ಮಹಾನಗರ ರಸ್ತೆ – ಮರುಚೇತನ

ಮಹಾನಗರದ ಮುಖ್ಯ ರಸ್ತೆಯಾಗಿದ್ದು
ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ
ತಲೆ ಎತ್ತುವ ಧನ್ಯತೆ ಕಳೆದಿತ್ತು.

ಬಾಯಾರಿದ ಭೂ ಒಡಲು ಹಸಿರಾಗಿಸಲು
ಧಾರಾಕಾರ ವರುಣನ ವಿಜಯೋತ್ಸವ
ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ

ಮಾನ ಬಿಟ್ಟವರು ನನ್ನ ಮಾನ ಮುಚ್ಚಲು
ಬರಿ ಉಸುಕು-ಮಣ್ಣು ಚೆಲ್ಲುತ ಗುಳಂವಾಗಿಸುವರು
ಆಡಳಿತ-ಅಧಿಕಾರಿಗಳು ನೂರು ಸಾವಿರ ಲಕ್ಷ ಲಕ್ಷ

ಸ್ವಾಭಿಮಾನ ಮರೆತ ನಗರವಾಸಿಗಳು
ನನ್ನ ಮೈಮೇಲೆ ನಡೆದಾಡುವಾಗೊಮ್ಮೆ
ಏಳುತ್ತ-ಬೀಳುತ ಹಾಕುವರು ಶಾಪ-ತಾಪ

ತಮಗಾದ ಅನ್ಯಾಯ ಪ್ರತಿಭಟಿಸದಿರುವ
ನಗರವಾಸಿ ನಾಗರಿಕ ವರ್ಗದ
ಭವಿಷ್ಯ ಮೆಲುಕಾಡಿಸುತ್ತಾ ಮೈಚಾಚಿ ಮಲಗಿರುವೆ

ಸ್ವಾತಂತ್ರ್‍ಯ ಸಿಕ್ಕು ಅರ್ಧಶತಕವಾದರೂ
ನಡೆದಿರುವವು ನನ್ನಿಹ ಮೈಮೇಲೆ
ಅತ್ಯಾಚಾರ ಭಾಷೆ-ಕೋಮು ದ್ವೇಷದ ಇರಿತಗಳು

ಕಾರ್ಮಿಕರ ಮೌನ ಹೋರಾಟ – ಮುಷ್ಕರ
ಅಬಲೆಯರ ಆರ್ತನಾದ ಅಪಘಾತ ಗಲಭೆಗಳ
ರಕ್ತದ ಮಡುವಿನಲ್ಲಿ ನರಳಾಟ ಕೇಳುತ ಮೌನವಾಗಿರುವೆ.

ಹುಸಿ ಭರವಸೆ ನೊಂದವರ ನಿಟ್ಟುಸಿರು
ಕೇಳುತ ನೋಡುತ ಬೇಸತ್ತು ಮಲಗಿದ್ದೆ
ಪುಳಕಿತಗೊಂಡೆ ಈ ದಿನ ವೀರಯೋಧರ ಶವಯಾತ್ರೆ ತಿಳಿದು

ದಶ ದಶಕಗಳಿಂದ ಬರಿ ಡಂಬಾಚಾರದ
ನಯ – ವಂಚಕರಿಂದ ತುಳಿಸಿಕೊಂಡು ಸಾಕಾಗಿದ್ದ
ಮೈಮನ ಕಾತರಿಸುತ್ತಿದೆ ವೀರಯೋಧನ ಸ್ಪರ್ಶಕ್ಕಾಗಿ

ಮಾತೃ-ಭೂಮಿಯ ಗಡಿ-ಶಿಖರಗಳಲಿ
ಮಡಿದ-ಮಕ್ಕಳು ಮನೆ ಎನ್ನದೆ
ರಾಷ್ಟ್ರಪ್ರೇಮದ ದೃಢತೆಯಲಿ ಶತ್ರುಗಳ ಸದ್ದಡಗಿಸಿ
ಜೀವ ನೀಡಿದ ವೀರ ಆ ಧೀರ ಸೈನಿಕರು

ನಗರ-ನಾಗರಿಕ ಸನ್ಮಾನ-ಹೆಮ್ಮೆಯ ದುಃಖದಿ ಕಣ್ಣೀರು
ಶವಪೆಟ್ಟಿಗೆಯಡಿ ವೀರ ಜವಾನರು
ಕೊನೆ ಮೆರವಣಿಗೆ ಮೈಮೇಲೆ ಸಾಗುವ ಕ್ಷಣ
ರೋಮಾಂಚನದಿ ದೇಹದ ಕಣ ಕಣವೂ ಧನ್ಯ ಧನ್ಯ

ಹೊತ್ತವರು-ಹೆತ್ತವರೆಲ್ಲಾ ಅತ್ತರು ಹೆಮ್ಮೆಯಲಿ
ಸಾಗಿತ್ತು ರಸ್ತೆಯುದ್ದಕ್ಕೂ ಅಂತಿಮ ಶವ ಯಾತ್ರೆ-ಜಾತ್ರೆ
`ಜವಾನ-ಅಮರ ರಹೇ’ ಮುಗಿಲು ಮುಟ್ಟಿದ ಘೋಷಣೆ

ತಾಯಿನಾಡಿಗಾಗಿ ಮಡಿದ ವೀರ ಜವಾನರ ಸ್ಪರ್ಶ
ನನ್ನ ಅಸ್ತಿತ್ವದ ಸಾರ್ಥಕತೆಗೆ ಜೀವ ತುಂಬಿತು
ಮರು ಚೇತನದಿ ಈ ತನುವು ಧನ್ಯತೆ ಪಡೆದಿತ್ತು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಟೆ
Next post ಕರುಣೆಯೇ ಇಲ್ಲ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys