Home / ಕವನ / ಕವಿತೆ / ದರ್ಶನ

ದರ್ಶನ

ಅರೆ ನಿದ್ದ ಅರೆ ಅರಿವು,
ಮಂಪರು ದಾರಿ ಹಿಡಿದು
ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ;
ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ
ಜನ ತಿಕ್ಕಲು ಕುಣಿತ;
ಏನೇನೊ ನೋಡಿ ಏನೇನೊ ಹಾಡುವ
ಕನಸ ಕೈಗಾರಿಕಾಶಾಲೆ;
ಕಂಡದ್ದ ಕಲೆಸಿ ಕಾಣದ್ದ ಕಣ್ಣಿಗೆ ತೆರೆವ
ಚಂಡಸೃಷ್ಟಿಯ ಲೀಲೆ.
ನೋಡುತ್ತ ಹೋದೆ.

‘ಹುಗಿದ ಹಳ ಬಾವಿಯೊಳ’ ತಾಳ ಬೇತಾಳ,
ಅರಿಯಬಾರದು ಹೊರಗೆ ಹೂವ ತಳದಾಳ.
ಆಕಾರವೇನೊ ಇದೆ ಆಕೃತಿಯೆ ನಷ್ಟ,
ಜರುಗುತಿದೆ ಏನೇನೊ ತಿಳಿಯುವದೆ ಕಷ್ಟ.

ಹರಿದ ಮೈ ಮುರಿದ ತಲೆ ಬುಡವಿರದ ಬೆಟ್ಟ,
ಹುತ್ತಗಳ ಕರಿಗಣ್ಣು ಕಬಳಿಸಿವೆ ಗುಟ್ಟ.
ಚುಕ್ಕಿಗಳ ಧಿಕ್ಕರಿಸಿ ಇರುಳೊಡೆದ ಕಾಡು,
ತೇಗಿ ಕೂಗುತ್ತಿತ್ತು ಬೆಚ್ಚಿಸುವ ಹಾಡು.
ಆಚೆ ಕಡೆ ಮುದಿ ಆಲ, ಕೆದರುತಲೆ ಕಂಬ,
ಈಚೆ ಈ ಭಾರಿ ಮನೆ, ಮೂಗಿರದ ಜಂಬ.
ಹಿಂದೆ ಎಂದೋ ಕಡಲ ಮೇಲೆಲ್ಲ ನಡೆದು
ಬಿರುಗಾಳಿ ಬಡಿದೋ
ದಾಳಿಯಲಿ ಸಿಡಿದೋ
ತಳ ಸೇರಿ ಎಲ್ಲೆಲ್ಲು ಬಿದ್ದಿರುವ ಹಡಗುಗಳ
ಅವಶೇಷ ಶೈಲಿಯಲಿ ತಂತಿ ಮನೆ ಕಂಬ.

ಹಣ ಚಿಗುರಿ ಹರಿದಿತ್ತು ನದಿಯಂತೆ ಧೂಪ,
ಮಾನವರ ಮೈಯಲ್ಲಿ ಮೃಗದ ಆಲಾಪ.
ಮೈಯಿರದ ಹಕ್ಕಿ ಹಸಿವಿನಲಿ ಸೊಕ್ಕಿ
ಹಿಗ್ಗಿ ಹಾಕುತ್ತಿತ್ತು ಕಿವಿತುಂಬ ಶಾಪ.

ತುಟಿ ಮೂಡಿ ಬಂಡೆಗಳು ಕುಡಿದಂತೆ ಕಳ್ಳು,
ಕೊಂಬೆಯಲಿ ಮುಖವರಳಿ ಹಾಕಿದವು ಸಿಳ್ಳು.
ಮೃಗಗಳಿಗೆ ಒಂದೊಂದು ಅಂಗಕ್ಕು ಒಡವೆ
ಸತ್ಯ ಸುಳ್ಳಿಗೆ ನಡೆದು ಪ್ರತಿಗಳಿಗೆ ಮದುವೆ.

ವಿಶ್ವರೂಪಕ್ಕೆ ಕಂಗಾಲಾದೆ ಪಾರ್ಥ.
ಚೀರಿ ಕಣ್ತೆರೆದೆ.
ಮತ್ತೆ ಪರಿಚಿತ ಗಾಳಿ ನೀರು ಮಣ್ಣಿಗೆ ಮರಳಿ
ಹಾಯೆನಿಸಿ ಉಸಿರಾಡಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...