ತೇಲು

ನಿನ್ನ ತೆರೆದ ಆಕಾಶದ ಮನೆಯಲ್ಲಿ
ಎದೆ ತೆರೆದು ಯಾವ ಅರಿಕೆಯಿಲ್ಲದೇ
ನಾನು ಹಾಡುತ್ತಿದ್ದೇನೆ ಮತ್ತೆ ಎಲ್ಲ
ರೂಹುಗಳ ಕಳಚಿಕೊಂಡ ರೆಕ್ಕೆಗಳು ಈಗ
ವಿಶಿಷ್ಠವಾಗಿದೆ.

ಓಣಿಯ ಕೆಸರು ದಾಟಿದ ಹೆಜ್ಜೆಗಳು
ಬಯಲ ಸಂಭ್ರಮದಲ್ಲಿ ಬದುಕ ಅರಳಿಸಿ
ಖಾಯಂ ಆಗಿ ಖುಷಿಯಿಂದ ಹಾರುತ್ತಿದ್ದಾರೆ
ಹಗುರವಾಗಿ ಅವರ ಕಾಲುಗಳು ಓಲಾಡುತ್ತಿವೆ.

ತೆರೆದ ಆಕಾಶದಲಿ ಎಲ್ಲ ಮೋಡಗಳ
ಘರ್ಜನೆಯಲಿ ಮಿಂಚು ಫಳಫಳಿಸಿ
ಹಕ್ಕಿಯಾಗಿ ಹಾರಾಡಿದ ಅವನ ಒಲವು
ಮೇಘ ಮಲ್ಹಾರದ ರಾಗಗಳು ಭೂಮಿಯ
ಸಂತೈಸಿವೆ.

ಬದುಕಿನಾಚೆಯ ಸಾವಿನಾಚೆಯ ಬೆಳಕು
ಕವಿತೆಗಳು ನದಿಯಾಗಿ ಹರಿದು ಹಸಿರು
ಹಬ್ಬಿದ ಜನದ ಸಂಭ್ರಮಕೆ ದೀಪಗಳು
ಉರಿದಿವೆ ನಿನ್ನ ವಿಶಾಲ ದೇವರ ಮನೆಯು
ಅಲಂಕರಿಸಿಕೊಂಡಿದೆ.

ಅಲ್ಲಿಯದೋ ಇಲ್ಲಿಯದೋ ಮನಸ್ಸು
ಮುದಗೊಂಡ ಆಲಾಪಗಳು, ಹಸಿರು ಬಯಲು
ಬಿಳಿ ಮೋಡಗಳು, ನೀಲಿ ಆಕಾಶದಲಿ ನಕ್ಷತ್ರಗಳು
ಸಿರಿ ಸಗ್ಗ ಹೂಗಳರಳಿ ನೆಟ್ಟ ಸಸಿ ಫಲ ಶಾಂತಿ
ವಶವರ್ತಿಗೊಂಡಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಗದ ಜೋಗಿ ನೀನು
Next post ಮೂಲವರಿಯದೆ ಪಥ್ಯವಿಲ್ಲದೆ ಚಿಕಿತ್ಸೆ ಫಲಿಸೀತೇ?

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys