Home / ಕವನ / ಕವಿತೆ / ಭುವನ ಸುಂದರಿ

ಭುವನ ಸುಂದರಿ

ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು
ಇವಳು ಎದ್ದು ಜಿಮ್‌ನಲ್ಲಿ ಬೆವರು
ಸುರಿಸುತ್ತಾ ಕಸರತ್ತು ಮಾಡುವಳು

ಎಲ್ಲರೂ ಹಾಲು ತುಪ್ಪದಲ್ಲಿ
ಕೈತೊಳೆದರೆ-
ಇವಳು ಹಣ್ಣು-ತರಕಾರಿ
ಒಣಗಿದ ಚಪಾತಿಯ
ಮೇಲೆಯೇ ಜೀವಿಸುವಳು

ಎದುರಿಗೆ ಯಾರೂ ಇಲ್ಲ
ಆದರೂ ಕೈ ಬೀಸುವಳು
ಕಾರಣವೆ ಇಲ್ಲ
ಸುಮ್ಮನೆ ನಗುವಳು
ಬಳುಕಿ ಬಾಗಿ
ಬೆಕ್ಕಿನ ಹೆಜ್ಜೆಯನನುಸರಿಸಿ
ತಾಲೀಮು ನಡೆಸುವಳು

ತಲೆಯೊಳಗೆ ಏನೆಲ್ಲ ತುಂಬಿಕೊಂಡು
ಗಿಳಿಯಂತೆ ಒಪ್ಪವಾಗಿ
ಪಾಠ ಒಪ್ಪಿಸುವಳು
ಚಾಣದಿಂದ ಕಲ್ಲು ಕೆತ್ತಿದ ಹಾಗೆ
ಇವಳ ಅಂಗ ಅಂಗವನೂ
ಕತ್ತಿ ಸ್ಪರ್ಧೆಗೆ ಅಣಿ ಮಾಡುವರು
ಇಷ್ಟು ಮೊಲೆ, ಇಷ್ಟೇ ನಿತಂಬ
ಸುರಿದು-ಅಳೆಯುವರು

ಒಂದು ದಿನ-
ಕೋರೈಸುವ ಬೆಳಕಿನಂಗಳದಲ್ಲಿ
ಕಿರೀಟವಿರಿಸಿಕೊಂಡು
ಸಿಂಹಾಸನದಲಿ ಕೂತು
ಸುಂದರಿಯರ ನಡುವೆ
ಮಹಾಸುಂದರಿಯಾಗಿ
ಮರೆಯುವಳು

ಚಪ್ಪಾಳೆ, ಕೇಕೆ, ಶಿಳ್ಳೆ
ಹೇಳಿ ಎಷ್ಟು ಜನಕೆ
ಈ ಭಾಗ್ಯ ದೊರೆಯುವುದು?
ಅಲೆಯ ಮೇಲಣ ಗುಳ್ಳೆಯೋ
ಪದ್ಮ ಪತ್ರದ ಮೇಲಣ ಜಲಬಿಂದುವೋ
ಅದು ಆಮೇಲಿನ ಮಾತು

ಜಗತ್ತು ಒಂದು ಚಣವಾದರೂ
ಕಣ್ಣರಳಿಸಿ, ಇವಳತ್ತ ನೋಡುವುದು
ಮತ್ತೋಬ್ಬಳು ಬರುವ ತನಕ
ಇವಳತ್ತಲೇ ನೋಡುತ್ತಾ ಇರುವುದು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...