ವಂಚಿತೆ

ನಾಳೆ ಬೆಳೆ ಅಂದರೆ….
ಇವತ್ತೇ ಬೆಳೆದೆನಮ್ಮಾ
ಹೆಣ್ಣಾಗಿ ನಿಂತೆನಮ್ಮಾ… ಹೆಣ್ಣಾಗಿ ನಿಂತೆನಮ್ಮಾ.!
ಒಳ್ಳೆದಿರಲಿ ಕೆಟ್ಟದ್ದಿರಲಿ
ಕಾಲ ಎಂಗೆ ನಿಲ್ಲುತ್ತಮ್ಮಾ! ಕಾಲ ಎಂಗೆ ನಿಲ್ಲುತ್ತಮ್ಮಾ!

ಏನೇನೋ ತೊಳಕೆ
ಏನೇನೋ ಕನಸು
ಇನ್ನಂತಾಕಾಲ ಇನ್ನೆಲ್ಲಿ ಬರಬೇಕಮ್ಮಾ… ಇನ್ನೆಲ್ಲಿ ಬರಬೇಕಮ್ಮಾ..!

ಮನಗೆದ್ದ ಮನ್ಮಥ
ಕುದುರೆ ಏರಿ ಬಂದಂತೆ
ಪ್ರೀತೀಲಿ ಮನವೊಲಿಸಿ
ಕರೆದು ಕೊಂಡು ಹೋದಂತೆ

ಅಯ್ಯೋ!… ಹುಚ್ಚು ಮೂಳಿ ನಾನು
ಇಲ್ಲದ್ದ ಅಂದು ಕೊಂಡೆ
ಈಗೆಷ್ಟು ಸಂಕಟ ನೋಡು.

ಹೆಣ್ಣು ಮಕ್ಕಳೆಂದರೆ
ಸಾಕಿದ ದನಗಳಿವರಿಗೆ
ಕೊಟ್ಟಲ್ಲಿಗೆ ಹೋಗಬೇಕು
ಕಂತೆ ಒಗೆಯೋತನಕ ಕತ್ತೆ ಚಾಕರಿ ಮಾಡಬೇಕು,
ಈ ಹಾಳು ಮನಸ್ಸೊಂದಿಲ್ಲದಿದ್ದು
ತಿಂದುಂಡು ಓಡಾಡುವುದೇ ಬದುಕಾಗಿದ್ದಿದ್ದರೇ…
ಎಂಗಿರುತಿತ್ತೊ ಏನೋ!
ಮಕ್ಕಳಿಲ್ಲದಿದ್ದರೇನು?
ಜಗವು ಕುವುಚಿ ಕೊಳ್ಳುವುದೇ?
ಹೀಗೆ ಎಳೆಪ್ರಾಯದ ಹುಡುಗಿಯರ ತಂದು
ಕೊಲೆ ಕೊಡುವುದು ಸರಿಯೆ?

ಯಾರಿಗೋ ಹಡೆದದ್ದಾಯ್ತು
ಯಾರನ್ನೋ ಹುಡುಕೋದಾಯ್ತು
‘ಇದೇ ನೋಡಿ ನಾನು ಬೇಡಿ ಬಂದಿದು’
ನೆಮ್ಮದಿ ಮಾತ್ರ
ಅಂಗೂ ಇಲ್ಲ! ಇಂಗೂ ಇಲ್ಲ!
ಎಷ್ಟೆಷ್ಟೊ ಒದ್ದಾಡ್ತೀನಿ
ಈ ಬದುಕು, ಈ ಮನೆ ನನ್ನದು ಅನ್ನಿಸುವುದೇ ಇಲ್ಲ.

ಹಾಲು ಬಾನ ಉಣ್ಣುವಿರಿ
ಹೆಣ್ಣು ಗಂಡು ಹೆತ್ತಿರುವಿರಿ
ಮೈಮನಸು ನಿಮಗೂ ಇದೆ
ನನ್ನ ಸಂಗತಿ ಹೇಳಿರುವೆ
ಇದಕೆ ನೀವೇನು ಹೇಳುವಿರಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್ಖಾ ಬಿಟ್ಟು ಹೊರಗೆ ಬಾರವ್ವ
Next post ಅಂತರ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…