ಏನು ಕಾಲ!

ಹರಿಯೆ ನಿನ್ನ ನೆನಪು ಬಾರದೆ
ಕಳೆದವೂ ಏಸು ಕಾಲ
ಜನುಮ ಜನುಮವು ಹೀಗೆ ನಾ
ಮಾಡಿದೆ ಕರ್ಮಗಳ ಸಾಲ

ಆಸೆಗಳ ಹಿಂದೆ ಓಡೋಡಿ ನಾನು
ನನ್ನ ಸಾರ್ಥಕತೆ ನಾಮರೆತೆ
ಬಾಳೆಲ್ಲವೂ ಹೀಗೆ ಯಾರಿಗೊ ಸೋರಿ
ಮಾಯಾ ಮೋಹದಲಿನಾ ಬೆರೆತೆ

ಸುಖದ ಪರಿಛಾಯೆ ಇಲ್ಲದ ಸುಖವೆ
ಸುಖದ ಲಾಲಸೆಗೆ ಏಸೊಂದು ಕುಯುಕ್ತಿ
ನಾನು ನನ್ನದೆಂಬ ಭ್ರಾಂತಿಯಲಿ ಕರಗಿ
ನಿತ್ಯ ಹೋರಾಟದಲಿ ಮರೆತೆ ಭಕ್ತಿ

ಈಗೊಂದು ಚಣವು ಜಾರದಿರಲಿ
ಅದು ನಿನಗಾಗಿ ಮೀಸಲಾಗಿರಲಿ
ಭಾವಗಳ ತುಂಬ ತುಂಬಲಿ ನಿನ್ನ ಧ್ಯಾನ
ಮಾಣಿಕ್ಯವಿಠಲನಿಗೆ ನೀ ಕೈಲಾಸವಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂರು ಜನ್ಮದಲ್ಲೂ ನನಗೆ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೫ನೆಯ ಖಂಡ – ಪ್ರತಿಕೂಲತೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys