ಒಂದು ಒಳ್ಳೆಯ ಪೊರಕೆ !

ಪ್ರಿಯ ಸಖಿ,
ಇಂದು
ನಮ್ಮ ದೇಶದ
ಬಹು ಮುಖ್ಯ ಅರಕೆ
ಒಂದು
ಒಳ್ಳೆಯ ಪೊರಕೆ !
ಮೊನ್ನೆ ಏನೋ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಬಿ. ಆರ್. ಲಕ್ಷ್ಮಣರಾವ್ ಅವರ ಈ ಹನಿಗವನ ತಟ್ಟನೆ ಗಮನಹಿಡಿದಿರಿಸಿತು. ಈ ಪುಟ್ಟ ಪದ್ಯದಲ್ಲಿ ಎಷ್ಟೊಂದು ಅರ್ಥ ತುಂಬಿದೆಯೆಲ್ಲವೇ ಸಖೀ?

ಇಂದು ದೇಶದ ತುಂಬೆಲ್ಲಾ ಭ್ರಷ್ಟಾಚಾರ, ಲಂಚಗುಳಿತನ, ಜಾತೀಯತೆ, ಸ್ವಾರ್ಥ ರಾಜಕಾರಣ, ಅನಕ್ಷರತೆ, ಮೌಢ್ಯ, ಪರಸ್ಪರ ಕಚ್ಚಾಟ…. ಇತ್ಯಾದಿ ಏನೆಲ್ಲಾ ಕಸಗಳು ತುಂಬಿ ಹೋಗಿವೆ. ಇವಗಳ ಜೊತೆಗಿದ್ದು ನಾವೂ ಇದರಲ್ಲಿ ಒಂದಾಗಿ ಹೋಗಿದ್ದೇವೆ. ದೇಶದ ಪರಿಸ್ಥಿತಿಯ ಬಗೆಗೆ ಆಗೀಗ ಗೊಣಗುಟ್ಟಿಕೊಂಡರೂ ‘ನಮ್ಮೊಬ್ಬರಿಂದ ಏನು ಸಾಧ್ಯ’ ಎಂದು ಸಮಜಾಯಿಷಿ ಮಾಡಿಕೊಂಡು ಬಿಡುತ್ತೇವೆ. ‘ದೇಶದ ಕುರಿತು ನನಗೇನು’ ಎಂದು ಜನ ನಿರ್ಲಕ್ಷ ತೋರಲಾರಂಭಿಸಿದರೆ ಆ ದೇಶಕ್ಕೆ ಭವಿಷ್ಯವೇ ಇಲ್ಲ ಎನ್ನುತ್ತಾನೆ ರೂಸೋ.

ಈ ಕಸವನ್ನು ಗುಡಿಸಲು ಎಲ್ಲಿಂದಲಾದರೂ ಯಾರಾದರೂ ಪ್ರಾರಂಭಿಸಲೇ ಬೇಕಲ್ಲವೇ? ಅದಕ್ಕೆ ಬೇಕಿರುವುದು ಒಂದು ಒಳ್ಳೆಯ ಪೊರಕೆ ಎಂದಿದ್ದಾರೆ ಕವಿ. ಹಾಗಾದರೆ ಆ ಪೊರಕೆ ಯಾವುದು? ನನಗನ್ನಿಸುವುದು ಬಹುಶಃ ‘ಜಾಗೃತಿ’ ಎಂಬ ಪೊರಕೆಯೇ ಇದಕ್ಕೆ ಉತ್ತರ. ಜಾಗೃತಿ ಎಂಬ ಪೊರಕೆಗೆ ಶಿಕ್ಷಣ, ದೇಶಪ್ರೇಮ, ವೈಚಾರಿಕ ಪ್ರಜ್ಞೆ ನಿಸ್ವಾರ್ಥತೆ, ವಿವೇಚನೆ, ನಂಬಿಕೆ, ಶ್ರದ್ಧೆ, ಆತ್ಮಸ್ಥೈರ್ಯ….. ಇತ್ಯಾದಿ ಪೊರಕೆ ಕಡ್ಡಿಗಳೇ ಬಲ! ಇಂತಹ ನೂರಾರು ಕಡ್ಡಿಗಳು ಸೇರಿ ತಾನೆ ‘ಜಾಗೃತಿ’ ಎಂಬ ಒಂದು ಪೊರಕೆಯಾಗುವುದು?

ನಿಜಕ್ಕೂ ನಾವು ಈಗ ಮಾಡಬೇಕಿರುವುದು ಇಂತಹ ಪೊರಕೆ ಕಡ್ಡಿಗಳ ಸೃಷ್ಟಿ. ಇದು ಸುಲಭವೂ ಅಲ್ಲ. ಅಸಾಧ್ಯವೂ ಅಲ್ಲ! ಮಾನವ ಮನಸ್ಸು ಮಾಡಿದರೆ ಯಾವುದು ತಾನೇ ಸಾಧ್ಯವಿಲ್ಲ? ಎಲ್ಲಕ್ಕೂ ಮುಖ್ಯವಾಗಿ ಮನಸ್ಸು ಮಾಡಬೇಕಷ್ಟೇ! ದಿಟ್ಟ ಮನಸ್ಸಿನಿಂದ ಪುಟ್ಟ ಹೆಜ್ಜೆ ಇಡುತ್ತಲೇ ಇಂತಹ ಪೊರಕೆ ಕಡ್ಡಿಗಳನ್ನು ಸೃಷ್ಟಿಸಿದರೆ ಪೊರಕೆ ತಾನಾಗಿ ಎಲ್ಲ ಕಡೆಯಿಂದಲೂ ಏಳುತ್ತದೆ. ತಾನೇ ಕಸಗುಡಿಸುತ್ತದೆ. ಸ್ವಚ್ಚ ಮಾಡುತ್ತದೆ. ಇಂತಹ ಒಂದು ಒಳ್ಳೆಯ ಪೊರಕೆಗಾಗಿ ಒಂದು ಪೊರಕೆ ಕಡ್ಡಿಯನ್ನಾದರೂ ಸೃಷ್ಟಿಸುವುವಕ್ಕೆ ನಾವು ಪ್ರಯತ್ನಿಸಿದರೆ ಅದಕ್ಕಿಂತಾ ಒಳ್ಳೆಯ ಕೆಲಸ ಇನ್ನಾವುದಿದೆ? ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ನಂಗೆ ಮರೀದೆ ಕೊಡೆ
Next post ನಿನ್ನಲಂಕಾರ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys