Home / ಲೇಖನ / ಇತರೆ / ಒಂದು ಒಳ್ಳೆಯ ಪೊರಕೆ !

ಒಂದು ಒಳ್ಳೆಯ ಪೊರಕೆ !

ಪ್ರಿಯ ಸಖಿ,
ಇಂದು
ನಮ್ಮ ದೇಶದ
ಬಹು ಮುಖ್ಯ ಅರಕೆ
ಒಂದು
ಒಳ್ಳೆಯ ಪೊರಕೆ !
ಮೊನ್ನೆ ಏನೋ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಬಿ. ಆರ್. ಲಕ್ಷ್ಮಣರಾವ್ ಅವರ ಈ ಹನಿಗವನ ತಟ್ಟನೆ ಗಮನಹಿಡಿದಿರಿಸಿತು. ಈ ಪುಟ್ಟ ಪದ್ಯದಲ್ಲಿ ಎಷ್ಟೊಂದು ಅರ್ಥ ತುಂಬಿದೆಯೆಲ್ಲವೇ ಸಖೀ?

ಇಂದು ದೇಶದ ತುಂಬೆಲ್ಲಾ ಭ್ರಷ್ಟಾಚಾರ, ಲಂಚಗುಳಿತನ, ಜಾತೀಯತೆ, ಸ್ವಾರ್ಥ ರಾಜಕಾರಣ, ಅನಕ್ಷರತೆ, ಮೌಢ್ಯ, ಪರಸ್ಪರ ಕಚ್ಚಾಟ…. ಇತ್ಯಾದಿ ಏನೆಲ್ಲಾ ಕಸಗಳು ತುಂಬಿ ಹೋಗಿವೆ. ಇವಗಳ ಜೊತೆಗಿದ್ದು ನಾವೂ ಇದರಲ್ಲಿ ಒಂದಾಗಿ ಹೋಗಿದ್ದೇವೆ. ದೇಶದ ಪರಿಸ್ಥಿತಿಯ ಬಗೆಗೆ ಆಗೀಗ ಗೊಣಗುಟ್ಟಿಕೊಂಡರೂ ‘ನಮ್ಮೊಬ್ಬರಿಂದ ಏನು ಸಾಧ್ಯ’ ಎಂದು ಸಮಜಾಯಿಷಿ ಮಾಡಿಕೊಂಡು ಬಿಡುತ್ತೇವೆ. ‘ದೇಶದ ಕುರಿತು ನನಗೇನು’ ಎಂದು ಜನ ನಿರ್ಲಕ್ಷ ತೋರಲಾರಂಭಿಸಿದರೆ ಆ ದೇಶಕ್ಕೆ ಭವಿಷ್ಯವೇ ಇಲ್ಲ ಎನ್ನುತ್ತಾನೆ ರೂಸೋ.

ಈ ಕಸವನ್ನು ಗುಡಿಸಲು ಎಲ್ಲಿಂದಲಾದರೂ ಯಾರಾದರೂ ಪ್ರಾರಂಭಿಸಲೇ ಬೇಕಲ್ಲವೇ? ಅದಕ್ಕೆ ಬೇಕಿರುವುದು ಒಂದು ಒಳ್ಳೆಯ ಪೊರಕೆ ಎಂದಿದ್ದಾರೆ ಕವಿ. ಹಾಗಾದರೆ ಆ ಪೊರಕೆ ಯಾವುದು? ನನಗನ್ನಿಸುವುದು ಬಹುಶಃ ‘ಜಾಗೃತಿ’ ಎಂಬ ಪೊರಕೆಯೇ ಇದಕ್ಕೆ ಉತ್ತರ. ಜಾಗೃತಿ ಎಂಬ ಪೊರಕೆಗೆ ಶಿಕ್ಷಣ, ದೇಶಪ್ರೇಮ, ವೈಚಾರಿಕ ಪ್ರಜ್ಞೆ ನಿಸ್ವಾರ್ಥತೆ, ವಿವೇಚನೆ, ನಂಬಿಕೆ, ಶ್ರದ್ಧೆ, ಆತ್ಮಸ್ಥೈರ್ಯ….. ಇತ್ಯಾದಿ ಪೊರಕೆ ಕಡ್ಡಿಗಳೇ ಬಲ! ಇಂತಹ ನೂರಾರು ಕಡ್ಡಿಗಳು ಸೇರಿ ತಾನೆ ‘ಜಾಗೃತಿ’ ಎಂಬ ಒಂದು ಪೊರಕೆಯಾಗುವುದು?

ನಿಜಕ್ಕೂ ನಾವು ಈಗ ಮಾಡಬೇಕಿರುವುದು ಇಂತಹ ಪೊರಕೆ ಕಡ್ಡಿಗಳ ಸೃಷ್ಟಿ. ಇದು ಸುಲಭವೂ ಅಲ್ಲ. ಅಸಾಧ್ಯವೂ ಅಲ್ಲ! ಮಾನವ ಮನಸ್ಸು ಮಾಡಿದರೆ ಯಾವುದು ತಾನೇ ಸಾಧ್ಯವಿಲ್ಲ? ಎಲ್ಲಕ್ಕೂ ಮುಖ್ಯವಾಗಿ ಮನಸ್ಸು ಮಾಡಬೇಕಷ್ಟೇ! ದಿಟ್ಟ ಮನಸ್ಸಿನಿಂದ ಪುಟ್ಟ ಹೆಜ್ಜೆ ಇಡುತ್ತಲೇ ಇಂತಹ ಪೊರಕೆ ಕಡ್ಡಿಗಳನ್ನು ಸೃಷ್ಟಿಸಿದರೆ ಪೊರಕೆ ತಾನಾಗಿ ಎಲ್ಲ ಕಡೆಯಿಂದಲೂ ಏಳುತ್ತದೆ. ತಾನೇ ಕಸಗುಡಿಸುತ್ತದೆ. ಸ್ವಚ್ಚ ಮಾಡುತ್ತದೆ. ಇಂತಹ ಒಂದು ಒಳ್ಳೆಯ ಪೊರಕೆಗಾಗಿ ಒಂದು ಪೊರಕೆ ಕಡ್ಡಿಯನ್ನಾದರೂ ಸೃಷ್ಟಿಸುವುವಕ್ಕೆ ನಾವು ಪ್ರಯತ್ನಿಸಿದರೆ ಅದಕ್ಕಿಂತಾ ಒಳ್ಳೆಯ ಕೆಲಸ ಇನ್ನಾವುದಿದೆ? ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...