ಬಡವನ ಆಸೆ

ಜೀವ ಚಿಮ್ಮಿರುವ ಹೂವೇ
ಹಾಡು ಹೊಮ್ಮಿರುವ ಹಗಲೇ
ಮಾತಾಡುವಾಸೆ ನನಗೆ ನಿಮ್ಮೊಂದಿಗೆ
ಮಿನುಗು ಹೆಜ್ಜೆಯ ತಾರೆಯೇ
ಚಂದ್ರ ಚುಂಬಿತ ರಾತ್ರಿಯೇ
ಬೆರೆಯುವಾಸೆ ನನಗೆ ನಿಮ್ಮೊಂದಿಗೆ.

ಬಿಸಿಲ ಬಂಧನ ಮುರಿದು
ಹಸಿರ ಹಾದಿಗೆ ಜಿಗಿದು
ನಲಿಯುವಾಸೆ ನನಗೆ ನಿಮ್ಮೊಂದಿಗೆ
ನನ್ನ ಕಷ್ಟದ ಕಥೆಯ
ಅನ್ನ ಸಿಕ್ಕದ ವ್ಯಥೆಯ
ತೋಡಿಕೊಳ್ಳುವ ಆಸೆ ನಿಮ್ಮೊಂದಿಗೆ.

ಸಾವ ಬರೆಯಿಸಿಕೊಂಡು
ಸಾಲ ಕೊಟ್ಟವರನ್ನು
ನೂಕಿ, ನುಡಿಯುವ ಆಸೆ ನಿಮ್ಮೊಂದಿಗೆ
ನಂಜು ನಾಲಗೆ ಬಾಣ
ಕಾಡಿ ಕಾಯುವ ಕಣ್ಣ
ತಪ್ಪಿಸಿ, ನೀವಾಗುವಾಸೆ ನಿಮ್ಮೊಂದಿಗೆ.
*****

One thought on “0

  1. ಪ್ರಸ್ತುತ ಸನ್ನಿವೇಶಕ್ಕೆ ಅರ್ಥಪೂರ್ಣ ಕವನ ಸರ್. ಇಂತಹ ಹತ್ತಾರು ಕವನಗಳು ಹೆಚ್ಚು ಹೆಚ್ಚು ಬಂದರೆ ಓದುವ ಭಾಗ್ಯ ನಮ್ಮದಾಗುತ್ತದೆ

Leave a Reply to W. BASAVARAJ , mobile 9342661225 Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಆನುದೇವಾ ಹೊರಗಣವನು…’ ಒಂದು ಪ್ರತಿಕ್ರಿಯೆ
Next post ತಂದೆ ಪ್ರೀತಿ?

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys