ಮತ್ತೆ ಹುಟ್ಟುವುದಾದರೆ…

ಮತ್ತೆ ಹುಟ್ಟವುದಾದರೆ
ಈ ನೆಲವೇ ಇರಲಿ
ಹುಟ್ಟಿದ ಮೇಲೆನ್ನ ನುಡಿಯು
ಕನ್ನಡವೇ ಆಗಿರಲಿ

ತುಂಗೆಯಲಿ ನಾನಿರಲು
ಗಂಗೆಯೂ ಬರಲಿ
ಕೃಷ್ಣ-ಗೋದಾವರಿ
ಗೆಳತಿಯರು ಸಿಗಲಿ

ಹಿಮಾಲಯವು ಮುಡಿಯಲ್ಲಿ
ಸಹ್ಯಾದ್ರಿಯು ಅಡಿಯಲ್ಲಿ
ಅಲ್ಲಲ್ಲಿಯೇ ಇರಲಿ
ಕಲ್ಕತ್ತೆಯ ಕಾಳಿ
ಶೃಂಗೇರಿಯ ಶಾರದೆಗೆ
ಹೂವು-ಕುಂಕುಮ ಕೊಡಲಿ
ದೂರದಲ್ಲೇಕೆ ಇರಬೇಕು ದೆಹಲಿ
ಶಿವಮೊಗ್ಗೆಗೇ ಬರಲಿ

ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ
ಮಂಗಳೂರಿನ ಕಡಲು
ಮಡಿಕೇರಿಯ ಮಂಜಿನೊಡಲು
ನನಗೊದಗಿ ಬರಲಿ

ಹಟ್ಟಿ ಚಿನ್ನದ ಬುಗುಡಿ
ಕಾರವಾರದ ಸೀಗಡಿ
ತುಟ್ಟಿಯಾಗದೇ ಇರಲಿ

ಸೊರಗದಿರಲಿ ಬೇಲೂರಿನ ಬಾಲೆ
ಒಣಗದಿರಲಿ ಜೋಗದ ಮೋರೆ
ಇಳಕಲ್ಲಿನ ಸೀರಗೆ
ಕಾಶ್ಮೀರದಲ್ಲೂ ಬೆಲೆ ಸಿಗಲಿ

ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ
ಮೇಲುಕೋಟೆಯ ಚೆಲುವ
ನನಗೊಲಿದು ಬರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೬
Next post ಶಿಕ್ಷಣ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…