Home / ಕವನ / ಕವಿತೆ / ವಂಚಿತೆ

ವಂಚಿತೆ

ನಾಳೆ ಬೆಳೆ ಅಂದರೆ….
ಇವತ್ತೇ ಬೆಳೆದೆನಮ್ಮಾ
ಹೆಣ್ಣಾಗಿ ನಿಂತೆನಮ್ಮಾ… ಹೆಣ್ಣಾಗಿ ನಿಂತೆನಮ್ಮಾ.!
ಒಳ್ಳೆದಿರಲಿ ಕೆಟ್ಟದ್ದಿರಲಿ
ಕಾಲ ಎಂಗೆ ನಿಲ್ಲುತ್ತಮ್ಮಾ! ಕಾಲ ಎಂಗೆ ನಿಲ್ಲುತ್ತಮ್ಮಾ!

ಏನೇನೋ ತೊಳಕೆ
ಏನೇನೋ ಕನಸು
ಇನ್ನಂತಾಕಾಲ ಇನ್ನೆಲ್ಲಿ ಬರಬೇಕಮ್ಮಾ… ಇನ್ನೆಲ್ಲಿ ಬರಬೇಕಮ್ಮಾ..!

ಮನಗೆದ್ದ ಮನ್ಮಥ
ಕುದುರೆ ಏರಿ ಬಂದಂತೆ
ಪ್ರೀತೀಲಿ ಮನವೊಲಿಸಿ
ಕರೆದು ಕೊಂಡು ಹೋದಂತೆ

ಅಯ್ಯೋ!… ಹುಚ್ಚು ಮೂಳಿ ನಾನು
ಇಲ್ಲದ್ದ ಅಂದು ಕೊಂಡೆ
ಈಗೆಷ್ಟು ಸಂಕಟ ನೋಡು.

ಹೆಣ್ಣು ಮಕ್ಕಳೆಂದರೆ
ಸಾಕಿದ ದನಗಳಿವರಿಗೆ
ಕೊಟ್ಟಲ್ಲಿಗೆ ಹೋಗಬೇಕು
ಕಂತೆ ಒಗೆಯೋತನಕ ಕತ್ತೆ ಚಾಕರಿ ಮಾಡಬೇಕು,
ಈ ಹಾಳು ಮನಸ್ಸೊಂದಿಲ್ಲದಿದ್ದು
ತಿಂದುಂಡು ಓಡಾಡುವುದೇ ಬದುಕಾಗಿದ್ದಿದ್ದರೇ…
ಎಂಗಿರುತಿತ್ತೊ ಏನೋ!
ಮಕ್ಕಳಿಲ್ಲದಿದ್ದರೇನು?
ಜಗವು ಕುವುಚಿ ಕೊಳ್ಳುವುದೇ?
ಹೀಗೆ ಎಳೆಪ್ರಾಯದ ಹುಡುಗಿಯರ ತಂದು
ಕೊಲೆ ಕೊಡುವುದು ಸರಿಯೆ?

ಯಾರಿಗೋ ಹಡೆದದ್ದಾಯ್ತು
ಯಾರನ್ನೋ ಹುಡುಕೋದಾಯ್ತು
‘ಇದೇ ನೋಡಿ ನಾನು ಬೇಡಿ ಬಂದಿದು’
ನೆಮ್ಮದಿ ಮಾತ್ರ
ಅಂಗೂ ಇಲ್ಲ! ಇಂಗೂ ಇಲ್ಲ!
ಎಷ್ಟೆಷ್ಟೊ ಒದ್ದಾಡ್ತೀನಿ
ಈ ಬದುಕು, ಈ ಮನೆ ನನ್ನದು ಅನ್ನಿಸುವುದೇ ಇಲ್ಲ.

ಹಾಲು ಬಾನ ಉಣ್ಣುವಿರಿ
ಹೆಣ್ಣು ಗಂಡು ಹೆತ್ತಿರುವಿರಿ
ಮೈಮನಸು ನಿಮಗೂ ಇದೆ
ನನ್ನ ಸಂಗತಿ ಹೇಳಿರುವೆ
ಇದಕೆ ನೀವೇನು ಹೇಳುವಿರಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...