ಚೆಲುವು

ಅದೋ!
ಅಲ್ಲಿಹುದು ಹೂವು
ಅಂತಿಂತಹ ಹೂವಲ್ಲವದು, ತಾವರೆ ಹೂವು.
ತನ್ನಂದದಿಂದೆಲ್ಲರ ಸೆಳೆವುದಿದು
ಸಹಸ್ರ ಪತ್ರದ ಸುರಮ್ಯ ಹೂವು.
ದೂರದಿಂದ ನೋಡಿದರೆ ಬಲು ರಮ್ಯ
ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು
ಬಳಿಗೆ ಹೋದರೆ ಮುಖವ ಮುಚ್ಚುವುದು!
ಅದರಂದ ಕಂಡು ಓಡೋಡಿ ಬರುವುದು
ದುಂಬಿಗಳ ಹಿಂಡು.
ಮಧು ರಸ ಹೀರುತ್ತಾ ಮೈ ಮರೆತಿದೆ ದುಂಬಿ
ಹೂ ಮೊಗವ ಮುಚ್ಚಿದರೂ ತಿಳಿಯದಾ ದುಂಬಿ.
ಅರೆ! ಏನಿದು ಉಸಿರು ಕಟ್ಟುತ್ತಿದೆ?
ಪ್ರಾಣ ಹೋದರೂ ಸರಿಯೇ ಹೂವಿನಾ ಮಡಿಲಿನಲಿ.
ಇಂತಹ ದುಂಬಿಗಳೆಷ್ಟೋ?!
ಹೂವಿಗಿದು ಆಟ ಚೆಲ್ಲಾಟ
ದುಂಬಿಗೆ ಪ್ರಾಣ ಸಂಕಟ
ಆದರೂ ಆಸೆ, ಚಪಲ!
ಇದರಲ್ಲಿ ಬಿದ್ದು ಸತ್ತ ದುಂಬಿಗಳೆಷ್ಟೋ?
ದೂರದಿಂದ ಚೆಲುವ ಕಂಡು
ಓಡಿ ಬಂದು ಕೈಲಿ ಹಿಡಿದರೆ,
ಥೂ ಎಂಥ ಕೊಳಕು
ಒಳಗೆಲ್ಲಾ ಬರಿಯ ಹುಳುಕು
ಇದಿರುವುದೋ ಕೊಚ್ಚೆಯಲಿ
ಛೇ, ನಾನೇಕೆ ಬಂದೆ ಈ ಹೂವ ನೋಡಿ.
ಇದರಿಂದ ದೂರಕ್ಕೆ ಹೋಗುವೆನು ಓಡಿ.
*****
೧೦-೦೪-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ ಹುಡುಕುತ್ತಾ ಸಬರಮತಿಯಲ್ಲಿ..
Next post ಚೆಲುವೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys