Home / ಕವನ / ಕವಿತೆ / ಸಾಂತಾಳಿ

ಸಾಂತಾಳಿ

ಅದುರುವ ಅಧರದಲಿರುವುದು ಗಾನವು
ವದಗಿದ ಕುಸುಮವು ತುರುಬಿನಲಿ
ಕಳಕಳ ರವದಲಿ ನುಣುಪಿನ ಬೆಣಚಲಿ
-ಸುಳಿಯುವ ಹೊಳೆಯೋ ಯಾರೆಲೆನೀ-

ಕೆಲಸಕೆ ನಲಿವವು ನಿನ್ನಂಗಗಳು
ಅಲಸದೆ ನಡುನಡು ನಗುವದದೇಂ
ಮಂಜುಳ ಮಾತಿನ ಇಂಗಿತವೇನದು
-ಅಂಜದ ಕಂಗಳ ಭಾಷೆಯದೇಂ-

ಉಕ್ಕಿ ಹರಿಯುವ! ಸೊಕ್ಕಿ ಬೀಳುವ
ನಕ್ಕ ನಗುವದು ಜಲಪಾತ!
ಏರುವ ಬೆಟ್ಟದ ಬೆನ್ನಿಂದಿಳೆಗೆ
-ಹಾರುವ ಝರಿಯೋ ಯಾರೆಲೆ ನೀಂ-

ಯಾರಿಗೆ ಅರಮನೆ ಕಟ್ಟುವೆ ನಗುವಿನ
ಗಾರೆಯ ಗಚ್ಚಲಿ ಪೇಳೆಲೆ ನಾರಿ!
ಸೇರದು ಅಲಸಿಕೆ ಪೋರಿಯ ರೂಪಿಗೆ
-ನಾರಿಯು ನೋಡಲು ಸಾಂತಾಳಿ-

ಊರಿದೆ ಬಿದರಿನ ಮೆಳೆಗಳ ನಡುವಲಿ
ಮೂರೇ ಕೂಗಿನ ದೂರವದು!
ದಾರಿಯ ಹಿಡಿವಳು ಸಂಜೆಯ ವೇಳೆಗೆ
-ನಾರಿಯು ಹಾಡಿನ ಹೊಳೆಯಾಕೆ-

ಬಲು ದೂರದಲಿದೆ ಹಾಯುವ ಹಳ್ಳವು.
ಬಳಸುತ ಕಮಲದ ಕೆರೆಯನ್ನು
ಹೊಕ್ಕಳು ತಾಳ ಖೆಜೂರದ ಗುತ್ತಿಯ
-ಉಕ್ಕುವ ಗಾನಕೆ ಕಡೆಯಿರದೆ-

ಬಳಿ ಬಳಿ ಗದ್ದೆಗಳಲ್ಲಿಂದಿತ್ತಲು
ಕೊಳಲಿನ ನುಡಿಗಳು ಮೊಳಗುತಿವೆ
ಅಂಗವು ಅದುರಿ ಕದಂಬದ ವನದಲಿ
-ಮಂಗಳ ನೋಟವು ಗೋಧೂಳಿಯಲಿ-

ಡಂಕಣ ಶಿಲುಪಿಯು ಕೆತ್ತಿದನೇನೈ
ಕಂಕಣನುಸಿರನು ಕೊಟ್ಟಿಹನೇ
ಕಪ್ಪನೆ ಕಲ್ಲಿನ ಅಪ್ಸರ ಮೂರುತಿ!
-ತಪ್ಪಿತೆ ಮೂಲೆಯ ಮದನನ! ಕೀಲು-

ಮೇದಿನಿ ಮೂಲೆಯ ಮದನನ ಕೈಯ್ಯ
ಮಾದರಿ ಗೊಂಬೆಯು ಸಾಂತಾಳಿ!
ತೋರುವ ನಗುವಿನ ಹಾರುವ ನಿರ್ಝರಿ!
-ನಾರಿಯು ನೋಡಲು ಸಾಂತಾಳಿ-
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...