ಶಬರಿಗೆ ಪತ್ರ

ಶಬರಿಕಾದಳಂದು ಶ್ರೀರಾಮ ಬರುವನೆಂದು,
ನಾನಿಂದು ಕಾದು ನೊಂದೆ ನಿನ್ನ ಪತ್ರ ಬರಲಿಲ್ಲವೆಂದು
ಕಾಯುವುದು ಬೇಯುವುದು ಅವರವರ ಕರ್ಮ
ಒಳಿತನಾಶಿಸಿ ಬಾಳುವುದು ಈಗೆಮ್ಮ ಧರ್ಮ.
“ತಾಳಿದವನು ಬಾಳಿಯಾನು” ಎಂಬುದೊಂದು ಗಾದೆ
ತಾಳಿ ತಾಳಿ ಸುಸ್ತಾದವನು ಈಗ ನಾನಾದೆ.
ಯಕ್ಷನಂತೆ ಕಾದೆ ನಿನ್ನ ಸಂದೇಶಕ್ಕಾಗಿ
ಪತ್ರ ಬರದ, ಶಬರಿಯಂತೆ ದುಃಖಿ ನಾನಾಗಿ.
ರಾಮಾಯಣ ಹಳೆಯ ಕಥೆ, ಕಾಲ ಪುರಾತನ,
ಈಗ ಅಣು ಯುಗ-ಜೆಟ್‌ನ ಕಾಲ, ವಿನೂತನ.
ಸಂದೇಶಕೆ ಮೋಡ ಬೇಡ, ಪತ್ರ ತರಲು ಪಕ್ಷಿ ಬೇಡ,
ಪ್ರೇಮ ಪಕ್ಷಿಯ ಸಂದೇಶಕೆ ಕೊನೆ ಮೊದಲೇ ಬೇಡ.
*****
೨೮-೧೨-೧೯೮೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನಪದ ನಾಯಕ ಡಾ. ರಾಜಕುಮಾರ್
Next post ಹೂವು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…