಯಲ್ಲಿ ಬಿದ್ದು
ಒದ್ದಾಡಿ ಕೊನೆಯ ಬಿಕ್ಕು
ಹತ್ತಿದಾಗಲೂ ಜನ ನಿನಗೆ
ಕಲ್ಲುಹೊಡೆದು ಘಾಸಿಗೊಳಿಸಿ
ಗಾಯ ಮಾಡಿದರು.

ನಿನ್ನ ದೇಹದಿಂದ ಹರಿದು
ಸೇರಿದ ರಕ್ತದ ಕೆಂಪು
ಬಡಿದೆಬ್ಬಿಸಿತು ನನ್ನ
ಮಲಗಿರುವ ಆತ್ಮವ
ಸಿಡಿದೇಳುವಂತೆ ಮಾಡಿತು.

ಹಾದಿ ಬೀದಿಯಲಿ ಹೀಗೆ
ನಿನಗೆ ಅವಮಾನಿಸುತ್ತಿರುವಾಗ
ನಾನು ನಿನ್ನ ಹತ್ತಿರ ಬಂದು
ಎಬ್ಬಿಸಿ ಮಾತನಾಡಿಸಿದೆ.

ಇದನ್ನು ಕಂಡೂ ಕಾಣದಂತೆ
ಸತ್ಯ ಮಾನವೀಯತೆಗಳ ಬಗ್ಗೆ
ಭಾಷಣ ಮಾಡುವ ಮಾಸ್ತರರು
ಮೂಗು ಮುಚ್ಚಿಕೊಂಡು
ರಸ್ತೆಯಂಚಿನಲಿ ಮುಖ
ತಿರುವಿಕೊಂಡು ಹೋಗುತ್ತಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?
Next post ಹೆಣ್ಣು

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…