ನಿನ್ನ ಧಿಕ್ಕರಿಸಿದ ತರ್ಕ

ನಿನ್ನ ಧಿಕ್ಕರಿಸಿದ ತರ್ಕಕ್ಕೆ
ಮೊನ್ನೆ ಕಾಲು ಮುರಿಯಿತು
ಬಗ್ಗಿ
ಕೈ ಮುಗಿದು ಹೇಳಿತು
“ನಾ ತುಳಿಯದ ನೆಲವಿದೆ,
ಕುಡಿಯದ ಗಾಳಿ ನೀರು,
ಅರಿಯದ ನೆಲೆ ಇವೆ.
ಅವಕ್ಕೆ
ಬಗೆ ಬಗೆ ಬೆಲೆ, ಬೇರು.
ಅಲ್ಲೆಲ್ಲ ಹೋಗಿ ಬಾ,
ನಿಧಾನ ಆಗಿ ಬಾ,
ಹುಗಿದ ಕೊಪ್ಪರಿಗೆಗಳನ್ನು
ಹಗಲಿಗೆ ತಾ.”

ಸದ್ಯ
ಕೈಕೋಲು ಕೊಲ್ಲುವ ಬಡಿಗೆಯಾಗದ್ದಕ್ಕೆ.
ನಮಿಸಿದೆ.
ಹೆಡಿಗೆ ಹೊತ್ತಾಗಲೇ ನಡಿಗೆ ಕುಂಟಿತ್ತು. ಇರಲಿ
ಎತ್ತಿದ ಹೆಡೆಯಲ್ಲೇ
ರತ್ನದ ಬೆಳಕು ಸಿಕ್ಕು
ಕುಂಟುತ್ತಲೇ ಸುತ್ತುವೆ ಹೆಳವ
ಕಾಣದ ನೆಲವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮ್ಮನೆಂದರದು ಸಾವಯವವಾದೀತೇ ?
Next post ಎಲ್ಲಿಗೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys