ಮುಳಗು

ಮೇ ತಿಂಗಳ ಪ್ರಖರ ಬಿಸಿಲು
ಗುಲ್‌ಮೋಹರಿನ ಕೆಂಪು ರಾಚಿ
ಕವಿತೆಗಳು ಸೆಖೆಯಿಂದ ತೊಯ್ದ
ತಪ್ಪಡಿಯಾಗಿ, ತುಸು ನೀರಿನ ಝಳಕಕ್ಕೆ
ಅರಳಿ ಮೆತ್ತಗೆ ನನ್ನ ಕೈ ಸೋಕಿದವು.

ಬೇವಿನ ಮರಕ್ಕೆ ಒಡ್ಡಿ ಮಲಗಿದ ಮುದುಕಿ
ಬಿಸಿಲಲ್ಲಿ ತನ್ನ ಕುಬುಸದ ಗುಂಡಿ ಬಿಚ್ಚಿ
ಅಡ್ಡಾಗಿದ್ದಾಳೆ, ತನ್ನ ಹರೆಯದ ಕನಸುಗಳ
ಮೆರವಣಿಗೆಯ ನೆನಪು ಹೊತ್ತು, ಮತ್ತೆ
ದೂರದಲ್ಲಿ ಎಲ್ಲೋ ಕೋಗಿಲೆ ಕೂಗುತ್ತಿದೆ.
ಹೃದಯ ಕಲುಕಿದೆ.

ಯಾವ ವಿಷಯಗಳೂ ಸಣ್ಣದಲ್ಲ.
ಉರಿ ಬಿಸಿಲಲ್ಲೂ ಬಾಳೇಹಣ್ಣು ಮಾರವವಳು
ನಾಳಿನ ದಿನದ ಲೆಕ್ಕಾಚಾರ ಹಾಕಿ ಓಣಿಯ
ಸುತ್ತುತ್ತಿದ್ದಾಳೆ ಮತ್ತೆ ಕತ್ತು ನೋವಿಗೆ ಬುಟ್ಟಿ ಇಳಿಸಿ
ನೀರು ಕೇಳುತ್ತಿದ್ದಾಳೆ ನಾನು ಜಾಗ್ರತ ಹೊಂದಿದೆ.

ಉಳಿದ ಭಾವಗಳ ಜೀವನ ಅವರಿವರ
ನೆನಪುಗಳ ದಾರಿಯಲಿ ಚಲನೆಯನ್ನು ಮುಂದುವರಿಸಿದೆ.
ನೀಲಿ ಆಕಾಶದಲಿ ಮಳೆ ಬೀಜ ಕಟ್ಟಿದೆ. ರೈತ ಹೊಲ
ರಂಟೇಕುಂಟೆ ಹೊಡೆದು ಹದಗೊಳಿಸಿದ್ದಾನೆ. ಒಂದು
ಪಶ್ಚಾತಾಪ ನನ್ನ ಅಲ್ಲಾಡಿಸಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪ್ಪಾಯ್ತು ನನದೂ
Next post ಜೀವನಕೆ ಕೃಷಿ ಬೇಕಲ್ಲದೆ ಕೊಲೆ ಬೇಕೇ?

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…