Home / ಕವನ / ಕವಿತೆ / ಮರಿ ಪಿಶಾಚಿ ಪದ್ಯ

ಮರಿ ಪಿಶಾಚಿ ಪದ್ಯ

ಭಾಗ-೧

ಒಮ್ಮೆ ಒಂದು ಮರಿಪಿಶಾಚಿ
ಊರ ಸುತ್ತಲದಕೆ ತೋಚಿ

ಪೊಟರೆಯಿಂದ ಇಳಿಯಿತು
ಧೈರ್ಯದಿಂದ ನಡೆಯಿತು

ನಡೆದು ನಡೆದು ಬರಲು ಕೊನೆ
ಬಿತ್ತು ಕಣ್ಣಿಗೊಂದು ಮನೆ

ಬಾಗಿಲಿಗೆ ಬೀಗವಿತ್ತು
ಕಿಟಕಿ ಮಾತ್ರ ತೆರದೆ ಇತ್ತು

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಯಾರು ಇಲ್ಲ ಮನೆಯ ಒಳಗೆ
ಹೋಗಿರುವರು ಎಲ್ಲೋ ಹೊರಗೆ

ಎಷ್ಟಾದರೂ ಪಿಶಾಚಿ ತಾನೆ
ಹಾರಿಯೇ ಬಿಟ್ಟಿತು ಧುಡುಕ್ಕನೆ

ಕುರ್ಚಿ ಮೇಜು ತೂಗುಯ್ಯಾಲೆ
ಕುಣಿದಾಡಿತು ಕೆಳಗೆ ಮೇಲೆ

ಮೂಗಿಗೆ ಬಡಿಯಲು ಏನೋ ವಾಸನೆ
ಹೊಕ್ಕು ನೋಡಿತು ಅಡುಗೆ ಕೋಣೆ

ಮೂಲೆಯಲೊಂದು ಒಂಟೆ ಡುಬ್ಬ
ಕವಚಿದ ಹಾಗೆ ಬೆಲ್ಲದ ಡಬ್ಬ

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಬೆಲ್ಲದ ಪಸೆ ಮೈ ಕೈ ಸವರಿ
ಬಿದ್ದೇಬಿಟ್ಟಿತು ಒಳಕ್ಕೆ ಜಾರಿ

ಮೇಲೆ ನೆಗೆಯೋಕಾಗೋದಿಲ್ಲ
ಉಂಡೆ ಬೆಲ್ಲ ಸುತ್ತಲೆಲ್ಲ

ಸರಿ! ಎಂದು ಮರಿಪಿಶಾಚಿ
ಮೆಲ್ಲತೊಡಗಿತು ಬಾಚಿ ಬಾಚಿ

ಮೆದ್ದು ಕೈ ಕಾಲು ಮಂಡೆ
ಆಯಿತೊಂದು ಬೆಲ್ಲದುಂಡೆ

ಅಷ್ಟರಲಿ ಸದ್ದು ಹೊರಗೆ
ಬಾಗಿಲು ಕಿರ್ರನೆ ತೆರೆದ ಹಾಗೆ

ಮನುಷ್ಯರ ಕಾಲ ಸಪ್ಪಳ
ಮುರಿದ ಹಾಗೆ ಹಪ್ಪಳ

ಮರಿ ಪಿಶಾಚಿ ಡಬ್ಬದೊಳಗೆ
ಬೆವರತೊಡಗಿತು ಮೆಲ್ಲಗೆ

ಭಾಗ-೨

ಅಡುಗೆ ಭಟ್ಟ ಸುಬ್ಬಾಭಟ್ಟ
ಒಲೆಯ ಮೇಲೆ ಎಸರನಿಟ್ಟ

ಅಂದು ರಾಮನವಮಿ ದಿವಸ
ಆದ್ದರಿಂದ ಪಾಯಸ

ಎಸರು ಕುದಿಯಿತು ತಳಮಳ
ಪಿಶಾಚಿಗೇಕೊ ಕಳವಳ

ಸುಬ್ಬಾಭಟ್ಟ ಹುಡುಕಿದ
ಬೆಲ್ಲದ ಡಬ್ಬ ತಡಕಿದ

ಕೈಗೆ ಸಿಕ್ಕ ದೊಡ್ಡ ಉಂಡೆ
ಸೇರಿತು ಪಾಯಸದ ಹಂಡೆ

ನೋಡಲೇನು! ಮರಿಪಿಶಾಚಿ
ಕುಂಯ್ಯೋ ಮುರ್ರೋ ಎಂದು ಕಿರುಚಿ

ಕಿಟಕಿಯಿಂದ ಒಂದೇ ನೆಗೆತ
ಬೇಡಿ ತಿನುವೆನೆನ್ನುತ

ಕೆಳಗೆ ಬಿದ್ದ ಸುಬ್ಬಾಭಟ್ಟ
ಒಂದು ವಾರ ಮಲಗಿಬಿಟ್ಟ

ಆಗಿದ್ದಾನೆ ಸಣಕಲು
ಹೇಳುತ್ತಾನೆ ಈಗಲೂ

ಇಂಥ ವಿಚಿತ್ರ ಕಂಡದ್ದಿಲ್ಲ
ಹಾರುವಂಥ ಉಂಡೆ ಬೆಲ್ಲ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...