ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಸಾಮಾನ್ಯವಾಗಿ ಹೊರಗಡೆ ಹೆಣ್ಣುಮಕ್ಕಳು ಸ್ವತಂತ್ರವಾಗಿ ತಿರುಗಾಡುವಾಗ ಪುಂಡಪೋಕರಿಗಳ ಭಯ, ಕಳ್ಳಕಾಕರಭಯ ಇದ್ದೇ ಇರುತ್ತದೆ. ಸ್ವತಂತ್ರ ದೇಶದಲ್ಲಿ ಅತಂತ್ರವಾದ ಈ ಅಬಲೆಯರ ಸ್ಥಿತಿಯನ್ನು ಕಂಡೇ ಅನೇಕ ಕಡೆ ಕರಾಟೆ, ಕುಂಗಫೂಗಳನ್ನು ಕಲಿಸಿ ಇವರಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ಕಂಡುಕೊಳ್ಳಲಾಯಿತು. ಒಂದಕ್ಕಿಂತಲೂ ಹೆಚ್ಚು ಅಪಾಯಕಾರಿ ಜನ ಒಂಟಿ ಮಹಿಳೆಯ ಮೇಲೆ ಆಕ್ರಮಣ ಮಾಡಿದಾಗ ತನ್ನನ್ನು ರಕ್ಷಿಸಿಕೊಳ್ಳಲು ಒಂದು ಹೊಸ ಅಸ್ತ್ರವನ್ನು ನಮ್ಮ ಬೆಂಗಳೂರಿನವರೇ ಆದ ರಾಣಾಸಿಂಗ್ ಎಂಬುವವರು ಕಂಡು ಹಿಡಿದರು. ತಮ್ಮ ‘ಆಕ್ಸ್‌ಗ್ಲೋಮ್ ’, ಸಂಸ್ಥೆಯಿಂದ ಇಂಥಹ ಅಸ್ತ್ರಗಳು ಈಗಾಗಲೇ ಅಸಂಖ್ಯವಾಗಿ ಸೃಷ್ಟಿಯಾಗುತ್ತವೆ. ಈಗಾಗಲೇ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಪ್ರತಿ ಪೋಲಿಸರ ಕೈಯಲ್ಲಿ ಕಳ್ಳರನ್ನು, ವಂಚಕರನ್ನು ಏಕಾಂಗಿಯಾಗಿ ಸದೆಬಡಿಯಲು ಇಂಥಹ ಅಸ್ತ್ರಗಳಿರುತ್ತವೆ. ಇದು ಸೊಂಟಕ್ಕೆ ಸಿಕ್ಕಿಸಿಕೊಳ್ಳಬಹುದಾದಷ್ಟು ಸಣ್ಣದಾದ ಡಬ್ಬಿ, ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳಬಹುದಾದ ಅಸ್ತ್ರ ಇದಾಗಿದೆ. ಇದನ್ನು ಬಳೆಸಲು ಕಾನೂನು ಸಮ್ಮತಿಯನ್ನು ಕೂಡ ಪಡೆಯಲಾಗಿದೆ. ಹೆಚ್ಚಾಗಿ ಒಂಟಿ ಮಹಿಳೆಯರು, ಕಾಲೇಜು ಹುಡುಗಿಯರಿಗಾಗಿ ಇದನ್ನು ರೂಪಿಸಲಾಗಿದೆ. ಇಂಥಹ ವೈಶಿಷ್ಟ್ಯ ಪೂರ್ಣವಾದ ಅಸ್ತ್ರದ ಹೆಸರು ‘ಕೊಬ್ರಾ’ ಹಾಗಾದರೆ ಈ ಕೊಬ್ರಾದಲ್ಲಿ ಏನಿದೆ? ಇದೊಂದು ಸಣ್ಣಡಬ್ಬಿಯಾಗಿದ್ದು ಖಾರದಪುಡಿಯನ್ನು ಎರಚುವ (ಸ್ಪ್ರೇ ಮಾಡುವ) ಅಸ್ತ್ರ.

ಖಾರದ ಮೆಣಸಿನ ಕಾಯಿಗಾಗಿ ಪ್ರಸಿದ್ಧಿಯಾದ ಆಂಧ್ರಪ್ರದೇಶದಿಂದ ತರಿಸಿದ ಖಾರದಪುಡಿಯನ್ನು ಈ ಉಪಕರಣದಲ್ಲಿ ತುಂಬಲಾಗುತ್ತದೆ. ಅತಿ ಖಾರಕ್ಕೆ ಕಾರಣವಾಗಿರುವ ‘ಓಲಿಯಾರೆಸಿನ್ ಕ್ಯಾಪ್ಲಿಯನಿನ್’, ಎಂಬ ಸಾರವನ್ನು ಇದರಲ್ಲಿ ಸೇರಿಸಲಾಗಿದೆ. ಇಂಥಹ ಸಣ್ಣ ಹಿಡಿದುಕೊಳ್ಳಲು ಅನುವು ಇರುವ ಈ ಸಣ್ಣ ಡಬ್ಬಿಯನ್ನು ಸೊಂಟಕ್ಕೆ ಕಾಣದಂತೆ ಕಟ್ಟಿಕೊಳ್ಳಬಹುದು. ದುಷ್ಟರು ದಾಳಿ ನಡೆಸಿದಾಗ ಅವರ ಮೇಲೆ ಒಂದೇ ಒಂದು ಸಲ ಸ್ಪ್ರೇ ಮಾಡಿದರೆ ಸಾಕು ಆ ದುಷ್ಟರ ಕಣ್ಣುಗಳಲ್ಲಿ ವಿಪರೀತ ಉರಿವುಂಟಾಗುತ್ತದೆ. ಮೂಗು ಮುಖ ಕೂಡ ನೋವಿಗೊಳಗಾಗುತ್ತದೆ. ಆತ ತಕ್ಷಣ ಕುರುಡನಾಗುತ್ತಾನೆ. (ತಾತ್ಕಾಲಿಕವಾಗಿ) ಈ ಉರಿತ ಕನಿಷ್ಟ ಎರಡು ಗಂಟೆಗಳ ಕಾಲ ಈ ಪರಿಣಾಮ ಇರುತ್ತದೆ. ಆಗ ಆ ವ್ಯಕ್ತಿ ನಿಂತನೆಲದಲ್ಲಿಯೆ ಕುಸಿದು ಬೀಳುತ್ತಾನೆ. ಹೇಗಿದೆ ನೋಡಿದಿರಾ ಒಂಟಿ ಮಹಿಳೆಯರ ರಕ್ಷಣೆಯ ಅಸ್ತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಟ್ಟೊಡಾ ಕುಂಭ ಕುಂಡವಾಗೊದಗಿದರಷ್ಟೇ ಸಾಲದೇ ?
Next post ಗೆಲುವಾಗಲಿ ನಮ್ಮ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…