ಸ್ವಾಮಿ ಬಾರೊ

ಸ್ವಾಮಿ ಬಾರೊ ನಿಸ್ಸೀಮ ಬಾರೊ ಶಿವ ಕಂದ ಬಾರೊ ಬಾರೊ
ಜಗದ ಕೀರ್ತಿ ಕಾರ್ತೀಕ ಬಾರೊ ಜಗದಂಬೆ ಕುವರ ಬಾರೊ || ೧ ||

ಕೊರಡು ಚಿಗುರಿ ಕವಲಾಗಿ ಜೀವಸೆಲೆ | ಎಲೆ ಹೂವು ಹಣ್ಣು ಬರಲಿ
ಬರಡು ಭೂಮಿ ಹಸಿರಾಗಿ ಉಸಿರಿಸಲಿ | ಕುಸುರುಕಾಳು ತರಲಿ || ೨ ||

ಶವದಿ ಜೀವ ಉಸಿರಾಡಿ ಓಡಿ | ಚೈತನ್ಯ ಚೆಲುವು ನಗಲಿ
ಜಡದ ಒಡಲು ಬಡಿದೆಬ್ಬಿಸಿದೊಲು ತಾ | ಶಕ್ತಿ ಚಿಲುಮೆ ಉಗಲಿ || ೩ ||

ಶೀತ ಭೀತ ಸಾಗರದಿ ಉರಿಯು | ಅರಿವಾಗಿ ಹೊತ್ತಿಕೊಳಲಿ
ಬರಿಯ ಬಾನಿನಲಿ ಸತ್ಯದರ್ಶನದ | ಭವನ ಕಳಶ ನಿಲಲಿ || ೪ ||

ಕೂಸು ಕುನ್ನಿಗಳು ಪ್ರಬಲವಾಗಲಿ | ಬಡವ ವಡಬನಾಗಿ
ಇಹದ ಸುಖಕೆ ಬಾಯ್ಬಿಡುವ ಯುಕ್ತಿ ತಾ | ಚಿರದ ಭಕ್ತಿಯಾಗಿ || ೫ ||

ಸತ್ತ ಸತ್ಯ ಧರ್ಮಗಳು ಹೊಸ ಬೆಳಕ | ದೀಪವಾಗಿ ಬರಲಿ
ಮಿಥ್ಯವಾದ ಮಲಿನತೆಯು ಕೊಳಕು | ಅದಕೆಣ್ಣೆಯಾಗುತಿರಲಿ || ೬ ||

ಬದ್ಧ ಬುದ್ಧಿಯದು ಮುಕ್ತವಾಗಿ | ಸ್ವಾತಂತ್ರ್ಯ ಸಿದ್ಧಿಯಾಗಿ
ಕಿರಿಯ ಹೃದಯಗಳು ವಿಶ್ವದಗಲ | ಬಾಂಧವ್ಯ ಭವ್ಯವಾಗಿ || ೭ ||

ಶಕ್ತಿ ದಂಡ ಸ್ಪರ್ಶನಕೆ ಸೃಷ್ಟಿಯಲಿ | ಆನಂದ ಚೆಂದ ಚಿಮ್ಮಿ
ನಿನ್ನ ಕೃಪೆಯ ಕಡೆಗಣ್ಣದೃಷ್ಟಿ | ಹರಿಸುತ್ತ ಬಾರೊ ಸ್ವಾಮಿ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೊಲೀವಿಯಾದಲ್ಲಿ ಚೆ
Next post ಹಿಂದೂಮುಸಲ್ಮಾನರ ಐಕ್ಯ – ೬

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…