ಮತ್ತೆ ಹುಟ್ಟವುದಾದರೆ
ಈ ನೆಲವೇ ಇರಲಿ
ಹುಟ್ಟಿದ ಮೇಲೆನ್ನ ನುಡಿಯು
ಕನ್ನಡವೇ ಆಗಿರಲಿ

ತುಂಗೆಯಲಿ ನಾನಿರಲು
ಗಂಗೆಯೂ ಬರಲಿ
ಕೃಷ್ಣ-ಗೋದಾವರಿ
ಗೆಳತಿಯರು ಸಿಗಲಿ

ಹಿಮಾಲಯವು ಮುಡಿಯಲ್ಲಿ
ಸಹ್ಯಾದ್ರಿಯು ಅಡಿಯಲ್ಲಿ
ಅಲ್ಲಲ್ಲಿಯೇ ಇರಲಿ
ಕಲ್ಕತ್ತೆಯ ಕಾಳಿ
ಶೃಂಗೇರಿಯ ಶಾರದೆಗೆ
ಹೂವು-ಕುಂಕುಮ ಕೊಡಲಿ
ದೂರದಲ್ಲೇಕೆ ಇರಬೇಕು ದೆಹಲಿ
ಶಿವಮೊಗ್ಗೆಗೇ ಬರಲಿ

ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ
ಮಂಗಳೂರಿನ ಕಡಲು
ಮಡಿಕೇರಿಯ ಮಂಜಿನೊಡಲು
ನನಗೊದಗಿ ಬರಲಿ

ಹಟ್ಟಿ ಚಿನ್ನದ ಬುಗುಡಿ
ಕಾರವಾರದ ಸೀಗಡಿ
ತುಟ್ಟಿಯಾಗದೇ ಇರಲಿ

ಸೊರಗದಿರಲಿ ಬೇಲೂರಿನ ಬಾಲೆ
ಒಣಗದಿರಲಿ ಜೋಗದ ಮೋರೆ
ಇಳಕಲ್ಲಿನ ಸೀರಗೆ
ಕಾಶ್ಮೀರದಲ್ಲೂ ಬೆಲೆ ಸಿಗಲಿ

ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ
ಮೇಲುಕೋಟೆಯ ಚೆಲುವ
ನನಗೊಲಿದು ಬರಲಿ
*****