Home / ಕವನ / ಕವಿತೆ / ಮರಿ ಪಿಶಾಚಿ ಪದ್ಯ

ಮರಿ ಪಿಶಾಚಿ ಪದ್ಯ

ಭಾಗ-೧

ಒಮ್ಮೆ ಒಂದು ಮರಿಪಿಶಾಚಿ
ಊರ ಸುತ್ತಲದಕೆ ತೋಚಿ

ಪೊಟರೆಯಿಂದ ಇಳಿಯಿತು
ಧೈರ್ಯದಿಂದ ನಡೆಯಿತು

ನಡೆದು ನಡೆದು ಬರಲು ಕೊನೆ
ಬಿತ್ತು ಕಣ್ಣಿಗೊಂದು ಮನೆ

ಬಾಗಿಲಿಗೆ ಬೀಗವಿತ್ತು
ಕಿಟಕಿ ಮಾತ್ರ ತೆರದೆ ಇತ್ತು

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಯಾರು ಇಲ್ಲ ಮನೆಯ ಒಳಗೆ
ಹೋಗಿರುವರು ಎಲ್ಲೋ ಹೊರಗೆ

ಎಷ್ಟಾದರೂ ಪಿಶಾಚಿ ತಾನೆ
ಹಾರಿಯೇ ಬಿಟ್ಟಿತು ಧುಡುಕ್ಕನೆ

ಕುರ್ಚಿ ಮೇಜು ತೂಗುಯ್ಯಾಲೆ
ಕುಣಿದಾಡಿತು ಕೆಳಗೆ ಮೇಲೆ

ಮೂಗಿಗೆ ಬಡಿಯಲು ಏನೋ ವಾಸನೆ
ಹೊಕ್ಕು ನೋಡಿತು ಅಡುಗೆ ಕೋಣೆ

ಮೂಲೆಯಲೊಂದು ಒಂಟೆ ಡುಬ್ಬ
ಕವಚಿದ ಹಾಗೆ ಬೆಲ್ಲದ ಡಬ್ಬ

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಬೆಲ್ಲದ ಪಸೆ ಮೈ ಕೈ ಸವರಿ
ಬಿದ್ದೇಬಿಟ್ಟಿತು ಒಳಕ್ಕೆ ಜಾರಿ

ಮೇಲೆ ನೆಗೆಯೋಕಾಗೋದಿಲ್ಲ
ಉಂಡೆ ಬೆಲ್ಲ ಸುತ್ತಲೆಲ್ಲ

ಸರಿ! ಎಂದು ಮರಿಪಿಶಾಚಿ
ಮೆಲ್ಲತೊಡಗಿತು ಬಾಚಿ ಬಾಚಿ

ಮೆದ್ದು ಕೈ ಕಾಲು ಮಂಡೆ
ಆಯಿತೊಂದು ಬೆಲ್ಲದುಂಡೆ

ಅಷ್ಟರಲಿ ಸದ್ದು ಹೊರಗೆ
ಬಾಗಿಲು ಕಿರ್ರನೆ ತೆರೆದ ಹಾಗೆ

ಮನುಷ್ಯರ ಕಾಲ ಸಪ್ಪಳ
ಮುರಿದ ಹಾಗೆ ಹಪ್ಪಳ

ಮರಿ ಪಿಶಾಚಿ ಡಬ್ಬದೊಳಗೆ
ಬೆವರತೊಡಗಿತು ಮೆಲ್ಲಗೆ

ಭಾಗ-೨

ಅಡುಗೆ ಭಟ್ಟ ಸುಬ್ಬಾಭಟ್ಟ
ಒಲೆಯ ಮೇಲೆ ಎಸರನಿಟ್ಟ

ಅಂದು ರಾಮನವಮಿ ದಿವಸ
ಆದ್ದರಿಂದ ಪಾಯಸ

ಎಸರು ಕುದಿಯಿತು ತಳಮಳ
ಪಿಶಾಚಿಗೇಕೊ ಕಳವಳ

ಸುಬ್ಬಾಭಟ್ಟ ಹುಡುಕಿದ
ಬೆಲ್ಲದ ಡಬ್ಬ ತಡಕಿದ

ಕೈಗೆ ಸಿಕ್ಕ ದೊಡ್ಡ ಉಂಡೆ
ಸೇರಿತು ಪಾಯಸದ ಹಂಡೆ

ನೋಡಲೇನು! ಮರಿಪಿಶಾಚಿ
ಕುಂಯ್ಯೋ ಮುರ್ರೋ ಎಂದು ಕಿರುಚಿ

ಕಿಟಕಿಯಿಂದ ಒಂದೇ ನೆಗೆತ
ಬೇಡಿ ತಿನುವೆನೆನ್ನುತ

ಕೆಳಗೆ ಬಿದ್ದ ಸುಬ್ಬಾಭಟ್ಟ
ಒಂದು ವಾರ ಮಲಗಿಬಿಟ್ಟ

ಆಗಿದ್ದಾನೆ ಸಣಕಲು
ಹೇಳುತ್ತಾನೆ ಈಗಲೂ

ಇಂಥ ವಿಚಿತ್ರ ಕಂಡದ್ದಿಲ್ಲ
ಹಾರುವಂಥ ಉಂಡೆ ಬೆಲ್ಲ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...