ದಿನವಿಡೀ
ಮೈಮನಗಳನ್ನು ದುಡಿಸಿ
ಗೋಲಾಕಾರದ ಶೂನ್ಯದೊಂದಿಗೆ
ಹೊರಲಾಗದ ಬೇಗುದಿಯನ್ನು
ಹೊರುತ್ತ
ಮನೆ ಮುಟ್ಟುವಾಗ
ಮನ ಮುಟ್ಟುವ ನಿನ್ನ
ಸ್ವಾಗತದ ಮುಸಿ ನಗೆಯಲಿ
ಪ್ರೇಯಸಿಯ ಕಾತುರವನ್ನು ಕಂಡು
ರಿಕ್ತ ಕರವನ್ನು ನಿನ್ನ ನಡುವಿನ ಸುತ್ತ ಬಳಸಿ
ಹತ್ತಿರಕ್ಕೆ ಎಳೆಯುತ್ತ
ಸೋಫಾಗೆ ಒರಗಿ ಕಾಲು ಚಾಚಿ
ನಿನ್ನ ಸುಂದರ ನಯವಾದ
ಘನ ಹೆರಳನ್ನು ಬಿಡಿಸಿ ಹರಡಿ
ಅದರ ಮೇಲೆ ಕದಪನಿರಿಸಿ
ದುಮ್ಮಾನವನ್ನು ಹೊರಹಾಕುವ
ನಿನ್ನ ನಾಜೂಕು ಬೆರಳುಗಳಲ್ಲಿ
ನನ್ನ ತತ್ವರ ಬೆರಳುಗಳು ಸೇರಿಕೊಂಡು
ತುಸು ಹೊತ್ತು ಕ್ರೀಡಿಸುವಾಗ
‘ಇಂದಿನ ಸುದ್ದಿಯೇನೆಂದು’
ನೀನು ಕೇಳುತ್ತಿ, ನಾನು
ದಾದರಿನವರೆಗೂ ನನ್ನ ಜೊತೆ
ಬಸ್ಸಿನಲ್ಲಿ ಕುಳಿತ
ಸುಂದರ ನೀರೆಯ
ತುಂಟ ವಿವರಗಳ ಜಾಲದಲ್ಲಿ ಮರೆತು
ಆಟದಲ್ಲಿ ಮಗ್ನ ಕರಗಳನ್ನು
ಎದೆಗೊತ್ತಿ
ಮನಸ್ಸನ್ನು ಹಗುರವಾಗಿಸುವ
ಉಸಿರನ್ನು ಬಿಡುತ್ತ
ಕಣ್ಣು ತೆರೆವಾಗ
ಎದುರಿನ ಕಿಟಕಿಯ ಜಾಲಿಯಿಂದ
ದೂರಕ್ಕೆ ಹರಡಿರುವ ಆಕಾಶ
ಕಾಣಿಸುತ್ತದೆ.
ಆಗ ಒಮ್ಮೆಲೆ ನೆಲ ಮುಗಿಲುಗಳ
ದಟ್ಟ ಅಂತರದ ಅರಿವಾಗಿ
ಮನಸ್ಸು ಒಳಗೆಳೆದುಕೊಂಡು
ಅಂತರವನ್ನು ಅಳೆಯುವ
ಸೀಮಾ ರೇಖೆಯನ್ನು
ಹುಡುಕ ತೊಡಗುತ್ತದೆ.
*****
Related Post
ಸಣ್ಣ ಕತೆ
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಮಂಜುಳ ಗಾನ
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…