ನೂರು ಜನ್ಮದಲ್ಲೂ ನನಗೆ

ನೂರು ಜನ್ಮದಲ್ಲೂ ನನಗೆ
ನೀನೇ ತಾಯಿ ಯಾಗಬೇಕೆಂಬಾಸೆ
ನನ್ನ ಮನದಿ ಪ್ರಕಟವಾಗಿದೆ|
ಪ್ರತಿ ಜನ್ಮದಲ್ಲೂ
ನೂರು ವರುಷ ಬಾಳಬೇಕೆಂಬುದೇ
ನನ್ನಾಸೆಯಾಗಿದೆ|
ನಿನ್ನ ಕಂದನಾಗಿ ಜನಿಸಿ ಸದಾ
ಕನ್ನಡದ ಸೇವೆ ಮಾಡುವಾಸೆ
ಮನದಿ ತುಂಬಿ ಹರಿದಿದೆ||

ಈ ನೆಲ ಜಲದ ಸತ್ವಹೀರಿ
ವಿಶಾಲವಾಗಿ ಬೆಳೆದು ನಿಂತು
ನೂರಾರು ಕನ್ನಡಿಗರಿಗೆ ಆಸರೆ
ನೀಡುವಾಸೆಯಾಗಿದೆ|
ಕನ್ನಡದ ಕಂಪ ಹೀರಿ ಬೆಳೆದು
ಪ್ರತೀ ಜನುಮ ಜನುಮದಲ್ಲೂ
ಕನ್ನಡ ಕೀರ್ತಿ ಬೆಳೆಗುವಾಸೆಯಾಗಿದೆ||

ಯವಜನರ ಧಮನಿಧನಿಯಲಿ
ಕನ್ನಡತನದ ರೋಮಾಂಚನ ತುಂಬಿ
ಮುನ್ನಡೆಸೋ ಆಸೆಯಾಗಿದೆ|
ನಮ್ಮಲ್ಲಿರುವ ಭೇದ ಭಾವನಳಿಸಿ
ಒಟ್ಟಿಗೆ ಬಾಳುವುದ ಶಕ್ತಿ ತಿಳಿಸಿ|
ಎನೇ ಕಷ್ಟ ಬಂದರೂ ಭಾಷೆಗೆ
ಎದುರಿಸಿ ಜಯವ ತಂದುಕೊಡುವ
ಭಾಷೆ ತೊಡುವಾಸೆಯಾಗಿದೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊರಗು
Next post ಏನು ಕಾಲ!

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys