ಹೂವು

ಮುಂಜಾನೆ ಮೊಗ್ಗಾಗಿ
ಬಳ್ಳಿಯಲಿ ಒಡಮೂಡಿ
ಮಂದಹಾಸ ಬೀರುತಲಿ
ಅರಳಿ ನಗುವ ಸುಂದರ
ಪುಷ್ಪಗಳೆ..

ಪರಿಮಳವ ಬೀರಿ
ನಗೆಯ ಚೆಲ್ಲುತಲಿ
ಜನ ಮನವ ಆಕರ್ಷಿಸಿ
ಉದ್ಯಾನದಿ ಬೆರೆಯುವಂತೆ
ಮಾಡಿದ ಪುಷ್ಪಗಳೆ

ದೇವರಿಗೆ ಮುಡುಪಾಗಿ
ಪೂಜೆಯಲಿ ಒಂದಾಗಿ
ಭಕ್ತರ ಪಾಲಿಗೆ ಬೆಳಕಾಗಿ
ದೇವರ ಮುಡಿಯನೇರಿ
ಧನ್ಯತೆ ಪಡೆದ ಪುಷ್ಪಗಳೆ

ಬಳ್ಳಿಯಂತೆ ಬಳುಕುವ
ನಾರಿಯರ ನೀಳ ಕೇಶದ
ಮುಡಿಯ ಸೇರಿ ನಗುತ್ತಾ
ಮಂಗಳೆಯರ ಅಂದ ಹೆಚ್ಚಿಸಿದ
ಮಂದಾರ ಪುಷ್ಪಗಳೆ

ಬಾಡಿ ಹೋಗುವ ಮುನ್ನ
ಸಾವ ಮನೆ ಸೇರಿ
ಶಾಂತತೆಯ ಮೆರೆದು
ಮಡಿದ ದೇಹದ ಜೊತೆಗೆ
ಮರೆಯಾಗುವ ಪುಷ್ಪಗಳೆ

ಒಂದೇ ದಿನದಲ್ಲಿ ಅರಳಿ
ಬಾಡಿ ಬಿದ್ದು ಹೋಗುವ ನೀನು
ಅದೆಷ್ಟೋ ಜನೋಪಯೋಗಿ
ನನಗೂ ಕರುಣಿಸು ನಿನ್ನ ಸ್ವಭಾವ
ನಿನ್ನಂತೆ ಸುಮಧುರವಾಗಿ ಬಾಳುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬರಿಗೆ ಪತ್ರ
Next post ಹಂತಗಳು

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys