ವಂಚಿತೆ

ನಾಳೆ ಬೆಳೆ ಅಂದರೆ….
ಇವತ್ತೇ ಬೆಳೆದೆನಮ್ಮಾ
ಹೆಣ್ಣಾಗಿ ನಿಂತೆನಮ್ಮಾ… ಹೆಣ್ಣಾಗಿ ನಿಂತೆನಮ್ಮಾ.!
ಒಳ್ಳೆದಿರಲಿ ಕೆಟ್ಟದ್ದಿರಲಿ
ಕಾಲ ಎಂಗೆ ನಿಲ್ಲುತ್ತಮ್ಮಾ! ಕಾಲ ಎಂಗೆ ನಿಲ್ಲುತ್ತಮ್ಮಾ!

ಏನೇನೋ ತೊಳಕೆ
ಏನೇನೋ ಕನಸು
ಇನ್ನಂತಾಕಾಲ ಇನ್ನೆಲ್ಲಿ ಬರಬೇಕಮ್ಮಾ… ಇನ್ನೆಲ್ಲಿ ಬರಬೇಕಮ್ಮಾ..!

ಮನಗೆದ್ದ ಮನ್ಮಥ
ಕುದುರೆ ಏರಿ ಬಂದಂತೆ
ಪ್ರೀತೀಲಿ ಮನವೊಲಿಸಿ
ಕರೆದು ಕೊಂಡು ಹೋದಂತೆ

ಅಯ್ಯೋ!… ಹುಚ್ಚು ಮೂಳಿ ನಾನು
ಇಲ್ಲದ್ದ ಅಂದು ಕೊಂಡೆ
ಈಗೆಷ್ಟು ಸಂಕಟ ನೋಡು.

ಹೆಣ್ಣು ಮಕ್ಕಳೆಂದರೆ
ಸಾಕಿದ ದನಗಳಿವರಿಗೆ
ಕೊಟ್ಟಲ್ಲಿಗೆ ಹೋಗಬೇಕು
ಕಂತೆ ಒಗೆಯೋತನಕ ಕತ್ತೆ ಚಾಕರಿ ಮಾಡಬೇಕು,
ಈ ಹಾಳು ಮನಸ್ಸೊಂದಿಲ್ಲದಿದ್ದು
ತಿಂದುಂಡು ಓಡಾಡುವುದೇ ಬದುಕಾಗಿದ್ದಿದ್ದರೇ…
ಎಂಗಿರುತಿತ್ತೊ ಏನೋ!
ಮಕ್ಕಳಿಲ್ಲದಿದ್ದರೇನು?
ಜಗವು ಕುವುಚಿ ಕೊಳ್ಳುವುದೇ?
ಹೀಗೆ ಎಳೆಪ್ರಾಯದ ಹುಡುಗಿಯರ ತಂದು
ಕೊಲೆ ಕೊಡುವುದು ಸರಿಯೆ?

ಯಾರಿಗೋ ಹಡೆದದ್ದಾಯ್ತು
ಯಾರನ್ನೋ ಹುಡುಕೋದಾಯ್ತು
‘ಇದೇ ನೋಡಿ ನಾನು ಬೇಡಿ ಬಂದಿದು’
ನೆಮ್ಮದಿ ಮಾತ್ರ
ಅಂಗೂ ಇಲ್ಲ! ಇಂಗೂ ಇಲ್ಲ!
ಎಷ್ಟೆಷ್ಟೊ ಒದ್ದಾಡ್ತೀನಿ
ಈ ಬದುಕು, ಈ ಮನೆ ನನ್ನದು ಅನ್ನಿಸುವುದೇ ಇಲ್ಲ.

ಹಾಲು ಬಾನ ಉಣ್ಣುವಿರಿ
ಹೆಣ್ಣು ಗಂಡು ಹೆತ್ತಿರುವಿರಿ
ಮೈಮನಸು ನಿಮಗೂ ಇದೆ
ನನ್ನ ಸಂಗತಿ ಹೇಳಿರುವೆ
ಇದಕೆ ನೀವೇನು ಹೇಳುವಿರಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್ಖಾ ಬಿಟ್ಟು ಹೊರಗೆ ಬಾರವ್ವ
Next post ಅಂತರ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys