Home / ಕವನ / ಕವಿತೆ / ಸಾಂತಾಳಿ

ಸಾಂತಾಳಿ

ಅದುರುವ ಅಧರದಲಿರುವುದು ಗಾನವು
ವದಗಿದ ಕುಸುಮವು ತುರುಬಿನಲಿ
ಕಳಕಳ ರವದಲಿ ನುಣುಪಿನ ಬೆಣಚಲಿ
-ಸುಳಿಯುವ ಹೊಳೆಯೋ ಯಾರೆಲೆನೀ-

ಕೆಲಸಕೆ ನಲಿವವು ನಿನ್ನಂಗಗಳು
ಅಲಸದೆ ನಡುನಡು ನಗುವದದೇಂ
ಮಂಜುಳ ಮಾತಿನ ಇಂಗಿತವೇನದು
-ಅಂಜದ ಕಂಗಳ ಭಾಷೆಯದೇಂ-

ಉಕ್ಕಿ ಹರಿಯುವ! ಸೊಕ್ಕಿ ಬೀಳುವ
ನಕ್ಕ ನಗುವದು ಜಲಪಾತ!
ಏರುವ ಬೆಟ್ಟದ ಬೆನ್ನಿಂದಿಳೆಗೆ
-ಹಾರುವ ಝರಿಯೋ ಯಾರೆಲೆ ನೀಂ-

ಯಾರಿಗೆ ಅರಮನೆ ಕಟ್ಟುವೆ ನಗುವಿನ
ಗಾರೆಯ ಗಚ್ಚಲಿ ಪೇಳೆಲೆ ನಾರಿ!
ಸೇರದು ಅಲಸಿಕೆ ಪೋರಿಯ ರೂಪಿಗೆ
-ನಾರಿಯು ನೋಡಲು ಸಾಂತಾಳಿ-

ಊರಿದೆ ಬಿದರಿನ ಮೆಳೆಗಳ ನಡುವಲಿ
ಮೂರೇ ಕೂಗಿನ ದೂರವದು!
ದಾರಿಯ ಹಿಡಿವಳು ಸಂಜೆಯ ವೇಳೆಗೆ
-ನಾರಿಯು ಹಾಡಿನ ಹೊಳೆಯಾಕೆ-

ಬಲು ದೂರದಲಿದೆ ಹಾಯುವ ಹಳ್ಳವು.
ಬಳಸುತ ಕಮಲದ ಕೆರೆಯನ್ನು
ಹೊಕ್ಕಳು ತಾಳ ಖೆಜೂರದ ಗುತ್ತಿಯ
-ಉಕ್ಕುವ ಗಾನಕೆ ಕಡೆಯಿರದೆ-

ಬಳಿ ಬಳಿ ಗದ್ದೆಗಳಲ್ಲಿಂದಿತ್ತಲು
ಕೊಳಲಿನ ನುಡಿಗಳು ಮೊಳಗುತಿವೆ
ಅಂಗವು ಅದುರಿ ಕದಂಬದ ವನದಲಿ
-ಮಂಗಳ ನೋಟವು ಗೋಧೂಳಿಯಲಿ-

ಡಂಕಣ ಶಿಲುಪಿಯು ಕೆತ್ತಿದನೇನೈ
ಕಂಕಣನುಸಿರನು ಕೊಟ್ಟಿಹನೇ
ಕಪ್ಪನೆ ಕಲ್ಲಿನ ಅಪ್ಸರ ಮೂರುತಿ!
-ತಪ್ಪಿತೆ ಮೂಲೆಯ ಮದನನ! ಕೀಲು-

ಮೇದಿನಿ ಮೂಲೆಯ ಮದನನ ಕೈಯ್ಯ
ಮಾದರಿ ಗೊಂಬೆಯು ಸಾಂತಾಳಿ!
ತೋರುವ ನಗುವಿನ ಹಾರುವ ನಿರ್ಝರಿ!
-ನಾರಿಯು ನೋಡಲು ಸಾಂತಾಳಿ-
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...