ಬದುಕಾಗಲಿ ಬೆಳಕು

ಹರಿ ನೀನು ನನ್ನ ಅಮರತ್ವದ ಸಿರಿ
ನಿನ್ನೊಂದಿಗೆ ಜನ್ಮ ಜನ್ಮ ಬಂಧ
ನಿನ್ನ ತೊರೆದು ಇನ್ನೊಂದು ಬಯಸಿದರೆ
ಅದೆಲ್ಲವೂ ಎನ್ನ ಭವದ ಬಂಧ

ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು
ಅದುವೆ ಎನಗಿರಲಿ ದಿನರೋಜು
ಸತ್ಯದತ್ತ ವಾಲಿ ಅಂತರಂಗಕ್ಕೆ ಜಾರಿ
ನಾ ಮರೆಯಲಿ ಈ ಸಂಸಾರದ ಗೋಜು

ಎತ್ತ ನೋಡಿದರೂ ಇಲ್ಲಿ ಜನರ ಹುಡುಕಾಟ
ಅದುವೆ ಗೇಣು ಉದರದ ಮಾಟ
ಅದಕ್ಕಾಗಿ ಹಗಲಿರುಳು ಬರೀ ಹೋರಾಟ
ಮಾನವ ಜನ್ಮದ ಅರ್ಥ ಕಿಂಚಿತ್ತಿಲ್ಲ ನೋಟ

ಇನ್ನೂ ಎನ್ನ ಬಾಳಲಿ ಕಾಡದಿರಲಿ ಆಸೆ
ನಿಂತು ಹೋಗಲಿ ಇಂದ್ರಿಯಗಳ ವ್ಯಾಪಾರ
ನಿನ್ನ ಚಿತ್ತಾರದಲಿ ಎನ್ನ ಬದುಕಾಗಲಿ ಬೆಳಕು
ಮಾಣಿಕ್ಯ ವಿಠಲನಿಗೆ ನಿನ್ನ ಕೃಪೆ ಸಾಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟುವೆವು ನಾವು
Next post ಸಾರುವೆ ಜನಾಃ ಸುಖಿನೋಭವಂತು!

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…