ತಪ್ಪಾಯ್ತು ನನದೂ

ತಪ್ಪಾಯ್ತು ನನ್ನದೂ
ಶಾಶ್ವತವಲ್ಲದ ಪ್ರೀತಿಯ
ನೆನೆದು ಇಹದ ಮೋಹ
ದಲ್ಲಿ ಬೆಸೆದು ನೊಂದನೂ
ಗುರುವೇ ದಾರಿ ತೋರೆನಗೆ

ಅವನಿಲ್ಲದ ಹಾಡು ಪಾಡು
ಇವನಿಲ್ಲದ ಕಡಲು ನಿನ್ನ
ಅಭಯ ಕಡಲ ದೋಣಿಯಲಿ
ನಾನು ದಡವ ಸೇರಿಸು
ಗುರುವೇ ದಾರಿ ಕಾಣಿಸೂ

ಅವನೊಂದು ಬಣ್ಣದ
ಕೊಡ ಬಣ್ಣಗಳ ಸೇರಿಸಿ
ಆಸೆಗಳಂಬ ಚಿತ್ತಾರ ಬರೆದೂ
ಚಿತ್ತಾರದ ಹಕ್ಕಿ ಹಾರಿಸಿಕೊಂಡು
ಹೋಯ್ತು ಅವನ ಗುರುವೇ

ಸಂಜೆ ಮೂಡಿತು ಹಗಲು
ಬೆಳಗಿತು ದಿನದ ಮಧ್ಯೆ
ನೂರು ಸಾವಿರ ಗಣತಿ ಎಣೆಸಲಸದಳವು
ಸಹಸ್ರ ತುಡಿತಗಳ ಹಾಡು
ಮಾತು ಮಾತಾಗಿ ಕತೆ ಆಯ್ತು ಗುರುವೆ

ಕತ್ತಲು ಬೆಳಕಿನಾಟದಲಿ
ಬೆಳಕನು ಹುಡುಕುತಿರುವೆ
ಕಾಣದಾಗಿದೆ ಬೆಳಕಿನ ಕಿರಣ
ಕೈ ಹಿಡಿದೆನಗೆ ನಡೆಸು ಗುರುವೆ
ತಪ್ಪಿನ ಅರಿವ ಕ್ಷಮಿಸು ಗುರುವೆ

ದೀಪಗಳ ಸಾಲು ಭಕ್ತಿಯ
ಕುಸುಮವೂ ನಿನ್ನ ಚರಣಕಮಲ
ದಲಿ ಶಿರವ ಬಾಗಿ ನಮಿಸುವೆನು
ದಾರಿ ಕಾಣಿಸು ಗುರುವೇ
ಬೆಳಕನು ಮುಡಿಸು ಗುರುವೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಿಯುಗಾ ಬಂತು
Next post ಮುಳಗು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys