ನೆಲ್ಸನ್ ಮಂಡೇಲ

ನರಬಕ್ಷಕ ರಾಕ್ಷಸರು
ಬಿಳಿ ಮುಖದ ಗುಳ್ಳೆನರಿಗಳು
ಸಿಡಿಲಮರಿಗೆ ಆಹ್ವಾನಿಸಿದವು.
ಸೆರೆಮನೆಯ ಗೋಡೆಗಳು
ಸಿಡಿವಂತೆ ಮಾಡಿದರು.

ಬಂದಿಖಾನೆಯ ಬಂಧನದ
ಕತ್ತೆಲೆಯಲಿ ನೀ ಕಳೆದ
ಇಪ್ಪತ್ತಾರು ವರ್ಷಗಳು.
ಸೆರೆಮನೆಯ ಪ್ರತಿಯೊಂದು
ಕಲ್ಲುಗಳಿಗೂ ನಿನ್ನ
ನಿಟ್ಟುಸಿರಿನ ಬಿಸಿಯು ತಟ್ಟಿ
ಕೆಂಪಾಗಿವೆ ಮಂಡೇಲಾ.

ಮಾತಿಗೂ ಮೀರಿದ ನಿನ್ನ
ಸ್ನೇಹದ ಮುಗುಳು ನಗೆ
ಕೈಬೀಸಿ ಜನಸಾಗರವ
ಹತ್ತಿರಕ್ಕೆಳೆದುಕೊಂಡು
ಹೂವಿನಂತೆ ಕೈಯಾಡಿಸಿ
ಮೈದಡವಿ ಮಾನವೀಯತೆಯನು
ಬಿಗಿದಪ್ಪಿದೆ ಮಂಡೇಲಾ.

ನಿನ್ನವರ ನೋವುಗಳು
ಗಟ್ಟಿಯಾಗಿ ಹೆಪ್ಪುಗಟ್ಟಿ
ಬಾಯಿ ಬಂದಿದೆ ನೋಡು
ನೋವಿನಾಚೆಯ ಮಾತುಗಳು
ಬರಲಿರುವ ಕೆಂಪು
ಸೂರ್ಯನಿಗಾಗಿ ಕಾದಿವೆ ನೋಡು.

ಜನಸಾಗರದ ನಡುವೆ
ಭೋರ್ಗರೆದು
ಧುಮ್ಮಿಕ್ಕಿ ಹರಿವ ನಿನ್ನ
ಅಡ್ಡ ಬಂದವರು
ಚಿಂದಿಯಾದರೂ ಮಂಡೇಲಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಸ್ತು ಪಹರೆಯೊಳಿನ್ನೆಷ್ಟು ದಿನ ಜೀವನವೋ?
Next post ಯಾಕೆ?

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…