ಸಂಕಟ

ರಥ, ಹರಿದಂತೆ ಈ ಬಾಳು
ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ
ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ

ಹೋಗುವವೆ ಒಳ್ಳೆ ಕಾಲ
ಬರುವವೆ ಕೆಟ್ಟ ಕಾಲ
ನಮ್ಮದೂ ಒಂದು ಕಾಲಾನಾ?

ಏನು ಹೇಳಲಿ ಅಂದಿನ ವೈಭವವಾ-
ಎಲ್ಲಾ ಕೈ ನೀಡಿದಂಗಿತ್ತು
ಎತ್ತ ನೋಡಿದರು ಊರು ಕಾಲು ಕಟ್ಟಿದಂಗೆ ನಮ್ಮ
ಜಮೀನು ಕಾಣಿಗಳೆ

ಎಂಟಾರಿನ ಬೇಸಾಯ
ಕೈಗೊಬ್ಬ ಕಾಲಿಗೊಬ್ಬ ಅಳು
ಕುಡಿಯವಷ್ಟು ಕರೇವು
ಜೊತೆಗೆ ಗೌಡಿಕೆ ಬೇಕೆ
ಇನ್ನು ಕೇಳಬೇಕೆ!
ನಾಲ್ಕು ಜನರಿಗೆ ಬೇಕಾಗಿಬದುಕಿದರು ಹಿರಿಯರು

ನಮಗೆ ಊರು ಮನೆ ಏಕಪಥವಾಗಿತ್ತು
ತೋಳಿಂದ ಇಳಿಯಲಿಲ್ಲ-
ಮನೆಯವರು ತಪ್ಪ ಊರವರು
ಊರವರು ತಪ್ಪ ಮನೆಯವರು
ಆಡಿಸಿ ಬೆಳೆಸಿದರು

ಅದೆಲ್ಲಾ ಈಗ ಮುಗಿದ ಅಧ್ಯಾಯ!
ಹಿರಿಯರು ಹೋದರು
ಜೊತೆಗೆ ಎಲ್ಲವೂ ಹೋಯಿತು
ಪಾಂಡವರ ಬೀಳಾಗಿ ಹೋಯಿತು.

ಏನಾಯಿತೋ ಏನು ಕತೆಯೋ
ಭಗ್ಗನೆ ಬರಿದಾಯತು
ಮನೆ ಉಳಿಯಲಿಲ್ಲ
ವಂಶ ಬೆಳೆಯಲಿಲ್ಲ

ಯಾವ ಬಾಯಲ್ಲಿ ಹೇಳಲಿ
ಅತ್ತಿಗೆ ಹೋದ ಮೇಲೆ ಅಣ್ಣ ಕೆಟ್ಟು ಬಿಟ್ಟ
ಎಲ್ಲಾ ಮರೆತು ಬಿಟ್ಟ
ಮಕ್ಕಳು ಬೀದಿಗೆ ಬಿದ್ದವು
ಅನ್ಯರ ಮನೆಯ ಜಗುಲಿಯಾಯಿತು.
ಅವುಗಳಾಯಿತು
ಯಾರಿದ್ದು ಏನು ಬಂತು?
ಶಿವಾ ಇಷ್ಟು ಕಠೋರನಾಗಬಾರದಿತ್ತು

ಯಾರನ್ನಂದು ಏನು ಬರುವುದು?
ನಾವು ಬೇಡಿ ಬಂದಿದ್ದೇ ಇಷ್ಟು!
ಹಿಂದೆ ನಾವ್ಯಾರ ತೌರ ತೊರೆಸಿದ್ದೇವೊ…
ಯಾವ ಪಾಪಕ್ಕಾಗಿ ಈ ಶಿಕ್ಷೆಯೋ
ಬಲ್ಲವರಾರು?

ಎಲ್ಲರೂ ತವರೂರಿಗೆ ಹೋಗಿ
ಒಂದೆರಡು ದಿನವಿದ್ದು
ಕೈಯಾರಿಸಿ ಕೊಂಡು ಬರುವರು
ನಾವೆಲ್ಲಿಗೆ ಹೋಗುವುದು?
ನೆನೆಯದ ದಿನವಿಲ್ಲ
ಕೊರಗದ ಕ್ಷಣವಿಲ್ಲ
ಮರವೆಯಾಗದಲ್ಲ?

ಯಾರಾದರೂ ಸಿಕ್ಕಿ ಸುದ್ದಿ ಹೇಳಿದರೆ
ಆದಿನವೆಲ್ಲ ತುತ್ತುಮಿದ್ದರೆ ಮಗಳಲ್ಲ
ಏನು ಮಾಡುವುದು ಹೇಳಿ
ಎದೆ ಕೊಟ್ಟ ನಿಲ್ಲೋಣವೆಂದರೆ
ಇಲ್ಲೂ ಬಗೆ ಮಿಗಿಯಿಲ್ಲ.

ಕಂಡರೆ ಕಣ್ಣುರಿ
ಕಾಣದಿದ್ದರೆ ಹೊಟ್ಟೆಯುರಿ
ಈ ರೀತಿ ಯಾಗಿದೇ ರೀ ನನ್ನ ಸ್ಥಿತಿ
ಅದಕ್ಕೆ,
ಕಾಣದಂಗೆ ಕಣ್ಮರೆಯಲ್ಲಿರುವುದೊಂದೇ ನನಗುಳಿದಿರುವ ದಾರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಳಗೆ ಬಿದ್ದೆಯಾ ಮಗನೆ
Next post ಸಂಭ್ರಮ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…