ಬ್ಯಾಸೀಗಿ ಬಲುಕೆಟ್ಟ

ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ
ಮುನಿಪಾಲಿಟಿ ನೀರು ಅಡಮುಟ್ಟ
ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ
ನಳದಾಗ ನಿಂತೋರ ಗತಿಕೆಟ್ಟ ||೧||

ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ
ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ
ಗ್ಲಾಸು ನೀರಿಗಿ ಪಾವ್ಲಿ ಕೊಡಪಾನ ರೂಪಾಯಿ
ಚಾದಂಗ್ಡಿ ಬಿಲ್ಲೀನ ಗುಲ್ಲಿಲ್ಲ ||೨||

ಅಬ್ಬರದ ಮಳಿಯಾಗ ಉಬ್ಬರದ ತೆರಿಯಾಗ
ಗಂಡಸರು ನೆರತಾರ ಕುಂತಾರ
ಹುಡಿಗೇರು ಹೌಹಾರಿ ವಲಿಕೆಂಡ ಕಾಸ್ಯಾರ
ಕೌದ್ಯಾಗ ನಕ್ಕಾರ ಮುದಿಕ್ಯಾರ ||೩||

ಹೊಳಿಯಾಗ ಹೊಸನೀರು ಹಿಗ್ಹಿಗ್ಗಿ ಬಂದೈತೊ
ಕೆರಿಯಾಗಿ ಕರ್‍ಲೆಲ್ಲ ಕರಗೈತೊ
ಹೊಲತುಂಬ ದೊಡಪೆಂಟಿ ಬೆಣ್ಯಾಗಿ ಬಿಚ್ಚೈತೊ
ರೈತ ರಾಯನ ಕಣ್ಣು ಅರಳೈತೊ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು?
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೧

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…