Home / ಕವನ / ಕವಿತೆ / ಇಷ್ಟಲಿಂಗ

ಇಷ್ಟಲಿಂಗ

ಇಷ್ಟ ಲಿಂಗದ ಸ್ಪಷ್ಟತೆ ಇಲ್ಲಿ ಕಾಣುವುದು
ಕಗ್ಗತ್ತಲೆಯ ಗೂಡಿನ ಬ್ರಹ್ಮಾಂಡವಿದು
ಅಜ್ಞಾನದ ಪರದೆಯಿಂದ ಸುತ್ತಿಹುದು
ಜ್ಞಾನ ಜೋತಿಯ ಚೇತನ ಒಳಗಿಹುದು
ಇಷ್ಟಲಿಂಗ ಎನ್ನುವ ಭೂಮಂಡಲವಿದು.

ಸಾಮಾನ್ಯರ ಕೈಗೆಟುಕದ ದಿವ್ಯ ಚೇತನವು
ಧ್ಯಾನದ ಮೂಲಕವೇ ದಿವ್ಯ ಜೋತಿಯ ದರ್ಶನವು
ಕೆದಕಿದಷ್ಟು ಉದ್ಬವಿಪ ಜ್ಞಾನ ಅಕ್ಷಯ ಪಾತ್ರೆಯಿದು
ಜೀವನ ಪೂರ್ತಿ ಶೋಧಿಸಿದರೂ ಸಿಗದು ಪೂರ್ಣತೆಯು
ಅಲ್ಪ ಜ್ಞಾನವನರಸಿಯೂ ಧನ್ಯ ನಿನ್ನ ಜೀವನವು.

ಅಂಗದೊಳಗಿಟ್ಟು ನೇರ ದೃಷ್ಟಿಯನೆಟ್ಟು
ಶಾಂತ ಚಿತ್ತದಿ ಸಂಚರಿಸಿದರೆ ಮನದೊಳು
ಜ್ಞಾನ ಜ್ಯೋತಿ ಗೋಚರಿಸುವುದು ಆತ್ಮ ಸಾಕ್ಷಿಗೆ
ಕೆದಕಿ ಪಡೆದು ನೀನಾಗು ಜ್ಞಾನದ ಬೆಳಕು
ಆ ಜ್ಯೋತಿಯಿಂದ ತೊಲಗಿಸು ಜಗದ ತಮಂಧತೆಯನ್ನು.

ಇಷ್ಟ ಲಿಂಗದೊಳ್ ಹುಟ್ಟುವುದು ಸಹಜ
ಜ್ಞಾನವಿಲ್ಲದ ಬಾಳದು ಎಣಿಸುವುದು ಅಸಹಜ
ಬಾಳಿಗೆ ಬೇಕು ಜ್ಞಾನ ಜೋತಿಯ ಬೆಳಕು
ನೀನೇ ಆಗು ಆ ಜ್ಞಾನ ಜ್ಯೋತಿಯ ತುಣುಕು
ನಿನ್ನಿಂದಲೆ ಹರಡಲಿ ಮಾನವತೆಯ ಬೆಳಕು.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...