ಯಾರೋ ಒಬ್ಬನ ಸ್ವಗತ

ಹನಿ ಹಾಕಲು ಹೊರಟ ಸಂಜಿ. ಮಳೆ ಬಿದ್ದೂ
ಕುಣಿಯದ ನವಿಲು. ಅರ್ಧ ಆಕಾಶವನ್ನೆ
ಮುಚ್ಚಿದೆ ಮುಗಿಲು. ಸಮೆದ ಬೆಣಚು ಕಲ್ಲಿನ
ತುಂಡು ಚಿಕ್ಕಿ, ಬಾನಿನಲ್ಲಿಲ್ಲ ಒಂದೇ ಒಂದು ಹಕ್ಕಿ
ಸ್ತಬ್ಧ ಗಿಡಮರ, ಥಂಡಿಗಾಳಿ, ನೇಸರನಿಲ್ಲದ ಸಭೆ
ಬೇಸರವೋ ಬೇಸರ.

ಏನು ಸಾಧಿಸಿದ್ದಾಯಿತು ಈ ತನಕ ?
ತಿಂದದ್ದು ಕುಡಿದದ್ದು ಕೊಳಕರ ಜೊತೆ ಕಲೆತದ್ದು
ಯಾರ್‍ಯಾರನ್ನೋ ಚುಚ್ಚಿ ಛೇಡಿಸಿ ವಿದೂಷಕನೆನಿಸಿದ್ದು
ಹಣಕ್ಕಾಗಿ ಹೆಣಗಿದ್ದು, ಎಲ್ಲೆಂದರಲ್ಲಿ ಅಲೆದದ್ದು
ದುಡ್ಡು ಗುಡ್ಡೆಹಾಕಿಯೂ ಜೀನನಾಗಿ ಬಾಳಿದ್ದು-
ಮುಗಿಯಿತಲ್ಲ ಎಲ್ಲ
ನದಿತನಕ ಹೋದದ್ದಷ್ಟೆ ಇಳಿಯಲಿಲ್ಲ
ಇಳಿದ ಒಂದೆರಡು ಸಲವೂ ಈಜಲಿಲ್ಲ.
ಬರಿ ಪ್ರತಿಷ್ಠೆಗಾಗಿ ಬರೆದದ್ದು ಯಾರನ್ನೂ ಮುಟ್ಟಲಿಲ,
ಒಂದು ಅಂತಃಕರಣವನ್ನೂ ತಟ್ಟಲಿಲ್ಲ
“ಇಲ್ಲ ಇಲ್ಲ ಏನನ್ನೂ ಮಾಡಲಿಲ್ಲ ಈತನು.”

ಇನ್ನೇನು ಬಂತು ರಾತ್ರಿ. ಬಿಚ್ಚುತ್ತಿದೆ ಇರುಳ ಜಡೆ,
ಉಂಡು ಮಲಗಿದರೆ ಅಲ್ಲಿಗೆ ಕಡೆ.
ಅಷ್ಟು ಹಿಂದೆ ಹುಟ್ಟಿ, ಇಷ್ಟರ ತನಕ ಬಾಳಿ,
ಛಿ ಇಷ್ಟೇನೇ ಎಂದು ಮರುಗುತ್ತಿದೆ ಇವನ ಚಿತ್ತ;
ಹೆಪ್ಪುಗಟ್ಟಿದ್ದು ಮತ್ತೆ ಹಾಲಾಗಲು ಸಾಧ್ಯವೆ ?
ಈಗ ಪಶ್ಚಾತ್ತಾಪವಷ್ಟೇ ನಿತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು
Next post ಅಮ್ಮ ನಿನ್ನ ನೋಟದಲಿ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys