Home / ಕವನ / ಕವಿತೆ / ಕೊಳ್ಳಿ ದೆವ್ವಗಳು

ಕೊಳ್ಳಿ ದೆವ್ವಗಳು

ಅಯೋಧ್ಯೆಯಲ್ಲಿ ಅಂದು
ಹುಚ್ಚೆದ್ದು ಹರಿದ
ಕೇಸರಿಹೊಳೆಯಲ್ಲಿ
ಕೊಚ್ಚಿ ಹೋದ ಹೆಣಗಳೆಷ್ಟು
ಹೇಳೋ ರಾಮಾ!

ದೇಶದ ನಾಡಿಯಲ್ಲಿ
ಹರಿದ ರಕ್ತದ ಕೆಂಪು
ಮಡುಗಟ್ಟಿ ನಿಂತು
ಹೆಪ್ಪುಗಟ್ಟಿದೆಯಲ್ಲೋ ರಾಮಾ
ಮಂಜುಗಟ್ಟಿದೆಯಲ್ಲೋ!

ಧರ್ಮಲಂಡ
ಭಂಡ ಭಗವಾಗಳು
ಹಚ್ಚಿದ ಕೋಮು ಜ್ವಾಲೆಗೆ
ಬಡವರು ಬೆಂದು
ಹೋದರಲ್ಲೋ ರಾಮಾ
ಭಸ್ಮವಾದರಲ್ಲೋ!

ರಥ ಹತ್ತಿ, ಕೊಳ್ಳಿ ಹಿಡಿದು,
ತಲೆ ಮೇಲೆ ಕೆರ ಹೊತ್ತು
ಕರಸೇವೆ ಮಾಡಿದ ಇವರು
ನಿನ್ನ ಮುಖಕ್ಕೇ
ಮಸಿ ಬಳಿದರಲ್ಲೋ ರಾಮಾ
ನಿನ್ನ ತಲೆ ತಗ್ಗಿಸಿದರಲ್ಲೋ!

ದೇಶದುದ್ದಕ್ಕೂ ಬಿದ್ದ
ಹೆಣ ರಾಶಿಗಳ ಮೇಲೆ
ನಿನ್ನನೇ ಕೂಡಿಸಿ,
ಕುಣಿದಾಡಿದರಲ್ಲೋ ರಾಮಾ
ಇವರು ಕೊಳ್ಳಿದೆವ್ವಗಳೋ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...