ಯಾರೋ ಒಬ್ಬನ ಸ್ವಗತ

ಹನಿ ಹಾಕಲು ಹೊರಟ ಸಂಜಿ. ಮಳೆ ಬಿದ್ದೂ
ಕುಣಿಯದ ನವಿಲು. ಅರ್ಧ ಆಕಾಶವನ್ನೆ
ಮುಚ್ಚಿದೆ ಮುಗಿಲು. ಸಮೆದ ಬೆಣಚು ಕಲ್ಲಿನ
ತುಂಡು ಚಿಕ್ಕಿ, ಬಾನಿನಲ್ಲಿಲ್ಲ ಒಂದೇ ಒಂದು ಹಕ್ಕಿ
ಸ್ತಬ್ಧ ಗಿಡಮರ, ಥಂಡಿಗಾಳಿ, ನೇಸರನಿಲ್ಲದ ಸಭೆ
ಬೇಸರವೋ ಬೇಸರ.

ಏನು ಸಾಧಿಸಿದ್ದಾಯಿತು ಈ ತನಕ ?
ತಿಂದದ್ದು ಕುಡಿದದ್ದು ಕೊಳಕರ ಜೊತೆ ಕಲೆತದ್ದು
ಯಾರ್‍ಯಾರನ್ನೋ ಚುಚ್ಚಿ ಛೇಡಿಸಿ ವಿದೂಷಕನೆನಿಸಿದ್ದು
ಹಣಕ್ಕಾಗಿ ಹೆಣಗಿದ್ದು, ಎಲ್ಲೆಂದರಲ್ಲಿ ಅಲೆದದ್ದು
ದುಡ್ಡು ಗುಡ್ಡೆಹಾಕಿಯೂ ಜೀನನಾಗಿ ಬಾಳಿದ್ದು-
ಮುಗಿಯಿತಲ್ಲ ಎಲ್ಲ
ನದಿತನಕ ಹೋದದ್ದಷ್ಟೆ ಇಳಿಯಲಿಲ್ಲ
ಇಳಿದ ಒಂದೆರಡು ಸಲವೂ ಈಜಲಿಲ್ಲ.
ಬರಿ ಪ್ರತಿಷ್ಠೆಗಾಗಿ ಬರೆದದ್ದು ಯಾರನ್ನೂ ಮುಟ್ಟಲಿಲ,
ಒಂದು ಅಂತಃಕರಣವನ್ನೂ ತಟ್ಟಲಿಲ್ಲ
“ಇಲ್ಲ ಇಲ್ಲ ಏನನ್ನೂ ಮಾಡಲಿಲ್ಲ ಈತನು.”

ಇನ್ನೇನು ಬಂತು ರಾತ್ರಿ. ಬಿಚ್ಚುತ್ತಿದೆ ಇರುಳ ಜಡೆ,
ಉಂಡು ಮಲಗಿದರೆ ಅಲ್ಲಿಗೆ ಕಡೆ.
ಅಷ್ಟು ಹಿಂದೆ ಹುಟ್ಟಿ, ಇಷ್ಟರ ತನಕ ಬಾಳಿ,
ಛಿ ಇಷ್ಟೇನೇ ಎಂದು ಮರುಗುತ್ತಿದೆ ಇವನ ಚಿತ್ತ;
ಹೆಪ್ಪುಗಟ್ಟಿದ್ದು ಮತ್ತೆ ಹಾಲಾಗಲು ಸಾಧ್ಯವೆ ?
ಈಗ ಪಶ್ಚಾತ್ತಾಪವಷ್ಟೇ ನಿತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು
Next post ಅಮ್ಮ ನಿನ್ನ ನೋಟದಲಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…