ಶ್ರೀಮಂತ

ಅವನೊಬ್ಬ ರಾಜಕೀಯ ಪುಢಾರಿ, ಮಂತ್ರಿಪದವಿಯಲ್ಲಿ ಸಂಪಾದಿಸಿದ ಕೋಟಿ ಕೋಟಿ ಹಣದ ಅಪಾರ ಸಂಪತ್ತು ಇತ್ತು. ಚಿನ್ನ, ಬೆಳ್ಳಿ, ಅಲ್ಲದೆ ತನ್ನದೇ ಆದ ಹೆಲಿಕ್ಯಾಪ್ಟರ್‌, ಸ್ವಂತ ವಿಮಾನ ಇಟ್ಟು ಕೊಂಡಿದ್ದ. ಅವನ ಹುಟ್ಟಿದ ಹಬ್ಬಕ್ಕೆ ಅತ್ಯಂತ ಬೆಲೆಬಾಳುವ ಚಪ್ಪಲಿ ಕೊಳ್ಳಲು ದೊಡ್ಡ ದೊಡ್ಡ ನಗರಗಳನ್ನು ಸುತ್ತಿ ಬಂದ. ಹುಟ್ಟಿದ ಹಬ್ಬದ ಊಟಕ್ಕೆ ನೂರಾರು ಭಕ್ಷ ಭೋಜ್ಯಗಳನ್ನು ತಯಾರು ಮಾಡಿಸಿ ಒಂದೊಂದು ಖಾದ್ಯವನ್ನು ಒಬ್ಬರಿಗೆ ತಿನ್ನಲು ಕೊಟ್ಟು ನಂತರ ತಾನು ತಿನ್ನುತಿದ್ದ. ಎಲ್ಲರು ಅವನನ್ನು ಉದಾರಿ, ದಾನಿ ಎಂದುಕೊಂಡರು. ಆದರೆ ದೂರದಲ್ಲಿ ನಿಂತಿದ್ದ ಓರ್ವ “ಆತನಿಗೆ ವಿಷಪೂರಿತ ಆಹಾರದ ಭಯ. ಬೇರೆಯವರು ಸತ್ತರೆ ಪರವಾಗಿಲ್ಲ, ತಾನು ಸಾಯಬಾರದೆಂಬ ಸ್ವಾರ್ಥಿ, ಕಟುಕ” ಎಂದು ಪಿಸುಗುಟ್ಟಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟಿದವರು
Next post ಕರುಣೆ ತೋರು ನೀನೆನಗೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…