ಚೆಲುವು

ಅದೋ!
ಅಲ್ಲಿಹುದು ಹೂವು
ಅಂತಿಂತಹ ಹೂವಲ್ಲವದು, ತಾವರೆ ಹೂವು.
ತನ್ನಂದದಿಂದೆಲ್ಲರ ಸೆಳೆವುದಿದು
ಸಹಸ್ರ ಪತ್ರದ ಸುರಮ್ಯ ಹೂವು.
ದೂರದಿಂದ ನೋಡಿದರೆ ಬಲು ರಮ್ಯ
ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು
ಬಳಿಗೆ ಹೋದರೆ ಮುಖವ ಮುಚ್ಚುವುದು!
ಅದರಂದ ಕಂಡು ಓಡೋಡಿ ಬರುವುದು
ದುಂಬಿಗಳ ಹಿಂಡು.
ಮಧು ರಸ ಹೀರುತ್ತಾ ಮೈ ಮರೆತಿದೆ ದುಂಬಿ
ಹೂ ಮೊಗವ ಮುಚ್ಚಿದರೂ ತಿಳಿಯದಾ ದುಂಬಿ.
ಅರೆ! ಏನಿದು ಉಸಿರು ಕಟ್ಟುತ್ತಿದೆ?
ಪ್ರಾಣ ಹೋದರೂ ಸರಿಯೇ ಹೂವಿನಾ ಮಡಿಲಿನಲಿ.
ಇಂತಹ ದುಂಬಿಗಳೆಷ್ಟೋ?!
ಹೂವಿಗಿದು ಆಟ ಚೆಲ್ಲಾಟ
ದುಂಬಿಗೆ ಪ್ರಾಣ ಸಂಕಟ
ಆದರೂ ಆಸೆ, ಚಪಲ!
ಇದರಲ್ಲಿ ಬಿದ್ದು ಸತ್ತ ದುಂಬಿಗಳೆಷ್ಟೋ?
ದೂರದಿಂದ ಚೆಲುವ ಕಂಡು
ಓಡಿ ಬಂದು ಕೈಲಿ ಹಿಡಿದರೆ,
ಥೂ ಎಂಥ ಕೊಳಕು
ಒಳಗೆಲ್ಲಾ ಬರಿಯ ಹುಳುಕು
ಇದಿರುವುದೋ ಕೊಚ್ಚೆಯಲಿ
ಛೇ, ನಾನೇಕೆ ಬಂದೆ ಈ ಹೂವ ನೋಡಿ.
ಇದರಿಂದ ದೂರಕ್ಕೆ ಹೋಗುವೆನು ಓಡಿ.
*****
೧೦-೦೪-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ..
Next post ಚೆಲುವೆ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…