Home / ಕವನ / ಕವಿತೆ / ಪಶ್ಚಿಮಘಟ್ಟ

ಪಶ್ಚಿಮಘಟ್ಟ

ಮುತ್ತಿಡುತ ನೀಲಾಗಸಕೆ
ಜಗವ ಬೆರಗುಗೊಳಿಸಿ
ನದಿ-ತೊರೆಗಳ-ಧಾಮ
ಹಸಿರ ಸಿರಿಯ ವೈಯ್ಯಾರದ
ನಿತ್ಯೋತ್ಸವದ ಪಶ್ಚಿಮಘಟ್ಟ

ತುಂಬಿದ ಮಾಲೆಗಳಲ್ಲಿ
ಬೆಟ್ಟಗಳ ಸಾಲು ಬೆಸೆದು
ಹೊದ್ದ ನಿತ್ಯ ಹರಿದ್ವರ್ಣ

ವಾತ್ಸಲ್ಯದ ಮಡಿಲು ಮಾದಾಯಿ
ಮಾತೃ ಒಡಲ ಅಪ್ಪುಗೆಯಲಿ
ಜಲಧಾರೆ ಹರಿಸುತಲಿ
ಜೀವಸೆಲೆಯ ಪರಿಸರಬೀಡು

ಕಂಗೆಟ್ಟ ಕಾನನ ರೋಧಿಸುತಿಹದು
ಬಾಳು-ಬದುಕಿನ ಪ್ರಶ್ನೆಗೆ
ಉತ್ತರ ಕಾಣದ ಒಡಲ-ಮಡಿಲು
ಉಳಿವಿಗಾಗಿ ವನಸಿರಿಯು ಬಳಲುತಿಹದು

ಮಾದಾಯಿ ಯೋಜನೆಗಾಳದಿ…
ಶತ-ಶತಮಾನಗಳ ಸಾಕ್ಷಿಯ
ನೆರಳಾಗಿರುವ ಹಸಿರು ಜೀವನೆಲೆ
ಬರಡಾಗಿಸುತಿಹ ವಿಜ್ಞಾನ ಸವಾರಿಯ
ಬಾಹುಗಳ ಹಿಡಿತದ ಬ್ರಹ್ಮರಾಕ್ಷಸ

ಆಧುನಿಕತೆಯ ಆಕ್ಟೋಪಸ್
ಜಾಗತೀಕರಣದ ಬಂದಿಯಾಗಿ
ಅಣೆಕಟ್ಟು, ರಸ್ತೆ, ಪೋಕ್ರಾನಗಳ
ವಿಷದಾಳದ ಆಳದಿ ಕುಬ್ಜರಾಗಿಹರು

ಮನುಕುಲದ ಕಣ್ಣಾಗಿ
ಒಡಲ ತೃಷೆ ತಣಿಸುವ
ಭೂದೇವಿಯ ಸಿರಿಗೆ ಬೆಂಕಿಯಿಡಲು
ಮಾದಾಯಿ ಯೋಜನೆ ಕೊಳ್ಳಿ ಹಿಡಿದಿಹರು

ಮೆದುಳಿರದ ಮಾನವ
ಮಂಕುತನದ ಹೃದಯ ಹೀನತೆಗೆ
ಮೌನ ಧಿಕ್ಕಾರದಿ-ಕಾಡೆಲ್ಲಾ ಕೂಗುತ
ಮನುಕುಲದಳಿವು ಕನಸಲಿ ಕಾಣುತ
ಮೌನದಿ ಕೊರಗುತ ಮಲುಗಿಹಳು

*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...