Home / ಕವನ / ಕವಿತೆ / ಭುವನ ಸುಂದರಿ

ಭುವನ ಸುಂದರಿ

ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು
ಇವಳು ಎದ್ದು ಜಿಮ್‌ನಲ್ಲಿ ಬೆವರು
ಸುರಿಸುತ್ತಾ ಕಸರತ್ತು ಮಾಡುವಳು

ಎಲ್ಲರೂ ಹಾಲು ತುಪ್ಪದಲ್ಲಿ
ಕೈತೊಳೆದರೆ-
ಇವಳು ಹಣ್ಣು-ತರಕಾರಿ
ಒಣಗಿದ ಚಪಾತಿಯ
ಮೇಲೆಯೇ ಜೀವಿಸುವಳು

ಎದುರಿಗೆ ಯಾರೂ ಇಲ್ಲ
ಆದರೂ ಕೈ ಬೀಸುವಳು
ಕಾರಣವೆ ಇಲ್ಲ
ಸುಮ್ಮನೆ ನಗುವಳು
ಬಳುಕಿ ಬಾಗಿ
ಬೆಕ್ಕಿನ ಹೆಜ್ಜೆಯನನುಸರಿಸಿ
ತಾಲೀಮು ನಡೆಸುವಳು

ತಲೆಯೊಳಗೆ ಏನೆಲ್ಲ ತುಂಬಿಕೊಂಡು
ಗಿಳಿಯಂತೆ ಒಪ್ಪವಾಗಿ
ಪಾಠ ಒಪ್ಪಿಸುವಳು
ಚಾಣದಿಂದ ಕಲ್ಲು ಕೆತ್ತಿದ ಹಾಗೆ
ಇವಳ ಅಂಗ ಅಂಗವನೂ
ಕತ್ತಿ ಸ್ಪರ್ಧೆಗೆ ಅಣಿ ಮಾಡುವರು
ಇಷ್ಟು ಮೊಲೆ, ಇಷ್ಟೇ ನಿತಂಬ
ಸುರಿದು-ಅಳೆಯುವರು

ಒಂದು ದಿನ-
ಕೋರೈಸುವ ಬೆಳಕಿನಂಗಳದಲ್ಲಿ
ಕಿರೀಟವಿರಿಸಿಕೊಂಡು
ಸಿಂಹಾಸನದಲಿ ಕೂತು
ಸುಂದರಿಯರ ನಡುವೆ
ಮಹಾಸುಂದರಿಯಾಗಿ
ಮರೆಯುವಳು

ಚಪ್ಪಾಳೆ, ಕೇಕೆ, ಶಿಳ್ಳೆ
ಹೇಳಿ ಎಷ್ಟು ಜನಕೆ
ಈ ಭಾಗ್ಯ ದೊರೆಯುವುದು?
ಅಲೆಯ ಮೇಲಣ ಗುಳ್ಳೆಯೋ
ಪದ್ಮ ಪತ್ರದ ಮೇಲಣ ಜಲಬಿಂದುವೋ
ಅದು ಆಮೇಲಿನ ಮಾತು

ಜಗತ್ತು ಒಂದು ಚಣವಾದರೂ
ಕಣ್ಣರಳಿಸಿ, ಇವಳತ್ತ ನೋಡುವುದು
ಮತ್ತೋಬ್ಬಳು ಬರುವ ತನಕ
ಇವಳತ್ತಲೇ ನೋಡುತ್ತಾ ಇರುವುದು!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...