ಮುಳಗು

ಮೇ ತಿಂಗಳ ಪ್ರಖರ ಬಿಸಿಲು
ಗುಲ್‌ಮೋಹರಿನ ಕೆಂಪು ರಾಚಿ
ಕವಿತೆಗಳು ಸೆಖೆಯಿಂದ ತೊಯ್ದ
ತಪ್ಪಡಿಯಾಗಿ, ತುಸು ನೀರಿನ ಝಳಕಕ್ಕೆ
ಅರಳಿ ಮೆತ್ತಗೆ ನನ್ನ ಕೈ ಸೋಕಿದವು.

ಬೇವಿನ ಮರಕ್ಕೆ ಒಡ್ಡಿ ಮಲಗಿದ ಮುದುಕಿ
ಬಿಸಿಲಲ್ಲಿ ತನ್ನ ಕುಬುಸದ ಗುಂಡಿ ಬಿಚ್ಚಿ
ಅಡ್ಡಾಗಿದ್ದಾಳೆ, ತನ್ನ ಹರೆಯದ ಕನಸುಗಳ
ಮೆರವಣಿಗೆಯ ನೆನಪು ಹೊತ್ತು, ಮತ್ತೆ
ದೂರದಲ್ಲಿ ಎಲ್ಲೋ ಕೋಗಿಲೆ ಕೂಗುತ್ತಿದೆ.
ಹೃದಯ ಕಲುಕಿದೆ.

ಯಾವ ವಿಷಯಗಳೂ ಸಣ್ಣದಲ್ಲ.
ಉರಿ ಬಿಸಿಲಲ್ಲೂ ಬಾಳೇಹಣ್ಣು ಮಾರವವಳು
ನಾಳಿನ ದಿನದ ಲೆಕ್ಕಾಚಾರ ಹಾಕಿ ಓಣಿಯ
ಸುತ್ತುತ್ತಿದ್ದಾಳೆ ಮತ್ತೆ ಕತ್ತು ನೋವಿಗೆ ಬುಟ್ಟಿ ಇಳಿಸಿ
ನೀರು ಕೇಳುತ್ತಿದ್ದಾಳೆ ನಾನು ಜಾಗ್ರತ ಹೊಂದಿದೆ.

ಉಳಿದ ಭಾವಗಳ ಜೀವನ ಅವರಿವರ
ನೆನಪುಗಳ ದಾರಿಯಲಿ ಚಲನೆಯನ್ನು ಮುಂದುವರಿಸಿದೆ.
ನೀಲಿ ಆಕಾಶದಲಿ ಮಳೆ ಬೀಜ ಕಟ್ಟಿದೆ. ರೈತ ಹೊಲ
ರಂಟೇಕುಂಟೆ ಹೊಡೆದು ಹದಗೊಳಿಸಿದ್ದಾನೆ. ಒಂದು
ಪಶ್ಚಾತಾಪ ನನ್ನ ಅಲ್ಲಾಡಿಸಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪ್ಪಾಯ್ತು ನನದೂ
Next post ಜೀವನಕೆ ಕೃಷಿ ಬೇಕಲ್ಲದೆ ಕೊಲೆ ಬೇಕೇ?

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…