Home / ಕವನ / ಕವಿತೆ / ಅವತಾರ

ಅವತಾರ

ಮುಕ್ಕಣ್ಣಶೆಟ್ಟಿ ದಯವಿಟ್ಟು ಕೊಟ್ಟ ಅಕ್ಕಿಯಲ್ಲಿ
ಚಿಕ್ಕ ಚಿಕ್ಕ ಸಹಸ್ರ ಲಿಂಗಗಳು;
ಅಕ್ಕಿಯಷ್ಟೆ ಬಿಳಿ
ಉಕ್ಕಿನಷ್ಟು ಭಾರ
ಬಿಕ್ಕಿದರೆ ಹೇಗೆ ಚಿಕ್ಕ ಆಲಿಕಲ್ಲನ್ನು ಮುಗಿಲು
ಹಾಗೆ
ಮಣಿಹರಳು!

ಶೆಟ್ಟಿ ಶಿವಭಕ್ತ
ಜೊತೆಗೆ ಕವಿರಕ್ತ
ಈಗ ಸರ್ಕಾರವೂ ಕುಲುಕಿ ಅವನ ಶುಭಹಸ್ತ
ಕೂಲಿಹುಡುಗನ ಕಣ್ಣ ಹನಿಗಿಂತ ಕಿರಿದಾಗಿ
ಸಾಯುವವನ ಕಡ್ಡಿದನಿಗಿಂತ ತೆಳುವಾಗಿ
ನಯವಾಗಿ
ದಯವಾಗಿ
ಪ್ರಜಾಪ್ರಭುತ್ವಕ್ಕೇ ಜಯವಾಗಿ

ಫಳ ಫಳ ಹೊಳೆಯುವ
ಕೊಯಮತ್ತೂರು ಸಣ್ಣದಲ್ಲೂ
ಮಿಣ್ಣಗೆ
ಥಣ್ಣಗೆ
ಮನುನಿರ್‍ಮಿತ ಎಂಬಷ್ಟು ನುಣ್ಣಗೆ
ಕಣ್ಣಿಗೇ ಕಾಣದ
ಸಣ್ಣ ಶಿಲೆಗಳು.

ಆಹಾರದಲ್ಲೂ ದೇವರು ದಯಮಾಡಿದ್ದು ಕಂಡು
ಕಣ್ಣಲ್ಲಿ ನೀರು ಬಂತು,
ಅನ್ನಮಾರ್ಗದಲ್ಲೂ ಹಾಯುವ ಅವನ ಸೂಕ್ಷ್ಮಕ್ಕೆ
ಮೈ ಜುಮ್ಮೆಂದಿತು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...