Home / ಲೇಖನ / ಇತರೆ / ಹೊಸತು

ಹೊಸತು

ಪ್ರಿಯ ಸಖಿ,

ಸದಾ ಕಾಲ ಹೊಸ ಹೊಸದಕ್ಕಾಗಿ ತುಡಿಯುವುದು ಮನುಷ್ಯನ ಸಹಜ ಗುಣ. ‘ಬದಲಾವಣೆ ಬಾಳಿನೊಗ್ಗರಣೆ’ ಎನ್ನುತ್ತದೆ ನಮ್ಮ ನಾಣ್ಣುಡಿ. ಕವಿಗಳೂ ಇದಕ್ಕೆ ಹೊರತಲ್ಲ. ಹಿಂದಿನ ಕವಿಗಳು ಹೇಳಿಬಿಟ್ಟಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇನೆ ಎನ್ನಿಸಿದಾಗ ಹೊಸತನಕ್ಕಾಗಿ ಹುಡುಕಾಡುತ್ತಾ ತಳಮಳಿಸುವ ಕವಿಯ ಸ್ಥಿತಿ ಹೇಗಿರುತ್ತದೆ? ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ನನ್ನ ನುಡಿ’ ಎಂಬ ಕವನದಲ್ಲಿ ಹೀಗೆ ಹೇಳುತ್ತಾರೆ.
ಚಂದ್ರಸೂರ್ಯರ ನೆರವಿನಿಂದೇ ಬೆಳಗುವಳೀ
ವಸುಂಧರೆಗದೆಂದು ಬಹುದೋ ಸ್ವಯಂದೀಪಕತೆ!
ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ
ದೆಸೆಗಳೇ ನಿಮಗೆಂದು ಬಹುದು ಮೀಸಲು ನಿನದ?
ಭೂಮಿಯ ಅಸ್ತಿತ್ವವಿರುವುದೇ ಚಂದ್ರಸೂರ್ಯರಿಂದ. ಅವರಿಲ್ಲದೇ ಬೆಳಗಬಲ್ಲ ಸ್ವಯಂದೀಪಕತೆ ಭೂಮಿಗೆ ಬರುವುದು ಯಾವಾಗ? ಅವರಿವರು ಉಪಯೋಗಿಸಿ ಬಿಟ್ಟ ಪದಗಳು, ವಸ್ತು, ಶೈಲಿ, ತಂತ್ರಗಳನ್ನೇ ಕದ್ದು ಮತ್ತೆ ತಾನೂ ಅದನ್ನೇ ಹೇಳುವಂತಹಾ ಅವಸ್ಥೆಯಿಂದ ಬಿಡುಗಡೆ ಹೊಂದಿ ತನ್ನದೇ ‘ಸ್ವಂತ’ ಸ್ವರವನ್ನು ಹೊರಡಿಸುವ ಗಳಿಗೆ ಬರುವುದೆಂದು? ಎಂದುಕೊಳ್ಳುತ್ತಾರೆ. ಈ ಸ್ಥಿತಿಯಲ್ಲಿದ್ದು ನೊಂದ ಕವಿ ತಮ್ಮ ಕವನದ ಕೊನೆಯಲ್ಲಿ.
ಅನ್ಯರೊರೆದುದನೆ ಬರೆದುದನೆ ನಾಬರೆಬರೆದು
ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವತನಕ ನನ್ನ ಬಾಳಿದು ನರಕ!
ಎನ್ನುತ್ತಾರೆ. ಬೇರೆಯವರು ಹೇಳಿದ್ದು, ಬರೆದದ್ದೇ ನಾನೂ ಬರೆಬರೆದು ನನ್ನ ಮನಸ್ಸು ಕ್ಷುದ್ರವಾಗಿದೆ. ನನ್ನ ಮನಸ್ಸಿನಾಳಗಳನ್ನು ತೆರೆದು ‘ನನ್ನದೇ ನುಡಿಯಲ್ಲಿ ವಿಭಿನ್ನ ಬಗೆಗಳಲ್ಲಿ ಬಣ್ಣಿಸುವಂತಾ ಎತ್ತರ ದೊರಕುವವರೆಗೆ ನನ್ನ ಬಾಳಿದು ನರಕ! ಎಂದಿದ್ದಾರೆ ಕವಿ.

ಸಖಿ, ಹೊಸತನ್ನು ಹುಡುಕುವುದು, ಹೊಸತನ್ನೇ ಬರೆಯುವುದು ಅದರಲ್ಲಿಯೇ ಸಾಧಿಸುವುಮ, ಹೊಸತನ್ನು ಸಮೂಹ ಒಪ್ಪಿಕೊಳ್ಳುವಂತೆ ಮಾಡುವುಮ ಎಲ್ಲವೂ ಕಷ್ಟವೇ, ಆದರೆ ಹೊಸತಿಗಾಗಿ ಸದಾ ತುಡಿಯುವ ಕವಿಗೆ ಅದಕ್ಕಿಂತಾ ಕಷ್ಟ ಕೊಡುವುದು ಎಂದರೆ ಅವರಿವರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು! ಬರೆಯುವುದು! ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...