Home / ಕವನ / ಕವಿತೆ / ಸಾಂತಾಳಿ

ಸಾಂತಾಳಿ

ಅದುರುವ ಅಧರದಲಿರುವುದು ಗಾನವು
ವದಗಿದ ಕುಸುಮವು ತುರುಬಿನಲಿ
ಕಳಕಳ ರವದಲಿ ನುಣುಪಿನ ಬೆಣಚಲಿ
-ಸುಳಿಯುವ ಹೊಳೆಯೋ ಯಾರೆಲೆನೀ-

ಕೆಲಸಕೆ ನಲಿವವು ನಿನ್ನಂಗಗಳು
ಅಲಸದೆ ನಡುನಡು ನಗುವದದೇಂ
ಮಂಜುಳ ಮಾತಿನ ಇಂಗಿತವೇನದು
-ಅಂಜದ ಕಂಗಳ ಭಾಷೆಯದೇಂ-

ಉಕ್ಕಿ ಹರಿಯುವ! ಸೊಕ್ಕಿ ಬೀಳುವ
ನಕ್ಕ ನಗುವದು ಜಲಪಾತ!
ಏರುವ ಬೆಟ್ಟದ ಬೆನ್ನಿಂದಿಳೆಗೆ
-ಹಾರುವ ಝರಿಯೋ ಯಾರೆಲೆ ನೀಂ-

ಯಾರಿಗೆ ಅರಮನೆ ಕಟ್ಟುವೆ ನಗುವಿನ
ಗಾರೆಯ ಗಚ್ಚಲಿ ಪೇಳೆಲೆ ನಾರಿ!
ಸೇರದು ಅಲಸಿಕೆ ಪೋರಿಯ ರೂಪಿಗೆ
-ನಾರಿಯು ನೋಡಲು ಸಾಂತಾಳಿ-

ಊರಿದೆ ಬಿದರಿನ ಮೆಳೆಗಳ ನಡುವಲಿ
ಮೂರೇ ಕೂಗಿನ ದೂರವದು!
ದಾರಿಯ ಹಿಡಿವಳು ಸಂಜೆಯ ವೇಳೆಗೆ
-ನಾರಿಯು ಹಾಡಿನ ಹೊಳೆಯಾಕೆ-

ಬಲು ದೂರದಲಿದೆ ಹಾಯುವ ಹಳ್ಳವು.
ಬಳಸುತ ಕಮಲದ ಕೆರೆಯನ್ನು
ಹೊಕ್ಕಳು ತಾಳ ಖೆಜೂರದ ಗುತ್ತಿಯ
-ಉಕ್ಕುವ ಗಾನಕೆ ಕಡೆಯಿರದೆ-

ಬಳಿ ಬಳಿ ಗದ್ದೆಗಳಲ್ಲಿಂದಿತ್ತಲು
ಕೊಳಲಿನ ನುಡಿಗಳು ಮೊಳಗುತಿವೆ
ಅಂಗವು ಅದುರಿ ಕದಂಬದ ವನದಲಿ
-ಮಂಗಳ ನೋಟವು ಗೋಧೂಳಿಯಲಿ-

ಡಂಕಣ ಶಿಲುಪಿಯು ಕೆತ್ತಿದನೇನೈ
ಕಂಕಣನುಸಿರನು ಕೊಟ್ಟಿಹನೇ
ಕಪ್ಪನೆ ಕಲ್ಲಿನ ಅಪ್ಸರ ಮೂರುತಿ!
-ತಪ್ಪಿತೆ ಮೂಲೆಯ ಮದನನ! ಕೀಲು-

ಮೇದಿನಿ ಮೂಲೆಯ ಮದನನ ಕೈಯ್ಯ
ಮಾದರಿ ಗೊಂಬೆಯು ಸಾಂತಾಳಿ!
ತೋರುವ ನಗುವಿನ ಹಾರುವ ನಿರ್ಝರಿ!
-ನಾರಿಯು ನೋಡಲು ಸಾಂತಾಳಿ-
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...