ಜಯ ಕನ್ನಡ ಜಯ ಕನ್ನಡ

ಜಯ ಕನ್ನಡ ಜಯ ಕನ್ನಡ
ಜಯ ಕನ್ನಡ ಮಾತೇ
ಜಯಹೇ ಅಗಣಿತ ಗುಣ
ಗಣಗಳ ಜನ್ಮದಾತೆಯೇ ||ಜ||

ನೀನು ನಲಿದೊಡೆ
ಅದುವೆ ಪುಣ್ಯಕ್ಷೇತ್ರ
ನೀನು ಒಲಿದೊಡೆ
ಅದುವೆ ಪಾವನ ತೀರ್ಥ
ನೀನು ಮುನಿದೊಡೆ
ಅದುವೆ ಪ್ರಾಳಯವಮ್ಮಾ || ಜ ||

ನಿನ್ನ ಮಡಿಲ ಮಕ್ಕಳು
ನಿನ್ನ ಮಮತೆಯ ಒಕ್ಕಲು
ನನ್ನ ಕರುಣೆಯೇ ದೇವಿದೀಕ್ಷೆ
ನೀನೇ ನಮಗೇ ಶ್ರೀರಕ್ಷೆ || ಜ ||

ಭುವನ ಮಂಗಳೇ ನೀನು
ಭುವನೇಶ್ವರಿ ತಾಯೆ
ಹರಿಶಿನ ಕುಂಕುಮ ಸೌಭಾಗ್ಯನಿಧಿಯೆ || ಜ ||

ಹಳದಿ ಕೆಂಪು ಬಾವುಟ
ಕೈಯಲ್ಲಿ ಹಿಡಿದು
ಸಿಂಹವಾಹಿನಿ ಕನ್ನಡ ಕಲಿಗಳ
ಗರ್ಜನೆಗೊಲಿದು
ಬಂದ ತಾಯೆ ನಿಂದೆ ತಾಯೆ
ಹರಸು ತಾಯೆ ನಮಿಸುವೆವು ನಿನ್ನ || ಜ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೦ನೆಯ ಖಂಡ – ಉಪಹಾಸಗಳ ಉಪಯುಕ್ತತೆ
Next post ಮೌನ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…