ಬ್ಯಾಸೀಗಿ ಬಲುಕೆಟ್ಟ

ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ
ಮುನಿಪಾಲಿಟಿ ನೀರು ಅಡಮುಟ್ಟ
ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ
ನಳದಾಗ ನಿಂತೋರ ಗತಿಕೆಟ್ಟ ||೧||

ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ
ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ
ಗ್ಲಾಸು ನೀರಿಗಿ ಪಾವ್ಲಿ ಕೊಡಪಾನ ರೂಪಾಯಿ
ಚಾದಂಗ್ಡಿ ಬಿಲ್ಲೀನ ಗುಲ್ಲಿಲ್ಲ ||೨||

ಅಬ್ಬರದ ಮಳಿಯಾಗ ಉಬ್ಬರದ ತೆರಿಯಾಗ
ಗಂಡಸರು ನೆರತಾರ ಕುಂತಾರ
ಹುಡಿಗೇರು ಹೌಹಾರಿ ವಲಿಕೆಂಡ ಕಾಸ್ಯಾರ
ಕೌದ್ಯಾಗ ನಕ್ಕಾರ ಮುದಿಕ್ಯಾರ ||೩||

ಹೊಳಿಯಾಗ ಹೊಸನೀರು ಹಿಗ್ಹಿಗ್ಗಿ ಬಂದೈತೊ
ಕೆರಿಯಾಗಿ ಕರ್‍ಲೆಲ್ಲ ಕರಗೈತೊ
ಹೊಲತುಂಬ ದೊಡಪೆಂಟಿ ಬೆಣ್ಯಾಗಿ ಬಿಚ್ಚೈತೊ
ರೈತ ರಾಯನ ಕಣ್ಣು ಅರಳೈತೊ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು?
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೧

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…