Home / ಕವನ / ಕವಿತೆ / ಪ್ರೇಮ ಎಷ್ಟೊಂದು ಅನೈತಿಕ

ಪ್ರೇಮ ಎಷ್ಟೊಂದು ಅನೈತಿಕ

 

ಇದು ಶುದ್ಧ ಸುಳ್ಳು; ಚಾರಿತ್ರಿಕ ಸತ್ಯ.

ಸಿಡಿಲಿನ ಹೊಡೆತದಂತೆ ಸೂಳೆಯರ ಕೇವಲ ಒಂದು ನೋಟ
ಮತ್ತು ಸ್ಪರ್ಶದಿಂದ ದಿಕ್ಕೆಟ್ಟ ಭೂಮಿ, ಗಾಳಿ, ನೀರು ಮತ್ತು
ಸೂರ್ಯಚಂದ್ರರೂ ತಲೆ ತಿರುಕರಂತಾಗಿದ್ದಾರೆ.

ಏಕೆಂದರೆ, ಇದು ಕೇವಲ ಅವೆಲ್ಲವುಗಳಿಂದ ಮುನ್ನಡೆದ ಕ್ರಿಯೆ.
ನಡತೆಗೆಟ್ಟ ಕೆಲವರು ದೂರವಾದ? ಅವೆಲ್ಲವೂ ಕ್ಷಣಕ್ಷಣಕ್ಕೂ
ಬದಲಾಗುವಷ್ಟರಮಟ್ಟಿಗೆ ಕ್ರಿಯಾಶೀಲತೆಯನ್ನು ಸಾಧಿಸಿಕೊಂಡಿವೆ.

ಯಾರೋ ನಗುವುದು, ಮುಗುಳ್ನಗುವುದು-
ಹೃದಯಭಾಗಕ್ಕೆ ತಟ್ಟುತ್ತಲೇ ಪ್ರೇಮ ಹುರುಳಿಲ್ಲದ ವಾದದಂತೆ
ದೌಡಾಯಿಸತೊಡಗುವುದು.

ಜಗತ್ತು ಸೃಷ್ಟಿಯಾದಾಗ ಹೂಗೊನೆಗಳಂತೆ ತೇಲಿಬಂದ
ಬೆಟ್ಟಗುಡ್ಡಗಳು, ಕಪ್ಪುಕಡಲು, ಮರಗಿಡಗಳು, ಪ್ರಾಣಿಸಂಕುಲ,
ಇಡೀ ಮಾನವಕುಲವನ್ನೇ ಸುಟ್ಟು ಕರಕಲಾಗಿಸಿಬಿಡುವ ಜ್ವಾಲಾಮುಖಿ;

ಗುರುತೇ ಇಲ್ಲದಂತೆ ನಶಿಸಿಹೋದರೂ
ಪ್ರೇಮ ಮತ್ತೊಮ್ಮೆ ಸಂಸ್ಕರಣೆಗೊಂಡು ಹೃದಯಭಾಗದಲ್ಲಿ
ಶೇಖರಣೆಯಾಗುವುದು.

ಜಡ ಆತ್ಮಗಳು ಮತ್ತೊಮ್ಮೆ ಹಿರಿಯ ಚೇತನಗಳಂತೆ
ಬಿರಿಯತೊಡಗುತ್ತವೆ.

ಪ್ರೇಮದ ಮಾತನಾಡುವ ಎಷ್ಟೋ ಜನರು
ಬೆಚ್ಚನೆಯ ಮನೆಯಲ್ಲೇ ವಾಸಿಸತೊಡಗುತ್ತಾರೆ,
ತಂಗಲು ಬರುವ ದೂರದೂರಿನ ಪ್ರಯಾಣಿಕರು
ತಮ್ಮ ಅನಾನುಕೂಲತೆಗಳ ಬಗ್ಗೆ ಚಿಂತಿಸತೊಡಗುತ್ತಾರೆ;
ಗೊಣಗಾಡಿಕೊಂಡು ನಿದ್ರೆಗಿಳಿಯುತ್ತಾರೆ.

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...