ಕವಿ

ಕವಿಯ ಮನ ಮಿಡಿಯುವುದು ದಿನ
ಹೊಸತನವ ಹುಡುಕುತ ಹೊಸ್ತಿಲಲಿ
ಕಲ್ಪನೆಯ ಭಾವನೆಗಳು ಚಿಗುರೊಡೆದು
ಹೊರ ಹೊಮ್ಮುತಿವೆ ಕಥೆ – ಕವನಗಳಾಗಿ

ತನುವು ಕುಗ್ಗಿ ಬಾಗಿ ಮುದಿಯಾದರೂ
ಮನಸ್ಸು ಚಿರ ಯೌವನದ ಚಿಲುಮೆಯಂತೆ
ಪುಟಿದೇಳುವುವು ಕನಸಿನ ಸಾಲುಗಳು
ಕರೆದೊಯ್ಯುವುವು ಭಾವನಾತ್ಮಕ ಲೋಕಕೆ

ಪ್ರಕೃತಿಯೊಡನೆ ಒಡನಾಟ ನಿತ್ಯದ ಪಾಠ
ನವರಸಗಳ ಹದವಾಗಿ ಬೆರೆಸಿ
ಪದಪುಂಜಗಳ ಒಕ್ಕಲು ಮಾಡಿ
ಭಾಷೆ-ಭಾವಗಳಿಗೆ ಜೀವ ತುಂಬುತ ನಡೆವ

ಒರತೆ ನೀರಂತೆ ಬತ್ತದಾ ಸೆಲೆಯಾಗಿ
ಹರಿಯುವುದು ಕವಿ ಕಲ್ಪನಾ ಲಹರಿ
ರವಿ ಕಾಣದ್ದನ್ನ ಕವಿ ತಂದುಕೊಡುವ
ಜನಮನಗಳಲ್ಲಿ ಸದಾ ಹಸಿರಾಗಿ ನಿಲ್ಲುವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ತವನ ಮನೆಯಲ್ಲಿ
Next post ಬೇಡ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…