Home / ಲೇಖನ / ಇತರೆ / ಹೊಸತು

ಹೊಸತು

ಪ್ರಿಯ ಸಖಿ,

ಸದಾ ಕಾಲ ಹೊಸ ಹೊಸದಕ್ಕಾಗಿ ತುಡಿಯುವುದು ಮನುಷ್ಯನ ಸಹಜ ಗುಣ. ‘ಬದಲಾವಣೆ ಬಾಳಿನೊಗ್ಗರಣೆ’ ಎನ್ನುತ್ತದೆ ನಮ್ಮ ನಾಣ್ಣುಡಿ. ಕವಿಗಳೂ ಇದಕ್ಕೆ ಹೊರತಲ್ಲ. ಹಿಂದಿನ ಕವಿಗಳು ಹೇಳಿಬಿಟ್ಟಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇನೆ ಎನ್ನಿಸಿದಾಗ ಹೊಸತನಕ್ಕಾಗಿ ಹುಡುಕಾಡುತ್ತಾ ತಳಮಳಿಸುವ ಕವಿಯ ಸ್ಥಿತಿ ಹೇಗಿರುತ್ತದೆ? ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ನನ್ನ ನುಡಿ’ ಎಂಬ ಕವನದಲ್ಲಿ ಹೀಗೆ ಹೇಳುತ್ತಾರೆ.
ಚಂದ್ರಸೂರ್ಯರ ನೆರವಿನಿಂದೇ ಬೆಳಗುವಳೀ
ವಸುಂಧರೆಗದೆಂದು ಬಹುದೋ ಸ್ವಯಂದೀಪಕತೆ!
ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ
ದೆಸೆಗಳೇ ನಿಮಗೆಂದು ಬಹುದು ಮೀಸಲು ನಿನದ?
ಭೂಮಿಯ ಅಸ್ತಿತ್ವವಿರುವುದೇ ಚಂದ್ರಸೂರ್ಯರಿಂದ. ಅವರಿಲ್ಲದೇ ಬೆಳಗಬಲ್ಲ ಸ್ವಯಂದೀಪಕತೆ ಭೂಮಿಗೆ ಬರುವುದು ಯಾವಾಗ? ಅವರಿವರು ಉಪಯೋಗಿಸಿ ಬಿಟ್ಟ ಪದಗಳು, ವಸ್ತು, ಶೈಲಿ, ತಂತ್ರಗಳನ್ನೇ ಕದ್ದು ಮತ್ತೆ ತಾನೂ ಅದನ್ನೇ ಹೇಳುವಂತಹಾ ಅವಸ್ಥೆಯಿಂದ ಬಿಡುಗಡೆ ಹೊಂದಿ ತನ್ನದೇ ‘ಸ್ವಂತ’ ಸ್ವರವನ್ನು ಹೊರಡಿಸುವ ಗಳಿಗೆ ಬರುವುದೆಂದು? ಎಂದುಕೊಳ್ಳುತ್ತಾರೆ. ಈ ಸ್ಥಿತಿಯಲ್ಲಿದ್ದು ನೊಂದ ಕವಿ ತಮ್ಮ ಕವನದ ಕೊನೆಯಲ್ಲಿ.
ಅನ್ಯರೊರೆದುದನೆ ಬರೆದುದನೆ ನಾಬರೆಬರೆದು
ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವತನಕ ನನ್ನ ಬಾಳಿದು ನರಕ!
ಎನ್ನುತ್ತಾರೆ. ಬೇರೆಯವರು ಹೇಳಿದ್ದು, ಬರೆದದ್ದೇ ನಾನೂ ಬರೆಬರೆದು ನನ್ನ ಮನಸ್ಸು ಕ್ಷುದ್ರವಾಗಿದೆ. ನನ್ನ ಮನಸ್ಸಿನಾಳಗಳನ್ನು ತೆರೆದು ‘ನನ್ನದೇ ನುಡಿಯಲ್ಲಿ ವಿಭಿನ್ನ ಬಗೆಗಳಲ್ಲಿ ಬಣ್ಣಿಸುವಂತಾ ಎತ್ತರ ದೊರಕುವವರೆಗೆ ನನ್ನ ಬಾಳಿದು ನರಕ! ಎಂದಿದ್ದಾರೆ ಕವಿ.

ಸಖಿ, ಹೊಸತನ್ನು ಹುಡುಕುವುದು, ಹೊಸತನ್ನೇ ಬರೆಯುವುದು ಅದರಲ್ಲಿಯೇ ಸಾಧಿಸುವುಮ, ಹೊಸತನ್ನು ಸಮೂಹ ಒಪ್ಪಿಕೊಳ್ಳುವಂತೆ ಮಾಡುವುಮ ಎಲ್ಲವೂ ಕಷ್ಟವೇ, ಆದರೆ ಹೊಸತಿಗಾಗಿ ಸದಾ ತುಡಿಯುವ ಕವಿಗೆ ಅದಕ್ಕಿಂತಾ ಕಷ್ಟ ಕೊಡುವುದು ಎಂದರೆ ಅವರಿವರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು! ಬರೆಯುವುದು! ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...