ಬಿಟ್ಟುಕೊಡುವ ಸಮಯ

ಝಗ ಝಗಿಸುವ ಮಾರ್ಕೆಟ್ಟಿನ ಜರತಾರಿ ಜಗತ್ತು
ಬೆಳಕಿನ ಬೋಗುಣಿ ಅಂಗಡಿ, ಮುಸ್ಸಂಜೆಯ ಹೊತ್ತು.
ಅಂಗಡಿಯೆರಡೂ ಬದಿಗೂ ಪತ್ತಲಗಳ ತೂಗು
ಬಣ್ಣದ ಸರಕಿನ ಲೀಲೆ, ಬಯಕೆಯುರಿಯ ಕೂಗು.
ಯಾರಯಾರ ಜೊತೆಗೊ ಮಾತು ಎಲ್ಲೆಲ್ಲೋ ಕೂತು,
ಕುದಿ ತುಂಬಿದ ಏರುಕೂಗು ಯಾರನ್ನೋ ಕುರಿತು.
ಗುಹೆಯ ಆಳದಿಂದ ಮೇಲೆ ಚಿಮ್ಮಿ ಬರುವ ಒಳದನಿ
ಇನ್ನಾವುದೊ ದಿಕ್ಕಿನಿಂದ ಅದಕ್ಕೊಂದು ಮಾರ್ದನಿ.
ಗಡಿಬಿಡಿ ಕಾತರ ಸಡಗರ ಸಂಭ್ರಮದುದ್ಗಾರ,
ಮೇಲೆ ಏರಿ ತೂರಿ ಕವಿದು ಹೋರುವ ಹುನ್ನಾರ;
ಉಕ್ಕಿದ ಜೀವದ ಮೋದವ ಮತ್ತಾವುದೊ ಪಾತ್ರಕೆ
ಸುರಿಯಬೇಕು ಎನ್ನಿಸುವ ಕಿಚ್ಚು ಜೀವ ಜೀವಕೆ.

ಏನೋ ಖಿನ್ನತೆ ಈಗ ಇರುಳು ಇಳಿವ ಹೊತ್ತಿಗೆ
ಜೀವ ಹಸಿದು ಕೂಗುತ್ತಿದೆ ಹೊತ್ತು ತರದ ಬುತ್ತಿಗೆ.
ಆರುತ್ತಿದೆ ಒಂದೊಂದೇ ದೀಪ ಆಗಲೇನೆ
ಮುಚ್ಚಿ ಬಿಡುವುದಂಗಡಿ ಇನ್ನು ಬೇಗಲೇನೆ.
ಬಿಟ್ಟುಕೊಡುವ ಸಮಯಕ್ಕೆ ಏನೋ ಖೇದ ಉಕ್ಕಿದೆ,
ನೆನಪಿನ ಹರೆಯೇರಿ ಮಂಗ ನೆಲದತ್ತಲೆ ಜೀಕಿದೆ.
ನಡೆದು ಬಂದ ದಾರಿಯಲ್ಲಿ ಮರಳಿ ಮನದ ಆಟ,
ಹಾಯದಿದ್ದ ಓಣಿಗಳಲೂ ಕಲ್ಪನೆಗಳ ಆಟ.
ಮುಲುಕುತ್ತಿದೆ ಕಿಟಕಿ ಬದಿಗೆ ಕತ್ತರಿಸಿದ ಬಾಲ,
ಬಾಯಿಬಿಗಿದ ಚೀಲದಲ್ಲಿ ಮಿಡುಕುವ ಮಾರ್‍ಜಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುತ್ತು
Next post ಹೂ ನಗೆ ಬೀರಿದಾಗ – ೨

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…