Home / ಕವನ / ಕವಿತೆ / ಅಮ್ಮನ ತೊರೆದು ನಾವೆಲ್ಲ

ಅಮ್ಮನ ತೊರೆದು ನಾವೆಲ್ಲ

ಅಮ್ಮನ ತೊರೆದು ನಾವೆಲ್ಲ
ಬದುಕುವ ಶಕ್ತಿ ನಮಗಿಲ್ಲ
ಅವಳ ಉಸಿರಲಿ ಉಸಿರಾಗಿ
ಬಾಳು ಬದುಕುವೆವು ನಾವೆಲ್ಲ ||

ಅಮ್ಮನ ರೀತಿಯೆ ಆ ಸಿಂಧು
ಗಂಗೆ ಯಮುನೆ ಕಾವೇರಿ ತುಂಗೆ ಭದ್ರೆ
ನಮ್ಮಯ ಬಾಳಿಗೆ ಆಧಾರವು
ನಮ್ಮನ್ನು ಸಲಹುವ ತಾಯಿಯರು ||

ಜಾತಿ ಭೇದಗಳು ನಮಗಿಲ್ಲ
ಅಮ್ಮನ ಮಡಿಲ ಹೂವುಗಳು
ಕನ್ನಡ ತಾಯಿಯ ಕುಲಜರು
ಒಂದೇ ತಾಯಿ ಮಕ್ಕಳು ||

ಸತ್ಯ ಧರ್ಮಗಳೆ ನಿತ್ಯ ಕರ್ಮ
ನೀತಿ ನ್ಯಾಯಗಳೇ ನಮದೆಲ್ಲ
ನಿಸ್ವಾರ್ಥದ ಹಣತೆಯ ಹಚ್ಚಿ
ಐಕ್ಯತೆಯಿಂದಲಿ ಬಾಳುವೆವು ||

ಭಾರತಾಂಬೆಯ ಮುದ್ದಿನ ಮಗಳು
ಕನ್ನಡ ತಾಯಿಯು ನಮ್ಮಮ್ಮ
ಕೆಚ್ಚಿನ ಕಲಿಗಳು ವೀರಯೋಧರು
ನಮ್ಮಯ ಶಕ್ತಿಗೆ ಎದುರಾರಿಲ್ಲ ||

ಕನ್ನಡ ತಾಯಿಯ ಮಕ್ಕಳು ನಾವು
ಸಾಹಿತ್ಯ ಸಂಸ್ಕೃತಿ ಬೆಳೆಸುವರು
ಕುವೆಂಪು ಬೇಂದ್ರೆ ಮಾಸ್ತಿಯರು
ಸಾಹಿತ್ಯ ಉಜ್ವಲ ಗೊಳಿಸಿಹರು ||

ವಜ್ರ ಮುಕುಟವಿದೆ ನಮ್ಮ ಭಾರತಿಗೆ
ರತ್ನ ಮುಕುಟವಿದೆ ಕನ್ನಡ ತಾಯಿಗೆ
ವಿಶ್ವವನ್ನೇ ಮುಟ್ಟಿದ ಕೀರ್ತಿಯು ನಮ್ಮದು
ವಿಶ್ವಖ್ಯಾತಿ ಅಮರ ಅಮರವು ||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...