ಅದೋ!
ಅಲ್ಲಿಹುದು ಹೂವು
ಅಂತಿಂತಹ ಹೂವಲ್ಲವದು, ತಾವರೆ ಹೂವು.
ತನ್ನಂದದಿಂದೆಲ್ಲರ ಸೆಳೆವುದಿದು
ಸಹಸ್ರ ಪತ್ರದ ಸುರಮ್ಯ ಹೂವು.
ದೂರದಿಂದ ನೋಡಿದರೆ ಬಲು ರಮ್ಯ
ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು
ಬಳಿಗೆ ಹೋದರೆ ಮುಖವ ಮುಚ್ಚುವುದು!
ಅದರಂದ ಕಂಡು ಓಡೋಡಿ ಬರುವುದು
ದುಂಬಿಗಳ ಹಿಂಡು.
ಮಧು ರಸ ಹೀರುತ್ತಾ ಮೈ ಮರೆತಿದೆ ದುಂಬಿ
ಹೂ ಮೊಗವ ಮುಚ್ಚಿದರೂ ತಿಳಿಯದಾ ದುಂಬಿ.
ಅರೆ! ಏನಿದು ಉಸಿರು ಕಟ್ಟುತ್ತಿದೆ?
ಪ್ರಾಣ ಹೋದರೂ ಸರಿಯೇ ಹೂವಿನಾ ಮಡಿಲಿನಲಿ.
ಇಂತಹ ದುಂಬಿಗಳೆಷ್ಟೋ?!
ಹೂವಿಗಿದು ಆಟ ಚೆಲ್ಲಾಟ
ದುಂಬಿಗೆ ಪ್ರಾಣ ಸಂಕಟ
ಆದರೂ ಆಸೆ, ಚಪಲ!
ಇದರಲ್ಲಿ ಬಿದ್ದು ಸತ್ತ ದುಂಬಿಗಳೆಷ್ಟೋ?
ದೂರದಿಂದ ಚೆಲುವ ಕಂಡು
ಓಡಿ ಬಂದು ಕೈಲಿ ಹಿಡಿದರೆ,
ಥೂ ಎಂಥ ಕೊಳಕು
ಒಳಗೆಲ್ಲಾ ಬರಿಯ ಹುಳುಕು
ಇದಿರುವುದೋ ಕೊಚ್ಚೆಯಲಿ
ಛೇ, ನಾನೇಕೆ ಬಂದೆ ಈ ಹೂವ ನೋಡಿ.
ಇದರಿಂದ ದೂರಕ್ಕೆ ಹೋಗುವೆನು ಓಡಿ.
*****
೧೦-೦೪-೧೯೭೫
Related Post
ಸಣ್ಣ ಕತೆ
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಹುಟ್ಟು
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
-
ಕನಸುಗಳಿಗೆ ದಡಗಳಿರುದಿಲ್ಲ
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…