Home / ಕವನ / ಕವಿತೆ / ಬಯಕೆಯುತ್ಸವ

ಬಯಕೆಯುತ್ಸವ

ಬಂತು ಶ್ರಾವಣ
ಎಂತು ಬದುಕುವಳೊ
ನಲ್ಲೆ ಜೀವ ಉಳಿಸಿ
ಎಂದು ಹಪಹಪಿಸಿ
ಮೈಗೆ ಮನಸ್ಸಿಗೆ ಯಾತನೆಯ ಬರಿಸಿ
ಬರಿದೆ ಕೊರಗದಿರು, ಸೊರಗದಿರು ನಲ್ಲ
ತುಂತುರು ಮಳೆಯ ತುಷಾರಕ್ಕೆ
ತಂಗಾಳಿಯ ಅಲೆ ಬಂದು ಸಿಲುಕಿದಾಗ
ನನ್ನ ಹೃದಯದ ಎಳೆ ಎಳೆದಂತಾಗಿ
ಯಕ್ಷ, ನಿನ್ನ ನೆನಪಿನ ಸುಳಿ ಏಳುವುದು
ಮೊದಲ ದಿವಸಗಳ, ರಾತ್ರಿಗಳ, ಕ್ಷಣಗಳ
ಅನುಭವದ ಸ್ವರ್ಗಸುಖ
ಎಂತು ಬರುವುದೊ ಮತ್ತೊಮ್ಮೆ
ಎಂದು ನನ್ನ ಜೀವವೂ ತುಡಿಯುವುದು
ಮಿಡಿಯುವುದು….
ಹಿಂದಿನಂತಲ್ಲ.
ಇಂದು ಬರಗಾಲವಿಲ್ಲ
ಈ ಸಲ ನಭವೇ ಕಳಚಿ ಬಿದ್ದಿದೆ
ಮೇಘ ಮಿತ್ರ ನಮ್ಮ ವಿರಹ ವಾರ್ತೆಯನು
ಹೊತ್ತು
ದುಃಖ ಭಾರವ ತಾಳಲಾರದೆ
ಬಾಂದಳದಿಂದ ಬಿದ್ದು
ಎಲ್ಲಡೆಯಲ್ಲು ನೆರೆಯನು ಬರಿಸಿದ್ದಾನೆ
ಹಸು-ಹಟ್ಟಿ ಬೆಳೆ-ಮಳೆ ಜನ ವಸತಿ-
ಗಳನೆಲ್ಲ ಹೊಚ್ಚಳಿಸಿ
ನಮ್ಮ ಮಂತ್ರಿಗಳನ್ನು ಮತ್ತೊಮ್ಮೆ
ವಿಮಾನ ವೀಕ್ಷಣಕೆ ಭರವಸೆಗಳ ಭಾಷಣಕೆ
ತೊಡಗಿಸಿದ್ದಾನೆ.
ಆದರೂ
ಪ್ರೇಮಿಗಳಿಬ್ಬರನು
ಜಾತಿ ನೀತಿಯ ಸಂಪತ್ತಿನ ಸವಾಲು ಹಾಕಿ
ಅಗಲಿಪುದೆ ಸುಖ ಈಜಗಕೆ
ಮೊನ್ನೆ…. ಕೇಳಿದೆಯಲ್ಲ
ಪ್ರಖರ ಪ್ರೇಮಿಗಳೀರ್ವರು
ಒಂದೆ ಉರುಳಿಗೆ ತಮ್ಮ ಕೊರಳನ್ನು ಬಿಗಿದು
ಅಪ್ಪಿಕೊಂಡೇ ಇಹದ ಜಂಜಡದಿಂದ
ರಿಕ್ತರಾದುದ, ಮುಕ್ತರಾದುದ… ಕೇಳಿದೆಯಲ್ಲ
ದೂರವಾಣಿಯಲಿ ನನ್ನ ಮನದಳಲುಗಳ
ಕೂರವಾಗಿಹ ಗತಿವಿಧಿಯ
ದೂರಿ ಹೇಳುವ ಮನಸಾದರೂ
ದೂರವಾಣಿಯ ತಾರೊತ್ತಿ
ದೂರುಗಳ ಸೆರೆಹಿಡಿದ
ಚೋರರ ಭಯವಾಗಿ
ನಿನ್ನ ರಾಜಪದವಿಯನೆ ಕಸಿದು
ದುರ್ಗತಿಗೆಸೆದು
ಪದಚ್ಯುತಿಗೊಳಿಸಿ ಅಳಿಸಿ
ನಿನ್ನವರನ್ನೆ ನಿನ್ನ ವಿರುದ್ಧ ಮಸೆದು
ಸತ್ತೆಯನೆ ಬದಲಿಸುವರೆಂಬ
ಅಳಕು ಬಂತು ಸುತ್ತಿ…
ಅಂಚೆ ವಿಧೇಯಕ
ಕಾಯಿದೆಯಾಗುವ ಮುನ್ನ
ನನ್ನ ದುಗುಡದ ವಿಸ್ತಾರವನ್ನ
ಎಕ್ಕಣಿಸಿ
ಆಷಾಡದ ಪ್ರಥಮ ದಿವಸಗಳ
ಸವಿನೆನಪು ರಸನಿಮಿಷಗಳ
ಲೆಕ್ಕಣಿಸಿ
ಕಳಿಸುವೆನು ನಿನಗೊಂದು
ಪ್ರಣಯ ಪತ್ರವ ಚಿನ್ನ
ಅದಕೆಂದೆ ಮಿಲನದ
ಬಯಕೆಯುತ್ಸವದಿ ಕೊಡೆ ಬಿಡಿಸಿ
ಬದುಕಿರುವೆ ಶ್ರಾವಣದಲು
ಜೀವ ಉಳಿಸಿ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್