ಅರ್ಧಸತ್ಯದ ಪ್ರಾಪ್ತಿ

ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ,
ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ;
ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು,
ಪಾಲಾಗಿರುವ ಕಾಳು,
ಬೆಳೆದು ಪಡೆಯುವ ಶಕ್ತಿ
ಕಳೆದು ಹೋಗಿರುವ ಹೋಳು,
ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ
ಸಾಧ್ಯವಾಗದ ಬರಡು, ಕಣ್ಣಿದ್ದೂ ಕುರುಡು;
ಕಂಡರೂ ಸಹ ಬಿತ್ತ, ವಂಚಿಸುತ್ತದೆ ಕಣ್ಣ
ಒಳಗೆ ಮಲಗಿರುವ ಮರ
ಇದ್ದೂ ಇಲ್ಲದ ಥರ;
ದರ್ಶನ ಭಾಗ್ಯವಿಲ್ಲ ಹೋಳು ಸತ್ಯಕ್ಕೆ
ಸಿಗದೆ ಕಲ್ಪಕವರ.

ಇದ್ದದ್ದ ತಿಳಿಯಲು ಇಲ್ಲದ್ದೊಂದರ ನೆರವು
ಬೇಕೊ ಹೇಗೆ ?
ಜೀವನದ ಅರ್ಥ ಅಭಿನಯದ ಹುಸಿಯಲ್ಲಿ ಮಾತ್ರ,
ಅರಳುವ ಹಾಗೆ ?

ಕತ್ತೆತ್ತಿ ನೋಡಿದರೆ ವಾಸ್ತವಕ್ಕೆ ತೋರುವುದು
ಗಾಳಿ ಬಗೆಯುವ ಗರುಡಪಾದ ;
ವಾಸ್ತವವ ಕಡೆದು ನೋಡದೆ ಹೇಗೆ ಹೊಳೆಯುವುದು
ಬೆನ್ನೇರಿ ಸಾಗಿರುವ ಪೂರ್ಣ ದೃಶ್ಯ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವು
Next post ನನ್ನ ಹಾಡು

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…