Home / ಕವನ / ಕವಿತೆ / ಪ್ರೇಮ ಎಷ್ಟೊಂದು ಅನೈತಿಕ

ಪ್ರೇಮ ಎಷ್ಟೊಂದು ಅನೈತಿಕ

 

ಇದು ಶುದ್ಧ ಸುಳ್ಳು; ಚಾರಿತ್ರಿಕ ಸತ್ಯ.

ಸಿಡಿಲಿನ ಹೊಡೆತದಂತೆ ಸೂಳೆಯರ ಕೇವಲ ಒಂದು ನೋಟ
ಮತ್ತು ಸ್ಪರ್ಶದಿಂದ ದಿಕ್ಕೆಟ್ಟ ಭೂಮಿ, ಗಾಳಿ, ನೀರು ಮತ್ತು
ಸೂರ್ಯಚಂದ್ರರೂ ತಲೆ ತಿರುಕರಂತಾಗಿದ್ದಾರೆ.

ಏಕೆಂದರೆ, ಇದು ಕೇವಲ ಅವೆಲ್ಲವುಗಳಿಂದ ಮುನ್ನಡೆದ ಕ್ರಿಯೆ.
ನಡತೆಗೆಟ್ಟ ಕೆಲವರು ದೂರವಾದ? ಅವೆಲ್ಲವೂ ಕ್ಷಣಕ್ಷಣಕ್ಕೂ
ಬದಲಾಗುವಷ್ಟರಮಟ್ಟಿಗೆ ಕ್ರಿಯಾಶೀಲತೆಯನ್ನು ಸಾಧಿಸಿಕೊಂಡಿವೆ.

ಯಾರೋ ನಗುವುದು, ಮುಗುಳ್ನಗುವುದು-
ಹೃದಯಭಾಗಕ್ಕೆ ತಟ್ಟುತ್ತಲೇ ಪ್ರೇಮ ಹುರುಳಿಲ್ಲದ ವಾದದಂತೆ
ದೌಡಾಯಿಸತೊಡಗುವುದು.

ಜಗತ್ತು ಸೃಷ್ಟಿಯಾದಾಗ ಹೂಗೊನೆಗಳಂತೆ ತೇಲಿಬಂದ
ಬೆಟ್ಟಗುಡ್ಡಗಳು, ಕಪ್ಪುಕಡಲು, ಮರಗಿಡಗಳು, ಪ್ರಾಣಿಸಂಕುಲ,
ಇಡೀ ಮಾನವಕುಲವನ್ನೇ ಸುಟ್ಟು ಕರಕಲಾಗಿಸಿಬಿಡುವ ಜ್ವಾಲಾಮುಖಿ;

ಗುರುತೇ ಇಲ್ಲದಂತೆ ನಶಿಸಿಹೋದರೂ
ಪ್ರೇಮ ಮತ್ತೊಮ್ಮೆ ಸಂಸ್ಕರಣೆಗೊಂಡು ಹೃದಯಭಾಗದಲ್ಲಿ
ಶೇಖರಣೆಯಾಗುವುದು.

ಜಡ ಆತ್ಮಗಳು ಮತ್ತೊಮ್ಮೆ ಹಿರಿಯ ಚೇತನಗಳಂತೆ
ಬಿರಿಯತೊಡಗುತ್ತವೆ.

ಪ್ರೇಮದ ಮಾತನಾಡುವ ಎಷ್ಟೋ ಜನರು
ಬೆಚ್ಚನೆಯ ಮನೆಯಲ್ಲೇ ವಾಸಿಸತೊಡಗುತ್ತಾರೆ,
ತಂಗಲು ಬರುವ ದೂರದೂರಿನ ಪ್ರಯಾಣಿಕರು
ತಮ್ಮ ಅನಾನುಕೂಲತೆಗಳ ಬಗ್ಗೆ ಚಿಂತಿಸತೊಡಗುತ್ತಾರೆ;
ಗೊಣಗಾಡಿಕೊಂಡು ನಿದ್ರೆಗಿಳಿಯುತ್ತಾರೆ.

*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...