ಮೌನ

ಮೌನ ಉದ್ದಕ್ಕೆ ಬೆಳೆದಾಗ
ಭೂತ ಬೆಳೆದಂತೆ ಭಯವಾಗುತ್ತದೆ
ಮೌನ ಮನಸ್ಸಿನಲ್ಲಿ ಬೆಳೆದು ಕುಳಿತಾಗ
ತನ್ನವರು ಅನ್ಯರಾದಾಗ
ಜೊತೆಯವರು ಪರರಾಗಿ
ಏಕಾಂತವನ್ನು ಭೋಗಿಸ ಬೇಕಾಗಿ ಬಂದಾಗ
ಮೌನ ಭೀತವಾಗಿರದೆ
ಎಲೆಗಳಿಂದ ಹೊರಟ
ಹವೆಯೂ ರುಂಯೆಂದು
ಶಾಪವಾಗುತ್ತದೆ!
ಮೌನದಿಂದ ದೂರ ಓಡುವವರೆಲ್ಲ
ಚಾದಂಗಡಿಯಲ್ಲಿ
ಶರಾಬುಖಾನೆಯ ಮೇಜಿನಲ್ಲಿ
ಜೊತೆಗೊಬ್ಬರನ್ನು ಹುಡುಕ ತೊಡಗುತ್ತಾರೆ.
ಬೋರು ಹೊಡೆಯುವ ಯಾರದೋ
ಹಾಂಕ್ಕೆ ಹೂಂ ಸೇರಿಸಿ
ಕೇಳಿಸಿ ಕೊಂಡ ಸೋಗು ಹಾಕುತ್ತಾರೆ.
ಕೈಗೆಸಿಕ್ಕ ಒಣ ಕಾದಂಬರಿಯಲ್ಲಿ
ತೊಂಭತ್ತು ಮಿನಿಟುಗಳ ಹಿಂದಿ ಸಿನೇಮಾದಲ್ಲಿ
ಬೀದಿ ಬೀದಿಯ ನುಸುಳಿ
ವಿಂಡೋ ಶೋಪಿಂಗ್ ಮಾಡುತ್ತಾರೆ
ಕವಿಯ ಮನೆಯನ್ನು ಹೊಕ್ಕು
ಬೋರು ಕಾವ್ಯವ ಕೇಳಿ
ಕೇಳದೆಯೆ ವಾಹ! ಎಂದು ಮೆಚ್ಚುತ್ತಾರೆ
ಬಸ್‌ಸ್ಟಾಪಿನಲ್ಲಿ ವ್ಯರ್ಥವೆ ಬಸ್‌ ಬಿಡುತ್ತ
ಮನಸ್ಸು ಚಿಂತೆಯಲ್ಲದ್ದುವ ಮೊದಲೆ
ಸೆರೆಯ ಶರಣು ಹೊಡೆಯುತ್ತಾರೆ
ಯಾವ ಜತನವೂ ನಡೆಯದಿರೆ
ಮನೆಗೆ ಮರಳಿ
ಸತಿ ಸುತರಲ್ಲಿ ಹಿಂದೆ
ಆಡಿದ್ದನ್ನೆ ಆಡಿ
ಕೇಳದ-ಹೇಳದ ಫಾರ್ಮುಲವನ್ನೆ
ಮರುಕಳಿಸಿದಂತಾಗುವುದು
ನಂತರ ಮನೆಯಲ್ಲಿ
ಮನೆಯ ಮುಂದಿರುವ
ಸ್ಮಶಾನದಂತಹ,
ಒಂದು ದೀರ್ಘ ಮೌನ ಹರಡುವುದು
ಈ ಮೌನವನ್ನು ಬಿಗಿದಪ್ಪಿ
ಎಲ್ಲರು ಮಲಗುವರು
ನಿದ್ದೆಯಲ್ಲಿ ಬಡ ಬಡಿಸುವರು
ನನ್ನ ತೆರೆದಿದ್ದ ಕಣ್ಣಿಗೆ
ಬಾಲ್ಕನಿಯಲ್ಲಿ ತೂಗುವ
ಒಣವಸ್ತ್ರ ಕಾಣುವುದು
ನಮ್ಮ ಅಗಸ ಬರಲಿಲ್ಲ?
ನನ್ನ ಲುಂಗಿ ನೀನೆ ಒಗೆದದ್ದು ಲೇಸಾಯಿತು
ರಾತ್ರಿಯಲ್ಲಿ ಅದು….
ನಾನು ನನ್ನಷಕ್ಕೆಂಬಂತೆ
ಅವಳಿಗೆ ಹೇಳುತ್ತೇನೆ
ಕೋಮಿಕ್ಸ್ ಓದುತ್ತಿದ್ದ
ನನ್ನ ಮಗಳ ಮುಖ ಅರಳುತ್ತದೆ
ಅಪ್ಪ, ಮಾತು ಲುಂಗಿಯದಾದರೂ
ನಿನ್ನ ಮೌನ ಮುರಿಯಿತಲ್ಲ!
ಎಂದು ನಗೆ ಕಿಸಕ್ಕೆಂದು ಹೊರಡುತ್ತದೆ.
*****
ಮೂಲ: ಪ್ರೀತಮ್ ಬೇಲಿ
(ಹಿಂದಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯ ಕನ್ನಡ ಜಯ ಕನ್ನಡ
Next post ಬರಿದರ್ಥಕಾಮದ ಮರವುಳ್ಳವುದೆಂತು?

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…