ಅರ್ಧಸತ್ಯದ ಪ್ರಾಪ್ತಿ

ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ,
ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ;
ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು,
ಪಾಲಾಗಿರುವ ಕಾಳು,
ಬೆಳೆದು ಪಡೆಯುವ ಶಕ್ತಿ
ಕಳೆದು ಹೋಗಿರುವ ಹೋಳು,
ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ
ಸಾಧ್ಯವಾಗದ ಬರಡು, ಕಣ್ಣಿದ್ದೂ ಕುರುಡು;
ಕಂಡರೂ ಸಹ ಬಿತ್ತ, ವಂಚಿಸುತ್ತದೆ ಕಣ್ಣ
ಒಳಗೆ ಮಲಗಿರುವ ಮರ
ಇದ್ದೂ ಇಲ್ಲದ ಥರ;
ದರ್ಶನ ಭಾಗ್ಯವಿಲ್ಲ ಹೋಳು ಸತ್ಯಕ್ಕೆ
ಸಿಗದೆ ಕಲ್ಪಕವರ.

ಇದ್ದದ್ದ ತಿಳಿಯಲು ಇಲ್ಲದ್ದೊಂದರ ನೆರವು
ಬೇಕೊ ಹೇಗೆ ?
ಜೀವನದ ಅರ್ಥ ಅಭಿನಯದ ಹುಸಿಯಲ್ಲಿ ಮಾತ್ರ,
ಅರಳುವ ಹಾಗೆ ?

ಕತ್ತೆತ್ತಿ ನೋಡಿದರೆ ವಾಸ್ತವಕ್ಕೆ ತೋರುವುದು
ಗಾಳಿ ಬಗೆಯುವ ಗರುಡಪಾದ ;
ವಾಸ್ತವವ ಕಡೆದು ನೋಡದೆ ಹೇಗೆ ಹೊಳೆಯುವುದು
ಬೆನ್ನೇರಿ ಸಾಗಿರುವ ಪೂರ್ಣ ದೃಶ್ಯ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವು
Next post ನನ್ನ ಹಾಡು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys