ಸರಕಾರದ ಪರವಾಗಿ ನಾಯಕ

ಎಲ್ಲರಿಗೂ ನಮಸ್ಕಾರ
ಜನರ ಪೂರ್ತಿ ಸಹಕಾರ
ಇದ್ದರೇನೆ ಆಗೋದಪೋ
ಈ ದೇಶದ ಉದ್ಧಾರ

ಎಂಥ ಸರಕಾರ! ಎಂಥ ಸರಕಾರ!
ಬಂಗಾರದಂಥ ಸರಕಾರ!

ಪ್ರತಿ ಊರಿಗೂ ಸರೋವರ
ಬೆಳೆದ ಹೆಣ್ಣಿಗೆ ವರ
ತಲಿ ಮೇಲೆ ಸೂರು ವಸೀ
ಹೊದಿಯೋದಕ್ಕೆ ಛದ್ದರ

ಎಂಥ ಸರಕಾರ! ಎಂಥ ಸರಕಾರ!
ಬಂಗಾರದಂಥ ಸರಕಾರ!

ವಿರೊಧಿಗಳಿಗೆ ಬಹಿಷ್ಕಾರ
ಸಾಗೋದಿದೆ ಬಹು ದೂರ
ನಿಮ್ಮ ಮೇಲೆ ನಡೆಸೋದಪೋ
ನೀವಿತ್ತಿರೋ ಅಧಿಕಾರ

ಎಂಥ ಸರಕಾರ! ಎಂಥ ಸರಕಾರ!
ಬಂಗಾರದಂಥ ಸರಕಾರ!

ಬೇಡ್ರೀ ನಮಗೆ ಹೂ ಹಾರ
ಬರೀ ಮಾತಿನ ಪುರಸ್ಕಾರ
ಕೊಡೋದಾದ್ರೆ ಕೊಡ್ರಪೋ
ನಿಮ್ಮಲ್ಲಿರೋ ಬಂಗಾರ

ಎಂಥ ಸರಕಾರ! ಎಂಥ ಸರಕಾರ!
ಬಂಗಾರದಂಥ ಸರಕಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂದದ ಮನೆಗೊಂದು ಚೆಂದದ ಹೆಸರು
Next post ಮುತ್ತು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys