ಕಳ್ಳ ನೋಟ ಬೀರಿ

ಕಳ್ಳ ನೋಟ ಬೀರಿ
ಎನ್ನ ಮನವ ಕದ್ದವ
ಎಲ್ಲಿಹ ಹೇಳೆ! ಸಖಿ ||

ಇರುಳು ಮರಳಿತು
ಚಂದ್ರಮ ಬಂದನು
ನೀನೇ ಪುಣ್ಯವತಿ ಚಕೋರಿ ||

ಚಂದ್ರಮ ನಿನಗಾಗಿ
ಪ್ರೀತಿ ಬೆಳದಿಂಗಳಾಗಿ
ಮುತ್ತನಿತ್ತನೇ ನೀನೇ ಪುಣ್ಯವತಿ ||

ವಿರಹದ ಬೇಗೆಯಲಿ
ರಾಧೆ ನಾ ಒಂಟಿಯಾದೆ
ಶ್ಯಾಮ ಬರಲಿಲ್ಲ ಚಂದ್ರಮುಖಿ ||

ಕಳಿಸಿಹೆ ಸಂದೇಶ
ಬರಲಿಲ್ಲ ಉತ್ತರ
ಬಾರದಿಹ ನೇಕೆ ಸಖಿ ||

ಯಾರ ಅರಿವಿಗೆ ಈ ಶಿಕ್ಷೆ
ಮನವು ಮಿಡಿದಿದೆ
ಎನ್ನ ಕೆಣಕದಿರು ಚಂದ್ರಮುಖಿ ||

ಕೊಳಲುನಾದ ಹೊಮ್ಮಿ ರೂಪವಾಗಿ
ಬೃಂದಾವನ ಪಿಸು ಮಾತಲಿ
ಅಣಕಿಸಿತೆನಗೆ ಕೇಳೆ ಸಖಿ ||

ಬೆಳದಿಂಗಳ ಸಂಜೆ
ಎನ್ನ ತಾಯ ಕರೆಗೆ
ಓಗೊಡುವ ಮುನ್ನ
ಅವನ ಕಾಣದೆ ನೊಂದನೇ ಸಖಿ ||

ಬಿಡಲಾರೆ ಶ್ಯಾಮ
ಹುಡುಕುವೆ ಹಗಲಿರುಳು
ಆತ್ಮನಂದನ ರಾಧೇಯನ್ನರಸ
ಕೇಳೆ ಸಖಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಳೆಯನ ಜೊತೆ ಸಮಾಲೋಚನೆ
Next post ಅಮ್ಮನಿಗೆ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys