Home / ಕವನ / ಕವಿತೆ / ಜೋಗದ ಜೋಗಿ ನೀನು

ಜೋಗದ ಜೋಗಿ ನೀನು

ಜೋಗದ ಜೋಗಿ ನೀನು
ಏಕೆ ಕಾಡುವೆ ನನ್ನನ್ನು
ನೀನು ನೀನಾಗಿರಲು ಜೋಗಿ
ನನಗಿಲ್ಲ ಚಿಂತೆ ಏನು

ಹೋಗು ಹೋಗೆಲೋ ಜೋಗಿ ಮುಂದಕೆ
ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ
ಏನೆಂದು ಹೇಳಲೋ ಜೋಗಿ
ಏನನ್ನು ಕೊಡಲೋ ಜೋಗಿ

ಜೋಗಿ- ಜೀವನ ನಿನ್ನದ ಅವ್ವ
ಭಾವನ ನಿನ್ನದು
ಹೋಗೆನ್ನಬೇಡ ಅವ್ವ
ಕಟ್ಟೆಯೇ ಆಸರೆಯಾಗಿರಲೇಕೋ
ಪಟ್ಟ ಪಡಲೇಕೋ ಕಷ್ಟ
ಹಸಿರ ನೆಲದ ಅನಂತೆ ನೀನು
ಉಷೆಯಾಗಿಹೇ ನೀನವ್ವ
ಸಸಿಯೊಂದ ನೀಡಲೇ ಅವ್ವ
ಜೀವನ ಇಹುದು ಮುಂದಕೆ

ಒಡತಿ – ಹಸಿರ ಬಾಳಿನ ಹಂದರದೆ
ಹಸಿಯಾಗಿ ಹುದುಗಿದೆ ಮನವು
ಉಷೆ ನಾನಾಗಿರಲೇನು
ಶಶಿಯು ಇಲ್ಲದೆ ಜೋಗಿ
ಬೆತ್ತಲಾಗಿದೆ ಬಯಲು

ಜೋಗಿ – ಹಸಿರ ಬಾಳಿನ ಹಂದರದ
ನಿಮ್ಮ ಮಕ್ಕಳ ಬಾಳು ಬೆಳಗಲಿ
ಪಡದಿರು ಚಿಂತೆ ಅವ್ವ
ಉಷೆ ನೀನು ಕಿರಣವಾಗಿರು ಬಾಳಿಗೆ

ಒಡತಿ – ಹೊರೆ ಹೊತ್ತಿರುವೆ ಸಂಸಾರ
ಗಗನಕ್ಕೇರುವ ಮಾಳಿಗೆ ಸವತಿ
ತಿಳಿವಿಲ್ಲದೆ ಅರಿವಿಲ್ಲದೆ
ಬೆತ್ತಲಾಗಿದೆ ಬಾಳು
ಬತ್ತಿ ಹೋದವೋ ಕಂಗಳು
ಎದೆಯಾಳದ ನೋವ ಅರಸುತ್ತಾ
ಏನೆಂದು ಹೇಳಲೋ ಜೋಗಿ
ಉಷೆ ನಾನಾದರೇನು ಶಶಿ ಇಲ್ಲದ ಮೇಲೆ

ಜೋಗಿ – ಬಾಳ ಪಯಣದ ಬಾಗಿಲು ತೆರೆದು
ಭಾಗ್ಯಲಕ್ಷಿಯಾಗಿದೆ ಏಕೆ ಕೊರಗುವೆ?
ನೀ ಅವ್ವ…
ತುಂಗೆಯು ನೀನು ಗಂಗೆಯು ನೀನು
ಸತಿಯೆ ನಿನಗೇಕೆ ದಾಹ
ಅರಿವಿಲ್ಲದ ಪರಿವೆ ಏಕೆ ತಿಳಿಯೇ
ನೀನು ನೀನಾಗಲೇನು ಚೆಂದ
ಜೀವನ ಇಹುದು ಮುಂದಕೆ ಅವ್ವ

ಒಡತಿ – ಹೊಗಳಲೇಕೊ ಜೋಗಿ
ನನ್ನದೆನ್ನುವದೇನಿದೆಯೋ
ಭೂಮಿಯು ಬರಡಾಗಿದೆ
ಎನ್ನ ಮನವು ಮಸಕಾಗಿದೆ
ಅಕ್ಷಯ ಪಾತ್ರೆಯ ಹುಡುಕುತಿದೆ
ನಿಶೆಯಲ್ಲಿ ನಾನಾಗಿರಬೇಕು
ಶಶಿಯು ಇಲ್ಲದ ಮೇಲೆ ಜೋಗಿ

ಜೋಗಿ – ನಿನ್ನ ಅಂಗಳದಲ್ಲಿಹುದೆ ಪಾತ್ರೆ
ನಿನ್ನದೇನಿದೆಯೊ ಮಾಯೆ
ಒಂದು ಅಗಳು ಸಾಕೆನಗೆ
ನಾಳೆಗಾಗಿ ಕಾಯುವೆ ಮತ್ತೆ
ತುಂಬಲಿ ಮನೆಯು ಹರಸುವೆ ನಿನ್ನ
ಜೀವನ ಇಹುದೆ ಮುಂದಕೆ ಅವ್ವ

ಒಡತಿ – ನಿನ್ನ ನುಡಿಯಲಿಹುದೆ ಆಶಾಕಿರಣ
ನನ್ನ ಬಾಳಿಗೆ ನೀಡಲಿ ಕಿರಣ
ಚಾತಕ ಪಕ್ಷಿಯಂತೆ ಕಾಯುವೆ
ಹಿಡಿಯು ಹಿಡಿಯಲೇಕೂ ಜೋಗಿ
ನನ್ನ ಅಂಗಳವು ಹಸಿರಾಗಲಿ
ಹಿಡಿಯು ಅಕ್ಷಯವಾಗಲಿ
ಉಸಿರಾಗಲಿ ಸಸಿಗಳು
ನೀ ಬರುವ ತನಕ
ಹೋಗಿ ಬಾರೆಲೋ ಜೋಗಿ
ನಾಳೆಗಿನ ನೆನಪಿಗೆ
ನೀ ಹೋಗಿ ಬಾರಲೋ ಜೋಗಿ
ಉಷನಾಗಿದೆನೋ ಶಶಿಗಾಗಿ ಕಾಯುತಿರುವೆ
ನಿನ್ನ ಮಾತೇ ದೀವಿಗೆ
ನಡೆದು ಬಾ ಮತ್ತೆ
ಶಿಶಿರ ಬಂದ ಮೇಲೆ ಜೋಗಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...