ಜೋಗದ ಜೋಗಿ ನೀನು

ಜೋಗದ ಜೋಗಿ ನೀನು
ಏಕೆ ಕಾಡುವೆ ನನ್ನನ್ನು
ನೀನು ನೀನಾಗಿರಲು ಜೋಗಿ
ನನಗಿಲ್ಲ ಚಿಂತೆ ಏನು

ಹೋಗು ಹೋಗೆಲೋ ಜೋಗಿ ಮುಂದಕೆ
ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ
ಏನೆಂದು ಹೇಳಲೋ ಜೋಗಿ
ಏನನ್ನು ಕೊಡಲೋ ಜೋಗಿ

ಜೋಗಿ- ಜೀವನ ನಿನ್ನದ ಅವ್ವ
ಭಾವನ ನಿನ್ನದು
ಹೋಗೆನ್ನಬೇಡ ಅವ್ವ
ಕಟ್ಟೆಯೇ ಆಸರೆಯಾಗಿರಲೇಕೋ
ಪಟ್ಟ ಪಡಲೇಕೋ ಕಷ್ಟ
ಹಸಿರ ನೆಲದ ಅನಂತೆ ನೀನು
ಉಷೆಯಾಗಿಹೇ ನೀನವ್ವ
ಸಸಿಯೊಂದ ನೀಡಲೇ ಅವ್ವ
ಜೀವನ ಇಹುದು ಮುಂದಕೆ

ಒಡತಿ – ಹಸಿರ ಬಾಳಿನ ಹಂದರದೆ
ಹಸಿಯಾಗಿ ಹುದುಗಿದೆ ಮನವು
ಉಷೆ ನಾನಾಗಿರಲೇನು
ಶಶಿಯು ಇಲ್ಲದೆ ಜೋಗಿ
ಬೆತ್ತಲಾಗಿದೆ ಬಯಲು

ಜೋಗಿ – ಹಸಿರ ಬಾಳಿನ ಹಂದರದ
ನಿಮ್ಮ ಮಕ್ಕಳ ಬಾಳು ಬೆಳಗಲಿ
ಪಡದಿರು ಚಿಂತೆ ಅವ್ವ
ಉಷೆ ನೀನು ಕಿರಣವಾಗಿರು ಬಾಳಿಗೆ

ಒಡತಿ – ಹೊರೆ ಹೊತ್ತಿರುವೆ ಸಂಸಾರ
ಗಗನಕ್ಕೇರುವ ಮಾಳಿಗೆ ಸವತಿ
ತಿಳಿವಿಲ್ಲದೆ ಅರಿವಿಲ್ಲದೆ
ಬೆತ್ತಲಾಗಿದೆ ಬಾಳು
ಬತ್ತಿ ಹೋದವೋ ಕಂಗಳು
ಎದೆಯಾಳದ ನೋವ ಅರಸುತ್ತಾ
ಏನೆಂದು ಹೇಳಲೋ ಜೋಗಿ
ಉಷೆ ನಾನಾದರೇನು ಶಶಿ ಇಲ್ಲದ ಮೇಲೆ

ಜೋಗಿ – ಬಾಳ ಪಯಣದ ಬಾಗಿಲು ತೆರೆದು
ಭಾಗ್ಯಲಕ್ಷಿಯಾಗಿದೆ ಏಕೆ ಕೊರಗುವೆ?
ನೀ ಅವ್ವ…
ತುಂಗೆಯು ನೀನು ಗಂಗೆಯು ನೀನು
ಸತಿಯೆ ನಿನಗೇಕೆ ದಾಹ
ಅರಿವಿಲ್ಲದ ಪರಿವೆ ಏಕೆ ತಿಳಿಯೇ
ನೀನು ನೀನಾಗಲೇನು ಚೆಂದ
ಜೀವನ ಇಹುದು ಮುಂದಕೆ ಅವ್ವ

ಒಡತಿ – ಹೊಗಳಲೇಕೊ ಜೋಗಿ
ನನ್ನದೆನ್ನುವದೇನಿದೆಯೋ
ಭೂಮಿಯು ಬರಡಾಗಿದೆ
ಎನ್ನ ಮನವು ಮಸಕಾಗಿದೆ
ಅಕ್ಷಯ ಪಾತ್ರೆಯ ಹುಡುಕುತಿದೆ
ನಿಶೆಯಲ್ಲಿ ನಾನಾಗಿರಬೇಕು
ಶಶಿಯು ಇಲ್ಲದ ಮೇಲೆ ಜೋಗಿ

ಜೋಗಿ – ನಿನ್ನ ಅಂಗಳದಲ್ಲಿಹುದೆ ಪಾತ್ರೆ
ನಿನ್ನದೇನಿದೆಯೊ ಮಾಯೆ
ಒಂದು ಅಗಳು ಸಾಕೆನಗೆ
ನಾಳೆಗಾಗಿ ಕಾಯುವೆ ಮತ್ತೆ
ತುಂಬಲಿ ಮನೆಯು ಹರಸುವೆ ನಿನ್ನ
ಜೀವನ ಇಹುದೆ ಮುಂದಕೆ ಅವ್ವ

ಒಡತಿ – ನಿನ್ನ ನುಡಿಯಲಿಹುದೆ ಆಶಾಕಿರಣ
ನನ್ನ ಬಾಳಿಗೆ ನೀಡಲಿ ಕಿರಣ
ಚಾತಕ ಪಕ್ಷಿಯಂತೆ ಕಾಯುವೆ
ಹಿಡಿಯು ಹಿಡಿಯಲೇಕೂ ಜೋಗಿ
ನನ್ನ ಅಂಗಳವು ಹಸಿರಾಗಲಿ
ಹಿಡಿಯು ಅಕ್ಷಯವಾಗಲಿ
ಉಸಿರಾಗಲಿ ಸಸಿಗಳು
ನೀ ಬರುವ ತನಕ
ಹೋಗಿ ಬಾರೆಲೋ ಜೋಗಿ
ನಾಳೆಗಿನ ನೆನಪಿಗೆ
ನೀ ಹೋಗಿ ಬಾರಲೋ ಜೋಗಿ
ಉಷನಾಗಿದೆನೋ ಶಶಿಗಾಗಿ ಕಾಯುತಿರುವೆ
ನಿನ್ನ ಮಾತೇ ದೀವಿಗೆ
ನಡೆದು ಬಾ ಮತ್ತೆ
ಶಿಶಿರ ಬಂದ ಮೇಲೆ ಜೋಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಗುಸರು ಬಡಗಿ ಕೆಲಸ ಕಲಿಯಬೇಕೆ?
Next post ತೇಲು

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys