ರಂಗಸಂಸ್ಕೃತಿಯ ಜಾಗತಿಕ ವಕ್ತಾರ

ರಂಗಸಂಸ್ಕೃತಿಯ ಜಾಗತಿಕ ವಕ್ತಾರ

ಸ್ವಾತಂತ್ರ್ಯಾ ನಂತರದ ಭಾರತ ದೇಶದಲ್ಲಿ, ಅದು ಕನ್ನಡನಾಡಿನಲ್ಲಿ ಕನಸುಗಳಿಗೇನು ಕೊರತೆಯಿರಲಿಲ್ಲ. ಜಾಗತಿಕ, ಪಾಶ್ಚಾತ್ಯ ದೇಶಗಳಂತೆ ನಾವು ಕೂಡ, ಶಕ್ತಿಶಾಲಿ, ಬಲಿಷ್ಠರಾಗಿ, ಹೆಚ್ಚು ಹೆಚ್ಚು ವೈವಿಧ್ಯಮಯ ವಸ್ತುಗಳನ್ನು ಉತ್ಪಾದಿಸಿ ಉಪಯೋಗಿಸುತ್ತಾ ಕಾಲಾನುಕ್ರಮವಾಗಿ, ಪಾಶ್ಚಾತ್ಯ ಜೀವನಶೈಲಿಯನ್ನು ಸರಳವಾಗಿ ಅಳವಡಿಸಿಕೊಳ್ಳುವ ಕನಸನ್ನು ಬಹಳ ಜನರು, ಅದರಲ್ಲೂ ಮುಖ್ಯವಾಗಿ ಆಳುವ ವರ್ಗ ಮತ್ತು ಮಧ್ಯಮವರ್ಗದ ಜನರು ಕಾಣುತ್ತಿದ್ದರೆನ್ನುವದು ಈಗ ಸ್ಪಷ್ಟವಾಗಿದೆ. ಈ ಕನಸುಗಳ ಆಂತರ್ಯದಲ್ಲಿ ಪಾಶ್ಚಾತ್ಯ ನಾಗರೀಕತೆ ನಮ್ಮ ದೇಶಿ ಜೀವನಶೈಲಿಗಳಿಗಿಂತ ಉತ್ತಮವೆಂಬ ಭ್ರಮೆಯು ಸೇರಿತ್ತು. ಈ ರೀತಿಯ ಭ್ರಮೆಗಳನ್ನು ನಿಜವಾಗಿಸಿದ್ದವರು ಸಿನಿಮಾದವರು ಮತ್ತು ಸಾಂಸ್ಕೃತಿಕ ಜಗತ್ತು.

ಆಳವಾಗಿ ಬೇರು ಬಿಟ್ಟಿರುವ ಭಾರತೀಯ ಸಾಂಸ್ಕೃತಿಕ ಲೋಕದ ಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯಗಳಂತಹುವು ತನ್ನದೇ ಆದ ಜನಪದದ ವೈಶಿಷ್ಟ್ಯವನ್ನು ಈ ಪರಕೀಯ ಸಾಂಸ್ಕೃತಿಕ ದಬ್ಬಾಳಿಕೆಗೆ ಮುಖಾಮುಖಿಯಾಗಿ ಮೆರೆಸುತ್ತಾ, ಮರೆಯುತ್ತಾ, ಬಂದಂತಹ, ಕನ್ನಡ ಸಾಂಸ್ಕೃತಿಕ ಲೋಕದ ಮೂಲ ಆಶಯದೊಂದಿಗೆ ಮತ್ತು ಕನ್ನಡ ರಂಗಭೂಮಿಯ ಕುರಿತು ಹೊಂದಿದ ಕಳಕಳಿಯೊಂದಿಗೆ, ನಾಟಕ, ಅಭಿನಯ, ಕಲೆ, ಸಂಗೀತ, ಸಾಹಿತ್ಯ, ರಂಗಗಳಲ್ಲಿ ಬೆಂಗಳೂರು ಬಹು ಹಿಂದಿನಿಂದಲೂ ಪ್ರಮುಖ ಕೇಂದ್ರವೆನಿಸಿದೆ. ಇಂಥ ಕೇಂದ್ರ ಸ್ಥಳದಲ್ಲಿ ನಾಟ್ಯಾಸಕ್ತ ಪ್ರೇಕ್ಷಕರ ಅಭಿರುಚಿ ಹೆಚ್ಚಿಸುವ ವಿನೂತನ ಶೈಲಿಯ ರಂಗಪ್ರಯೋಗಗಳು ಕಲಾವಿದರಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅವಕಾಶ ನೀಡುವ ಒಂದು ವೇದಿಕೆ ಮತ್ತು ರಂಗಚಟುವಟಿಕೆಗಳಿಗೆ ಜೀವಂತಿಕೆಯನ್ನು ತುಂಬುವ ಹೊಸ, ಜನಪರ ಸಮಾಜಮುಖಿ ಕಳಕಳಿಯ ರಂಗಪ್ರಯೋಗ ನೀಡುವ ಉದ್ದೇಶದೊಂದಿಗೆ ತಮ್ಮ ಅವಿರತ-ರಂಗ ಬದುಕಿನೊಂದಿಗೆ ಬೆಳೆದಂತಹ ತಮ್ಮ ಅಂತರಾಳದಲ್ಲಿ ತುಂಬಿಕೊಂಡಂತಹ ರಂಗಶ್ರೀಯ ಉತ್ಸಾಹ, ಶ್ರಮ, ಶ್ರದ್ಧೆಯನ್ನು ಬಂಡವಾಳವಾಗಿಸಿಕೊಂಡ ಯುವ ದಂಪತಿಗಳಾದ, ನಾಟಕ, ಸಿನಿಮಾ, ಧಾರವಾಹಿಗಳಲ್ಲಿ ನಟನೆ, ನಿರ್ದೇಶನಗಳೆಂದು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡವರು ರಂಗಚೇತನಗಳಾದ ದೇವನಾಗೇಶ, ರತ್ನಾ ನಾಗೇಶ. ಬದುಕಿನಲ್ಲಿ ಕೈ ಹಿಡಿದ ಕನ್ನಡ ರಂಗಭೂಮಿಯ ಕೈಹಿಡಿದು ದಶಕಗಳ ಹಿಂದೆ ಸ್ಥಾಪಿಸಿ ಮುನ್ನಡೆಸಿದ ‘ನಂದನ’, ಇಂದು ಕನ್ನಡ ರಂಗಭೂಮಿ ಜಗತ್ತಲ್ಲಿ ಹೆಸರಾಗಿದೆ. ಬೆಂಗಳೂರಿನ ನಾಗಾಲೋಟದ ನಾಟಕ ಲೋಕದಲ್ಲಿ ‘ಹರಕೆಯ ಕುರಿ’ಯೊಂದಿಗೆ ಈ ತಂಡ ಪ್ರಾರಂಭಿಸಿದ ರಂಗಸಾಧನೆಗಳಿಂದ ರಂಗಾಸಕ್ತರ ಮನ ಗೆದ್ದುಕೊಂಡಿದೆ. ರಂಗ ಸಂಘಟನೆ, ನಾಟಕ ಪ್ರದರ್ಶನ, ನಿರ್ದೇಶನ, ನಿರ್ವಹಣೆ, ರಂಗಚಿಂತನೆ, ರಂಗತರಬೇತಿ ಶಿಬಿರ, ರಂಗಕರ್‍ಮಿಗಳ ಸಾಧನೆಯನ್ನು ಗೌರವಿಸುವ ವಿನೂತನ ಪರಂಪರೆಯೊಂದಿಗೆ ನಾಡಿನ ನಾಟಕ ಪ್ರೇಮಿಗಳ ಗಮನ ಸೆಳೆದ ‘ನಂದನ’ದ ಸಾಧನೆ ಗುರುತರವಾದುದು.

ಇತ್ತೀಚೆಗೆ ರಂಗಕರ್ಮಿಗಳು, ರಂಗ ತಂಡಗಳು, ರಂಗ ಜಗತ್ತಿಗೆ, ರಂಗಾಸಕ್ತರಿಗೆ ಏನಾದರೂ ಹೊಸತನದೊಂದಿಗೆ, ರಂಗ ಪ್ರಯೋಗಕ್ಕಾಗಿ ಹಂಬಲಿಸುತ್ತಾ, ತಡಪಡಿಸುತ್ತಿದ್ದ ಸಂದರ್ಭದಲ್ಲಿಯೇ, ದೇವ-ರತ್ನಾರ ನೇತೃತ್ವದಲ್ಲಿ ವಿವಿಧ ವರ್ಗಗಳಿಂದ ಕಲೆಹಾಕಿದ, ಕಲಾವಿದರು, ರಂಗತಜ್ಞರನ್ನು ಒಂದೆಡೆ ಕೂಡಿಸಿ ‘ರಂಗ ಶತಕ’ವೆಂಬ ಸತತ ನೂರು ಗಂಟೆಗಳ ಕಾಲ ರಂಗ ಪ್ರದರ್ಶನವನ್ನು ಸುಮಾರು ನಲವತ್ತು ನಾಟಕಗಳನ್ನು, ಅರ್ಧಗಂಟೆಯ ನಾಟಕದಿಂದ ಹಿಡಿದು, ಮೂರು ಗಂಟೆಯ ಸುದೀರ್ಘ ನಾಟಕದವರೆಗೆ, ವಿವಿಧ ಬಗೆಯ ಕನ್ನಡದ ಬೇರೆ-ಬೇರೆ ಪ್ರಮುಖ ನಾಟಕಕಾರ ನಾಟಕಗಳನ್ನು ರಂಗದ ಮೇಲೆ ತಂದು ಪ್ರತಿ ನಾಟಕ ಪ್ರದರ್ಶನವು ತನ್ನ ಗುಣಮಟ್ಟದಲ್ಲಿ ಲವಲೇಶವು, ಲೋಪ, ಕೊರತೆಗೆ ಅವಕಾಶ ನೀಡದೆ ಉತ್ತಮ ಸಂಯೋಜನೆಯ ಗುಣಾತ್ಮಕ ಅಂಶಗಳಿಂದ ನೂರು ಗಂಟೆಗಳವರೆಗೆ, ಪ್ರೇಕ್ಷಕರನ್ನು ಹಿಡಿದಿಟ್ಟು, ಅವರ ಮನಗೆದ್ದು, ಯಶಸ್ವಿಗೊಳಿಸಿದ ‘ರಂಗಶತಕ’ ‘ನಂದನ’ದ ದಾಖಲೆಯೊಂದಿಗೆ ಅದು ಮಾಡಿದ ಸಾಧನೆಯು ರಾಷ್ಟ್ರೀಯ ರಂಗಭೂಮಿಗೆ ಸಂಬಂಧಿಸಿದ ದಾಖಲೆಯೆಂದು ಅಧಿಕೃತವಾಗಿ ‘ಲಿಮ್ಕಾ’ ದಾಖಲೆ ಪುಸ್ತಕದಲ್ಲಿ ನಮೂದಾಗಿರುವದು. ಇಡೀ ಕನ್ನಡ ರಂಗಜಗತ್ತು, ರಂಗಭೂಮಿಗೆ ಹೆಮ್ಮೆಪಡುವಂತ ಸಾಧನೆಗೈದ ‘ನಂದನ’ ಕನ್ನಡಿಗರ ಹೆಮ್ಮೆಯ ರಂಗಸಂಸ್ಥೆಯನ್ನುವದರಲ್ಲಿ ಎರಡು ಮಾತಿಲ್ಲ.

ಈಗಾಗಲೆ ಅಂತರಾಷ್ಟ್ರೀಯ ದಾಖಲೆ ಇರುವದೇ ೫೭ ಗಂಟೆಗಳ ಸತತ ನಾಟಕ ಪ್ರದರ್ಶನ, ಈ ಅಂತರಾಷ್ಟ್ರೀಯ ದಾಖಲೆಯನ್ನು ಹಿಮ್ಮೆಟ್ಟಿಸಿರುವ ‘ನಂದನ’ ತಂಡ ನೂರು ಗಂಟೆಗಳ ಸತತ ರಂಗಪ್ರದರ್ಶನದಿಂದ ಕನ್ನಡ ರಂಗಭೂಮಿಯ ಜಾಗತಿಕ ರಂಗ ದಾಖಲೆಯಾಗಿದೆ.

ಕನ್ನಡ ರಂಗಭೂಮಿಯೊಂದಿಗೆ ಸದಾ ಹೆಜ್ಜೆಯಿಡುತ್ತಾ ಹಲವು ಹತ್ತು ಹೊಸ ಪ್ರಯೋಗಗಳನ್ನು ಜೊತೆಗೆ ರಂಗ ಸಂಘಟನೆಯಂತ ಮಹತ್ವದ ಕೆಲಸವನ್ನು, ಆರ್ಥಿಕವಾಗಿ ಸವಾಲು ಸ್ವೀಕರಿಸಿ ಎದೆಗುಂದದೆ “ರಾವಿ ನದಿ ದಂಡೆಯ ಮೇಲೆ” ಕೋಮುಸೌಹಾರ್ದತೆಯನ್ನು ಸಾರುವ ಕೃತಿಯನ್ನು ದಿಟ್ಟತನದ ಸವಾಲಾಗಿ ರಂಗ ಮೇಲೆ ತರುವಂತಹ ಎದೆಗಾರಿಕೆ ಮರೆಯುವ ಸಾಮಾಜಿಕ ಕಳಕಳಿಯ ನಿಷ್ಟೆಯಲಿ ರಂಗ ಸೇವೆ ಮಾಡುತ್ತಾ ರಂಗ ಚಟುವಟಿಕೆಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದಾ ರಂಗಚಿಂತನೆ ಯೊಂದಿಗೆ ತಮ್ಮ ಪ್ರತಿಭೆ ಮತ್ತು ರಂಗಚಟುವಟಿಕೆ, ದೂರದರ್ಶನ, ಚಲನಚಿತ್ರ, ಅಭಿನಯ ನಿರ್ದೆಶನಗಳಂತಹ ಸಾಂಸ್ಕೃತಿಕ ಲೋಕದ ಒಡನಾಟದೊಂದಿಗೆ, ಸಾಂಸ್ಕೃತಿಕ ರಾಯಭಾರಿಗಳಾಗಿರುವ ದೇವ-ರತ್ನಾ ನಾಗೇಶ ಹಾಗೂ ಅವರ ರಂಗ ಗೆಳೆಯರು ಕನ್ನಡ ರಂಗಭೂಮಿಯ ಗೌರವ ಹೆಚ್ಚಿಸಿದ ಅವರಿಗೂ ಅವರ ‘ನಂದನ’ಕ್ಕೆ ಅಭಿನಂದನೆಗಳು. ‘ನಂದನ’ ರಂಗಭೂಮಿಯ ಜಗತ್ತಲ್ಲಿ ಕ್ರಿಯಾಶೀಲತೆಯೊಂದಿಗೆ, ನಾಟಕ ಚಟುವಟಿಕೆಗಳ ಮತ್ತು ರಂಗಲೋಕದ ಜೀವಂತಿಕೆಗಾಗಿ ಸದಾ ಶ್ರಮಿಸುವಂತಾಗಲಿ, ಹೆಚ್ಚು-ಹೆಚ್ಚು ರಂಗಪ್ರಯೋಗಗಳನ್ನು ಹೊಸತನದೊಂದಿಗೆ ನೀಡಲಿ.

ಕಳೆದ ಐದಾರು ದಶಕಗಳಿಂದ ‘ವೃತ್ತಿ-ಹವ್ಯಾಸಿ’ ರಂಗಭೂಮಿಯಲ್ಲಿ ಮಾತ್ರ ಯಾವುದೇ ಹೇಳಿಕೊಳ್ಳುವಂತಹ ಗುಣಾತ್ಮಕ ಬದಲಾವಣೆ ಆಗದಿರುವಂತಹ ಕರ್ನಾಟಕ ರಂಗಭೂಮಿಯ ತೀವ್ರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ‘ನಂದನ’ ಚಾಲನೆ ನೀಡುವದರೊಂದಿಗೆ ನಾಡಿನ ಸಮಾಜಮುಖಿ, ಜನಪರ ಸ್ಪಂದಿಸುವ ಕ್ರಿಯಾಶೀಲ ರಂಗಸಂಸ್ಥೆಯಾಗಿ ‘ನಂದನ’ವು ನಾಟ್ಯಸೇವೆ ಸದಾ ಗೈಯ್ಯುವಂತಾಗಲಿ, ಕನ್ನಡಿಗರ ಹೆಮ್ಮೆಯ ರಂಗ ಸಂಸ್ಥೆಯಾಗಿ ಮುನ್ನಡೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟ್ಯೂಷನ್
Next post ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys