ಸಂಕಟ

ರಥ, ಹರಿದಂತೆ ಈ ಬಾಳು
ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ
ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ

ಹೋಗುವವೆ ಒಳ್ಳೆ ಕಾಲ
ಬರುವವೆ ಕೆಟ್ಟ ಕಾಲ
ನಮ್ಮದೂ ಒಂದು ಕಾಲಾನಾ?

ಏನು ಹೇಳಲಿ ಅಂದಿನ ವೈಭವವಾ-
ಎಲ್ಲಾ ಕೈ ನೀಡಿದಂಗಿತ್ತು
ಎತ್ತ ನೋಡಿದರು ಊರು ಕಾಲು ಕಟ್ಟಿದಂಗೆ ನಮ್ಮ
ಜಮೀನು ಕಾಣಿಗಳೆ

ಎಂಟಾರಿನ ಬೇಸಾಯ
ಕೈಗೊಬ್ಬ ಕಾಲಿಗೊಬ್ಬ ಅಳು
ಕುಡಿಯವಷ್ಟು ಕರೇವು
ಜೊತೆಗೆ ಗೌಡಿಕೆ ಬೇಕೆ
ಇನ್ನು ಕೇಳಬೇಕೆ!
ನಾಲ್ಕು ಜನರಿಗೆ ಬೇಕಾಗಿಬದುಕಿದರು ಹಿರಿಯರು

ನಮಗೆ ಊರು ಮನೆ ಏಕಪಥವಾಗಿತ್ತು
ತೋಳಿಂದ ಇಳಿಯಲಿಲ್ಲ-
ಮನೆಯವರು ತಪ್ಪ ಊರವರು
ಊರವರು ತಪ್ಪ ಮನೆಯವರು
ಆಡಿಸಿ ಬೆಳೆಸಿದರು

ಅದೆಲ್ಲಾ ಈಗ ಮುಗಿದ ಅಧ್ಯಾಯ!
ಹಿರಿಯರು ಹೋದರು
ಜೊತೆಗೆ ಎಲ್ಲವೂ ಹೋಯಿತು
ಪಾಂಡವರ ಬೀಳಾಗಿ ಹೋಯಿತು.

ಏನಾಯಿತೋ ಏನು ಕತೆಯೋ
ಭಗ್ಗನೆ ಬರಿದಾಯತು
ಮನೆ ಉಳಿಯಲಿಲ್ಲ
ವಂಶ ಬೆಳೆಯಲಿಲ್ಲ

ಯಾವ ಬಾಯಲ್ಲಿ ಹೇಳಲಿ
ಅತ್ತಿಗೆ ಹೋದ ಮೇಲೆ ಅಣ್ಣ ಕೆಟ್ಟು ಬಿಟ್ಟ
ಎಲ್ಲಾ ಮರೆತು ಬಿಟ್ಟ
ಮಕ್ಕಳು ಬೀದಿಗೆ ಬಿದ್ದವು
ಅನ್ಯರ ಮನೆಯ ಜಗುಲಿಯಾಯಿತು.
ಅವುಗಳಾಯಿತು
ಯಾರಿದ್ದು ಏನು ಬಂತು?
ಶಿವಾ ಇಷ್ಟು ಕಠೋರನಾಗಬಾರದಿತ್ತು

ಯಾರನ್ನಂದು ಏನು ಬರುವುದು?
ನಾವು ಬೇಡಿ ಬಂದಿದ್ದೇ ಇಷ್ಟು!
ಹಿಂದೆ ನಾವ್ಯಾರ ತೌರ ತೊರೆಸಿದ್ದೇವೊ…
ಯಾವ ಪಾಪಕ್ಕಾಗಿ ಈ ಶಿಕ್ಷೆಯೋ
ಬಲ್ಲವರಾರು?

ಎಲ್ಲರೂ ತವರೂರಿಗೆ ಹೋಗಿ
ಒಂದೆರಡು ದಿನವಿದ್ದು
ಕೈಯಾರಿಸಿ ಕೊಂಡು ಬರುವರು
ನಾವೆಲ್ಲಿಗೆ ಹೋಗುವುದು?
ನೆನೆಯದ ದಿನವಿಲ್ಲ
ಕೊರಗದ ಕ್ಷಣವಿಲ್ಲ
ಮರವೆಯಾಗದಲ್ಲ?

ಯಾರಾದರೂ ಸಿಕ್ಕಿ ಸುದ್ದಿ ಹೇಳಿದರೆ
ಆದಿನವೆಲ್ಲ ತುತ್ತುಮಿದ್ದರೆ ಮಗಳಲ್ಲ
ಏನು ಮಾಡುವುದು ಹೇಳಿ
ಎದೆ ಕೊಟ್ಟ ನಿಲ್ಲೋಣವೆಂದರೆ
ಇಲ್ಲೂ ಬಗೆ ಮಿಗಿಯಿಲ್ಲ.

ಕಂಡರೆ ಕಣ್ಣುರಿ
ಕಾಣದಿದ್ದರೆ ಹೊಟ್ಟೆಯುರಿ
ಈ ರೀತಿ ಯಾಗಿದೇ ರೀ ನನ್ನ ಸ್ಥಿತಿ
ಅದಕ್ಕೆ,
ಕಾಣದಂಗೆ ಕಣ್ಮರೆಯಲ್ಲಿರುವುದೊಂದೇ ನನಗುಳಿದಿರುವ ದಾರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಳಗೆ ಬಿದ್ದೆಯಾ ಮಗನೆ
Next post ಸಂಭ್ರಮ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…