ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ

ಸಾಮಾನ್ಯವಾಗಿ ಹೊರಗಡೆ ಹೆಣ್ಣುಮಕ್ಕಳು ಸ್ವತಂತ್ರವಾಗಿ ತಿರುಗಾಡುವಾಗ ಪುಂಡಪೋಕರಿಗಳ ಭಯ, ಕಳ್ಳಕಾಕರಭಯ ಇದ್ದೇ ಇರುತ್ತದೆ. ಸ್ವತಂತ್ರ ದೇಶದಲ್ಲಿ ಅತಂತ್ರವಾದ ಈ ಅಬಲೆಯರ ಸ್ಥಿತಿಯನ್ನು ಕಂಡೇ ಅನೇಕ ಕಡೆ ಕರಾಟೆ, ಕುಂಗಫೂಗಳನ್ನು ಕಲಿಸಿ ಇವರಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ಕಂಡುಕೊಳ್ಳಲಾಯಿತು. ಒಂದಕ್ಕಿಂತಲೂ ಹೆಚ್ಚು ಅಪಾಯಕಾರಿ ಜನ ಒಂಟಿ ಮಹಿಳೆಯ ಮೇಲೆ ಆಕ್ರಮಣ ಮಾಡಿದಾಗ ತನ್ನನ್ನು ರಕ್ಷಿಸಿಕೊಳ್ಳಲು ಒಂದು ಹೊಸ ಅಸ್ತ್ರವನ್ನು ನಮ್ಮ ಬೆಂಗಳೂರಿನವರೇ ಆದ ರಾಣಾಸಿಂಗ್ ಎಂಬುವವರು ಕಂಡು ಹಿಡಿದರು. ತಮ್ಮ ‘ಆಕ್ಸ್‌ಗ್ಲೋಮ್ ’, ಸಂಸ್ಥೆಯಿಂದ ಇಂಥಹ ಅಸ್ತ್ರಗಳು ಈಗಾಗಲೇ ಅಸಂಖ್ಯವಾಗಿ ಸೃಷ್ಟಿಯಾಗುತ್ತವೆ. ಈಗಾಗಲೇ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಪ್ರತಿ ಪೋಲಿಸರ ಕೈಯಲ್ಲಿ ಕಳ್ಳರನ್ನು, ವಂಚಕರನ್ನು ಏಕಾಂಗಿಯಾಗಿ ಸದೆಬಡಿಯಲು ಇಂಥಹ ಅಸ್ತ್ರಗಳಿರುತ್ತವೆ. ಇದು ಸೊಂಟಕ್ಕೆ ಸಿಕ್ಕಿಸಿಕೊಳ್ಳಬಹುದಾದಷ್ಟು ಸಣ್ಣದಾದ ಡಬ್ಬಿ, ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳಬಹುದಾದ ಅಸ್ತ್ರ ಇದಾಗಿದೆ. ಇದನ್ನು ಬಳೆಸಲು ಕಾನೂನು ಸಮ್ಮತಿಯನ್ನು ಕೂಡ ಪಡೆಯಲಾಗಿದೆ. ಹೆಚ್ಚಾಗಿ ಒಂಟಿ ಮಹಿಳೆಯರು, ಕಾಲೇಜು ಹುಡುಗಿಯರಿಗಾಗಿ ಇದನ್ನು ರೂಪಿಸಲಾಗಿದೆ. ಇಂಥಹ ವೈಶಿಷ್ಟ್ಯ ಪೂರ್ಣವಾದ ಅಸ್ತ್ರದ ಹೆಸರು ‘ಕೊಬ್ರಾ’ ಹಾಗಾದರೆ ಈ ಕೊಬ್ರಾದಲ್ಲಿ ಏನಿದೆ? ಇದೊಂದು ಸಣ್ಣಡಬ್ಬಿಯಾಗಿದ್ದು ಖಾರದಪುಡಿಯನ್ನು ಎರಚುವ (ಸ್ಪ್ರೇ ಮಾಡುವ) ಅಸ್ತ್ರ.

ಖಾರದ ಮೆಣಸಿನ ಕಾಯಿಗಾಗಿ ಪ್ರಸಿದ್ಧಿಯಾದ ಆಂಧ್ರಪ್ರದೇಶದಿಂದ ತರಿಸಿದ ಖಾರದಪುಡಿಯನ್ನು ಈ ಉಪಕರಣದಲ್ಲಿ ತುಂಬಲಾಗುತ್ತದೆ. ಅತಿ ಖಾರಕ್ಕೆ ಕಾರಣವಾಗಿರುವ ‘ಓಲಿಯಾರೆಸಿನ್ ಕ್ಯಾಪ್ಲಿಯನಿನ್’, ಎಂಬ ಸಾರವನ್ನು ಇದರಲ್ಲಿ ಸೇರಿಸಲಾಗಿದೆ. ಇಂಥಹ ಸಣ್ಣ ಹಿಡಿದುಕೊಳ್ಳಲು ಅನುವು ಇರುವ ಈ ಸಣ್ಣ ಡಬ್ಬಿಯನ್ನು ಸೊಂಟಕ್ಕೆ ಕಾಣದಂತೆ ಕಟ್ಟಿಕೊಳ್ಳಬಹುದು. ದುಷ್ಟರು ದಾಳಿ ನಡೆಸಿದಾಗ ಅವರ ಮೇಲೆ ಒಂದೇ ಒಂದು ಸಲ ಸ್ಪ್ರೇ ಮಾಡಿದರೆ ಸಾಕು ಆ ದುಷ್ಟರ ಕಣ್ಣುಗಳಲ್ಲಿ ವಿಪರೀತ ಉರಿವುಂಟಾಗುತ್ತದೆ. ಮೂಗು ಮುಖ ಕೂಡ ನೋವಿಗೊಳಗಾಗುತ್ತದೆ. ಆತ ತಕ್ಷಣ ಕುರುಡನಾಗುತ್ತಾನೆ. (ತಾತ್ಕಾಲಿಕವಾಗಿ) ಈ ಉರಿತ ಕನಿಷ್ಟ ಎರಡು ಗಂಟೆಗಳ ಕಾಲ ಈ ಪರಿಣಾಮ ಇರುತ್ತದೆ. ಆಗ ಆ ವ್ಯಕ್ತಿ ನಿಂತನೆಲದಲ್ಲಿಯೆ ಕುಸಿದು ಬೀಳುತ್ತಾನೆ. ಹೇಗಿದೆ ನೋಡಿದಿರಾ ಒಂಟಿ ಮಹಿಳೆಯರ ರಕ್ಷಣೆಯ ಅಸ್ತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಟ್ಟೊಡಾ ಕುಂಭ ಕುಂಡವಾಗೊದಗಿದರಷ್ಟೇ ಸಾಲದೇ ?
Next post ಗೆಲುವಾಗಲಿ ನಮ್ಮ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…