ನೆಲ್ಸನ್ ಮಂಡೇಲ

ನರಬಕ್ಷಕ ರಾಕ್ಷಸರು
ಬಿಳಿ ಮುಖದ ಗುಳ್ಳೆನರಿಗಳು
ಸಿಡಿಲಮರಿಗೆ ಆಹ್ವಾನಿಸಿದವು.
ಸೆರೆಮನೆಯ ಗೋಡೆಗಳು
ಸಿಡಿವಂತೆ ಮಾಡಿದರು.

ಬಂದಿಖಾನೆಯ ಬಂಧನದ
ಕತ್ತೆಲೆಯಲಿ ನೀ ಕಳೆದ
ಇಪ್ಪತ್ತಾರು ವರ್ಷಗಳು.
ಸೆರೆಮನೆಯ ಪ್ರತಿಯೊಂದು
ಕಲ್ಲುಗಳಿಗೂ ನಿನ್ನ
ನಿಟ್ಟುಸಿರಿನ ಬಿಸಿಯು ತಟ್ಟಿ
ಕೆಂಪಾಗಿವೆ ಮಂಡೇಲಾ.

ಮಾತಿಗೂ ಮೀರಿದ ನಿನ್ನ
ಸ್ನೇಹದ ಮುಗುಳು ನಗೆ
ಕೈಬೀಸಿ ಜನಸಾಗರವ
ಹತ್ತಿರಕ್ಕೆಳೆದುಕೊಂಡು
ಹೂವಿನಂತೆ ಕೈಯಾಡಿಸಿ
ಮೈದಡವಿ ಮಾನವೀಯತೆಯನು
ಬಿಗಿದಪ್ಪಿದೆ ಮಂಡೇಲಾ.

ನಿನ್ನವರ ನೋವುಗಳು
ಗಟ್ಟಿಯಾಗಿ ಹೆಪ್ಪುಗಟ್ಟಿ
ಬಾಯಿ ಬಂದಿದೆ ನೋಡು
ನೋವಿನಾಚೆಯ ಮಾತುಗಳು
ಬರಲಿರುವ ಕೆಂಪು
ಸೂರ್ಯನಿಗಾಗಿ ಕಾದಿವೆ ನೋಡು.

ಜನಸಾಗರದ ನಡುವೆ
ಭೋರ್ಗರೆದು
ಧುಮ್ಮಿಕ್ಕಿ ಹರಿವ ನಿನ್ನ
ಅಡ್ಡ ಬಂದವರು
ಚಿಂದಿಯಾದರೂ ಮಂಡೇಲಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಸ್ತು ಪಹರೆಯೊಳಿನ್ನೆಷ್ಟು ದಿನ ಜೀವನವೋ?
Next post ಯಾಕೆ?

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys