Home / ಕವನ / ಕವಿತೆ / ವಂಚಿತೆ

ವಂಚಿತೆ

ನಾಳೆ ಬೆಳೆ ಅಂದರೆ….
ಇವತ್ತೇ ಬೆಳೆದೆನಮ್ಮಾ
ಹೆಣ್ಣಾಗಿ ನಿಂತೆನಮ್ಮಾ… ಹೆಣ್ಣಾಗಿ ನಿಂತೆನಮ್ಮಾ.!
ಒಳ್ಳೆದಿರಲಿ ಕೆಟ್ಟದ್ದಿರಲಿ
ಕಾಲ ಎಂಗೆ ನಿಲ್ಲುತ್ತಮ್ಮಾ! ಕಾಲ ಎಂಗೆ ನಿಲ್ಲುತ್ತಮ್ಮಾ!

ಏನೇನೋ ತೊಳಕೆ
ಏನೇನೋ ಕನಸು
ಇನ್ನಂತಾಕಾಲ ಇನ್ನೆಲ್ಲಿ ಬರಬೇಕಮ್ಮಾ… ಇನ್ನೆಲ್ಲಿ ಬರಬೇಕಮ್ಮಾ..!

ಮನಗೆದ್ದ ಮನ್ಮಥ
ಕುದುರೆ ಏರಿ ಬಂದಂತೆ
ಪ್ರೀತೀಲಿ ಮನವೊಲಿಸಿ
ಕರೆದು ಕೊಂಡು ಹೋದಂತೆ

ಅಯ್ಯೋ!… ಹುಚ್ಚು ಮೂಳಿ ನಾನು
ಇಲ್ಲದ್ದ ಅಂದು ಕೊಂಡೆ
ಈಗೆಷ್ಟು ಸಂಕಟ ನೋಡು.

ಹೆಣ್ಣು ಮಕ್ಕಳೆಂದರೆ
ಸಾಕಿದ ದನಗಳಿವರಿಗೆ
ಕೊಟ್ಟಲ್ಲಿಗೆ ಹೋಗಬೇಕು
ಕಂತೆ ಒಗೆಯೋತನಕ ಕತ್ತೆ ಚಾಕರಿ ಮಾಡಬೇಕು,
ಈ ಹಾಳು ಮನಸ್ಸೊಂದಿಲ್ಲದಿದ್ದು
ತಿಂದುಂಡು ಓಡಾಡುವುದೇ ಬದುಕಾಗಿದ್ದಿದ್ದರೇ…
ಎಂಗಿರುತಿತ್ತೊ ಏನೋ!
ಮಕ್ಕಳಿಲ್ಲದಿದ್ದರೇನು?
ಜಗವು ಕುವುಚಿ ಕೊಳ್ಳುವುದೇ?
ಹೀಗೆ ಎಳೆಪ್ರಾಯದ ಹುಡುಗಿಯರ ತಂದು
ಕೊಲೆ ಕೊಡುವುದು ಸರಿಯೆ?

ಯಾರಿಗೋ ಹಡೆದದ್ದಾಯ್ತು
ಯಾರನ್ನೋ ಹುಡುಕೋದಾಯ್ತು
‘ಇದೇ ನೋಡಿ ನಾನು ಬೇಡಿ ಬಂದಿದು’
ನೆಮ್ಮದಿ ಮಾತ್ರ
ಅಂಗೂ ಇಲ್ಲ! ಇಂಗೂ ಇಲ್ಲ!
ಎಷ್ಟೆಷ್ಟೊ ಒದ್ದಾಡ್ತೀನಿ
ಈ ಬದುಕು, ಈ ಮನೆ ನನ್ನದು ಅನ್ನಿಸುವುದೇ ಇಲ್ಲ.

ಹಾಲು ಬಾನ ಉಣ್ಣುವಿರಿ
ಹೆಣ್ಣು ಗಂಡು ಹೆತ್ತಿರುವಿರಿ
ಮೈಮನಸು ನಿಮಗೂ ಇದೆ
ನನ್ನ ಸಂಗತಿ ಹೇಳಿರುವೆ
ಇದಕೆ ನೀವೇನು ಹೇಳುವಿರಿ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...