ಹೂವು

ಮುಂಜಾನೆ ಮೊಗ್ಗಾಗಿ
ಬಳ್ಳಿಯಲಿ ಒಡಮೂಡಿ
ಮಂದಹಾಸ ಬೀರುತಲಿ
ಅರಳಿ ನಗುವ ಸುಂದರ
ಪುಷ್ಪಗಳೆ..

ಪರಿಮಳವ ಬೀರಿ
ನಗೆಯ ಚೆಲ್ಲುತಲಿ
ಜನ ಮನವ ಆಕರ್ಷಿಸಿ
ಉದ್ಯಾನದಿ ಬೆರೆಯುವಂತೆ
ಮಾಡಿದ ಪುಷ್ಪಗಳೆ

ದೇವರಿಗೆ ಮುಡುಪಾಗಿ
ಪೂಜೆಯಲಿ ಒಂದಾಗಿ
ಭಕ್ತರ ಪಾಲಿಗೆ ಬೆಳಕಾಗಿ
ದೇವರ ಮುಡಿಯನೇರಿ
ಧನ್ಯತೆ ಪಡೆದ ಪುಷ್ಪಗಳೆ

ಬಳ್ಳಿಯಂತೆ ಬಳುಕುವ
ನಾರಿಯರ ನೀಳ ಕೇಶದ
ಮುಡಿಯ ಸೇರಿ ನಗುತ್ತಾ
ಮಂಗಳೆಯರ ಅಂದ ಹೆಚ್ಚಿಸಿದ
ಮಂದಾರ ಪುಷ್ಪಗಳೆ

ಬಾಡಿ ಹೋಗುವ ಮುನ್ನ
ಸಾವ ಮನೆ ಸೇರಿ
ಶಾಂತತೆಯ ಮೆರೆದು
ಮಡಿದ ದೇಹದ ಜೊತೆಗೆ
ಮರೆಯಾಗುವ ಪುಷ್ಪಗಳೆ

ಒಂದೇ ದಿನದಲ್ಲಿ ಅರಳಿ
ಬಾಡಿ ಬಿದ್ದು ಹೋಗುವ ನೀನು
ಅದೆಷ್ಟೋ ಜನೋಪಯೋಗಿ
ನನಗೂ ಕರುಣಿಸು ನಿನ್ನ ಸ್ವಭಾವ
ನಿನ್ನಂತೆ ಸುಮಧುರವಾಗಿ ಬಾಳುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬರಿಗೆ ಪತ್ರ
Next post ಹಂತಗಳು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…