ಸಾಗಿದ ದಾರಿ

ಹುಟ್ಟಿದ ಊರು ತೊರೆದು
ಸಾಗಿಹೆನು ದೂರದ ನಾಡಿಗೆ..
ಕಾಡಿನ ಮಡಿಲ ಮಧ್ಯದಿ…
ಬೆರೆತು-ಬಾಳಬೇಕಾಗಿದೆ

ತಂದೆ-ತಾಯಿ-ಬಳಗ
ಪ್ರೀತಿ-ಸೆಲೆಯ-ನೆಲೆಯ
ಒಡನಾಡಿ… ಬಂಧುಗಳೆಲ್ಲಾ
ತೊರೆದು ದೂರ ಬಂದಿಹೆನು
ನೋವಲಿ ಮನ ಕುದಿಯುತಿಹದು

ಹೊಸತನದ ಹರುಷ
ಕಳೆದ ಬಾಲ್ಯದ ನೆನಪು
ಜೀವನದಾಟದ ಗೆಲುವು ಈ ಕಡೆ
ಬದುಕಿನ ನಲಿವು ಆ ಕಡೆ

ನೆಲ-ಭಾಷೆಗಳ ಹೊಸತನದ
ಏಕಾಂತದ-ಬಲೆಯಲಿ
ಹೃದಯದಾಳದಿ ಮೀಟುವ
ನೆನಪಿನಲೆಯು ನೋವಾಗಿ
ತನು-ಮನ ಮಂಕಾಗಿಸುತಿಹದು

ಬದುಕಿನ ದೂರದಲ್ಲೊಂದು
ಮಿನುಗುತಿಹದು ಆಶಾಕಿರಣ
ಎಚ್ಚರಿಸುತಿಹದು ಇದು ಮಂಕಲ್ಲ
ಜೀವನದ ಗೆಲುವು ಎಂದು

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೫
Next post ನಗೆ ಡಂಗುರ – ೧೬

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…