ನೂರು ಜನ್ಮದಲ್ಲೂ ನನಗೆ

ನೂರು ಜನ್ಮದಲ್ಲೂ ನನಗೆ
ನೀನೇ ತಾಯಿ ಯಾಗಬೇಕೆಂಬಾಸೆ
ನನ್ನ ಮನದಿ ಪ್ರಕಟವಾಗಿದೆ|
ಪ್ರತಿ ಜನ್ಮದಲ್ಲೂ
ನೂರು ವರುಷ ಬಾಳಬೇಕೆಂಬುದೇ
ನನ್ನಾಸೆಯಾಗಿದೆ|
ನಿನ್ನ ಕಂದನಾಗಿ ಜನಿಸಿ ಸದಾ
ಕನ್ನಡದ ಸೇವೆ ಮಾಡುವಾಸೆ
ಮನದಿ ತುಂಬಿ ಹರಿದಿದೆ||

ಈ ನೆಲ ಜಲದ ಸತ್ವಹೀರಿ
ವಿಶಾಲವಾಗಿ ಬೆಳೆದು ನಿಂತು
ನೂರಾರು ಕನ್ನಡಿಗರಿಗೆ ಆಸರೆ
ನೀಡುವಾಸೆಯಾಗಿದೆ|
ಕನ್ನಡದ ಕಂಪ ಹೀರಿ ಬೆಳೆದು
ಪ್ರತೀ ಜನುಮ ಜನುಮದಲ್ಲೂ
ಕನ್ನಡ ಕೀರ್ತಿ ಬೆಳೆಗುವಾಸೆಯಾಗಿದೆ||

ಯವಜನರ ಧಮನಿಧನಿಯಲಿ
ಕನ್ನಡತನದ ರೋಮಾಂಚನ ತುಂಬಿ
ಮುನ್ನಡೆಸೋ ಆಸೆಯಾಗಿದೆ|
ನಮ್ಮಲ್ಲಿರುವ ಭೇದ ಭಾವನಳಿಸಿ
ಒಟ್ಟಿಗೆ ಬಾಳುವುದ ಶಕ್ತಿ ತಿಳಿಸಿ|
ಎನೇ ಕಷ್ಟ ಬಂದರೂ ಭಾಷೆಗೆ
ಎದುರಿಸಿ ಜಯವ ತಂದುಕೊಡುವ
ಭಾಷೆ ತೊಡುವಾಸೆಯಾಗಿದೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊರಗು
Next post ಏನು ಕಾಲ!

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…