Home / ಕವನ / ಕವಿತೆ / ನನಗೆ ಮಾತನಾಡಲು ಬಿಡಿ

ನನಗೆ ಮಾತನಾಡಲು ಬಿಡಿ

ನನ್ನ ಬಂಧುಗಳೇ,
ನಾನು ತಲೆಯೆತ್ತಿ ನಡೆದರೆ,
ನಿಮಗೆ ಅಹಂಕಾರಿಯಂತೆ ಕಾಣುವೆನು

ತಲೆ ಬಗ್ಗಿಸಿ ನಡೆದರೆ,
ಅಬಲೆ, ಅಪರಾಧಿಯಂತೆ ಕಾಣುವೆನು.
ಮೌನವಾಗಿದ್ದರೆ ಮೂಕಿ, ಎನ್ನುವಿರಿ.
ಮಾತನಾಡಿದರೆ ವಾಚಾಳಿ ಎನ್ನುವಿರಿ.
ಹೇಳಿ ನಾನು ಹೇಗೆ ನಡೆದುಕೊಳ್ಳಲಿ ?

ನಿಮ್ಮ ಈ ಅಪಮಾನವನ್ನು ನಾನು
ಎಲ್ಲಿಯವರಿಗೆ ಸಹಿಸಲಿ? ನೀವೇ ಹೇಳಿ.
ಎಲ್ಲಿಯವರೆಗೆ ಎದೆಯಲಿ ಸಹಿಸುವ
ಜ್ವಾಲೆಯನ್ನು ಸಹಿಸಿಕೊಂಡಿರಲಿ?
ಹೇಳಿ? ನೀವೇ ಹೇಳಿ ಬಂಧುಗಳೇ.

ಎಲ್ಲಿಯವರೆಗೆ ನಾನು ನಿಮ್ಮ
ಮಾರಾಟದ ಸರಕುಗಳಿಗೆ
ವಿಜ್ಞಾಪನಾ ವಸ್ತುವಾಗಿರಲಿ?
ಎಲ್ಲ ಸ್ತ್ರೀಯ ಸೌಂದರ್ಯದ ಹಿಂದೆ
ಒಂದಿಲ್ಲೊಂದು ರಹಸ್ಯವಿದೆಯೆಂದು ಹೇಳುವಿರಿ,
ಅದುವೇ ನಿಮ್ಮ “ಫೌಂಡೇಶನ್ ಕ್ರೀಮ್”
ಎಂದು ಪ್ರಚಾರ ಗಿಟ್ಟಿಸುವಿರಿ.
ಹೇಳಿ ನಾನು ಎಲ್ಲಿಯವರೆಗೆ
ಅಗ್ಗದ ಪ್ರಚಾರ ಮಾಧ್ಯಮವಾಗಿರಲಿ?
ಎಲ್ಲಿಯವರೆಗೆ ನೀವು ಸೃಷ್ಟಿಸಿದ
“ಮಿಥಿಕ್” ಬಂಧಿಯಾಗಿರಲಿ?
ಹೇಳಿ ಬಂಧುಗಳೇ ನೀವೇ ಹೇಳಿ.

ನಾನು ಎಲ್ಲಿಯವರೆಗೆ
ನಿಮ್ಮ ಮನೋರಂಜನೆಯ
ಮಾಧ್ಯಮವಾಗಿರಲಿ?
ಹೆಣ್ಣು ದೇವತೆಯೆಂದು ಹೇಳುವಿರಿ.
ಮತ್ತೇ ಅವಳ ವ್ಯಾಪಾರ ಮಾಡುವಿರಿ,
ಇಂತಹ ನಿಮ್ಮ ಭೋಗ ಸಂಸ್ಕೃತಿಯನ್ನು
ಕಂಡ ನಾನು ಇದನ್ನು
ಉಚ್ಚ ಸಂಸ್ಕೃತಿಯೆಂದು
ಹೇಗೆ ಹೇಳಲಿ?
ನೀವೇ ಹೇಳಿ ಬಂಧುಗಳೇ,
ನೀವೇ ಹೇಳಿ,
ಇಲ್ಲ ನೀವು, ಹೇಳುವದಿಲ್ಲ.
ಅದಕ್ಕೆ-
ನಾನೀಗ ಸುಮ್ಮನಿರಲಾರೆ,
ನನ್ನ ಬಾಯಿಯನ್ನು
ಸಂಪ್ರದಾಯಗಳ ಬೇಡಿಯಿಂದ
ಬಿಗಿಯಬೇಡಿ.
ನನಗೆ ಮಾತನಾಡಲು ಬಿಡಿ.

ಶತಮಾನಗಳ
ಭಯಂಕರ ಮೌನವನು
ಮುರಿದು ಮಾತನಾಡಲೇಬೇಕು.
ಬದುಕಿಯೂ ಸತ್ತಂತಿರುವ
ಕ್ರೂರ ಬದುಕನು ಬಹಿಷ್ಕರಿಸಿ
ಬಯಲಿಗೆ ಬರಲೇಬೇಕು.

ಬಿಟ್ಟುಬಿಡಿ ನನ್ನ ಬಂಧಿಸಬೇಡಿ
ನಿಮ್ಮ ಕ್ರೂರ ಕೈಗಳಿಂದ.
ಮೂಕ ಬದುಕನು ಬಿಟ್ಟು
ನಾನು ಮಾತನಾಡಲೇಬೇಕು.
ಸಂಘರ್ಷದ ಹಾದಿಯಲ್ಲಿ ಸಾಗಲೇಬೇಕು
ಬಿಟ್ಟುಬಿಡಿ ನನ್ನ ಬಂಧಿಸಬೇಡಿ
ಸಂಪ್ರದಾಯಗಳ ಶೈಯಿಲೆಯಿಂದ
ಬಿಟ್ಟು ಬಿಡಿ ನನ್ನ ಬಿಟ್ಟು ಬಿಡಿ
ನನಗೆ ವಾತನಾಡಲು ಬಿಡಿ.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...