Home / ಕವನ / ಕವಿತೆ / ಪ್ರೇಮ ಎಷ್ಟೊಂದು ಅನೈತಿಕ

ಪ್ರೇಮ ಎಷ್ಟೊಂದು ಅನೈತಿಕ

 

ಇದು ಶುದ್ಧ ಸುಳ್ಳು; ಚಾರಿತ್ರಿಕ ಸತ್ಯ.

ಸಿಡಿಲಿನ ಹೊಡೆತದಂತೆ ಸೂಳೆಯರ ಕೇವಲ ಒಂದು ನೋಟ
ಮತ್ತು ಸ್ಪರ್ಶದಿಂದ ದಿಕ್ಕೆಟ್ಟ ಭೂಮಿ, ಗಾಳಿ, ನೀರು ಮತ್ತು
ಸೂರ್ಯಚಂದ್ರರೂ ತಲೆ ತಿರುಕರಂತಾಗಿದ್ದಾರೆ.

ಏಕೆಂದರೆ, ಇದು ಕೇವಲ ಅವೆಲ್ಲವುಗಳಿಂದ ಮುನ್ನಡೆದ ಕ್ರಿಯೆ.
ನಡತೆಗೆಟ್ಟ ಕೆಲವರು ದೂರವಾದ? ಅವೆಲ್ಲವೂ ಕ್ಷಣಕ್ಷಣಕ್ಕೂ
ಬದಲಾಗುವಷ್ಟರಮಟ್ಟಿಗೆ ಕ್ರಿಯಾಶೀಲತೆಯನ್ನು ಸಾಧಿಸಿಕೊಂಡಿವೆ.

ಯಾರೋ ನಗುವುದು, ಮುಗುಳ್ನಗುವುದು-
ಹೃದಯಭಾಗಕ್ಕೆ ತಟ್ಟುತ್ತಲೇ ಪ್ರೇಮ ಹುರುಳಿಲ್ಲದ ವಾದದಂತೆ
ದೌಡಾಯಿಸತೊಡಗುವುದು.

ಜಗತ್ತು ಸೃಷ್ಟಿಯಾದಾಗ ಹೂಗೊನೆಗಳಂತೆ ತೇಲಿಬಂದ
ಬೆಟ್ಟಗುಡ್ಡಗಳು, ಕಪ್ಪುಕಡಲು, ಮರಗಿಡಗಳು, ಪ್ರಾಣಿಸಂಕುಲ,
ಇಡೀ ಮಾನವಕುಲವನ್ನೇ ಸುಟ್ಟು ಕರಕಲಾಗಿಸಿಬಿಡುವ ಜ್ವಾಲಾಮುಖಿ;

ಗುರುತೇ ಇಲ್ಲದಂತೆ ನಶಿಸಿಹೋದರೂ
ಪ್ರೇಮ ಮತ್ತೊಮ್ಮೆ ಸಂಸ್ಕರಣೆಗೊಂಡು ಹೃದಯಭಾಗದಲ್ಲಿ
ಶೇಖರಣೆಯಾಗುವುದು.

ಜಡ ಆತ್ಮಗಳು ಮತ್ತೊಮ್ಮೆ ಹಿರಿಯ ಚೇತನಗಳಂತೆ
ಬಿರಿಯತೊಡಗುತ್ತವೆ.

ಪ್ರೇಮದ ಮಾತನಾಡುವ ಎಷ್ಟೋ ಜನರು
ಬೆಚ್ಚನೆಯ ಮನೆಯಲ್ಲೇ ವಾಸಿಸತೊಡಗುತ್ತಾರೆ,
ತಂಗಲು ಬರುವ ದೂರದೂರಿನ ಪ್ರಯಾಣಿಕರು
ತಮ್ಮ ಅನಾನುಕೂಲತೆಗಳ ಬಗ್ಗೆ ಚಿಂತಿಸತೊಡಗುತ್ತಾರೆ;
ಗೊಣಗಾಡಿಕೊಂಡು ನಿದ್ರೆಗಿಳಿಯುತ್ತಾರೆ.

*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...