Home / ಕವನ / ಕವಿತೆ / ಮರಿ ಪಿಶಾಚಿ ಪದ್ಯ

ಮರಿ ಪಿಶಾಚಿ ಪದ್ಯ

ಭಾಗ-೧

ಒಮ್ಮೆ ಒಂದು ಮರಿಪಿಶಾಚಿ
ಊರ ಸುತ್ತಲದಕೆ ತೋಚಿ

ಪೊಟರೆಯಿಂದ ಇಳಿಯಿತು
ಧೈರ್ಯದಿಂದ ನಡೆಯಿತು

ನಡೆದು ನಡೆದು ಬರಲು ಕೊನೆ
ಬಿತ್ತು ಕಣ್ಣಿಗೊಂದು ಮನೆ

ಬಾಗಿಲಿಗೆ ಬೀಗವಿತ್ತು
ಕಿಟಕಿ ಮಾತ್ರ ತೆರದೆ ಇತ್ತು

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಯಾರು ಇಲ್ಲ ಮನೆಯ ಒಳಗೆ
ಹೋಗಿರುವರು ಎಲ್ಲೋ ಹೊರಗೆ

ಎಷ್ಟಾದರೂ ಪಿಶಾಚಿ ತಾನೆ
ಹಾರಿಯೇ ಬಿಟ್ಟಿತು ಧುಡುಕ್ಕನೆ

ಕುರ್ಚಿ ಮೇಜು ತೂಗುಯ್ಯಾಲೆ
ಕುಣಿದಾಡಿತು ಕೆಳಗೆ ಮೇಲೆ

ಮೂಗಿಗೆ ಬಡಿಯಲು ಏನೋ ವಾಸನೆ
ಹೊಕ್ಕು ನೋಡಿತು ಅಡುಗೆ ಕೋಣೆ

ಮೂಲೆಯಲೊಂದು ಒಂಟೆ ಡುಬ್ಬ
ಕವಚಿದ ಹಾಗೆ ಬೆಲ್ಲದ ಡಬ್ಬ

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಬೆಲ್ಲದ ಪಸೆ ಮೈ ಕೈ ಸವರಿ
ಬಿದ್ದೇಬಿಟ್ಟಿತು ಒಳಕ್ಕೆ ಜಾರಿ

ಮೇಲೆ ನೆಗೆಯೋಕಾಗೋದಿಲ್ಲ
ಉಂಡೆ ಬೆಲ್ಲ ಸುತ್ತಲೆಲ್ಲ

ಸರಿ! ಎಂದು ಮರಿಪಿಶಾಚಿ
ಮೆಲ್ಲತೊಡಗಿತು ಬಾಚಿ ಬಾಚಿ

ಮೆದ್ದು ಕೈ ಕಾಲು ಮಂಡೆ
ಆಯಿತೊಂದು ಬೆಲ್ಲದುಂಡೆ

ಅಷ್ಟರಲಿ ಸದ್ದು ಹೊರಗೆ
ಬಾಗಿಲು ಕಿರ್ರನೆ ತೆರೆದ ಹಾಗೆ

ಮನುಷ್ಯರ ಕಾಲ ಸಪ್ಪಳ
ಮುರಿದ ಹಾಗೆ ಹಪ್ಪಳ

ಮರಿ ಪಿಶಾಚಿ ಡಬ್ಬದೊಳಗೆ
ಬೆವರತೊಡಗಿತು ಮೆಲ್ಲಗೆ

ಭಾಗ-೨

ಅಡುಗೆ ಭಟ್ಟ ಸುಬ್ಬಾಭಟ್ಟ
ಒಲೆಯ ಮೇಲೆ ಎಸರನಿಟ್ಟ

ಅಂದು ರಾಮನವಮಿ ದಿವಸ
ಆದ್ದರಿಂದ ಪಾಯಸ

ಎಸರು ಕುದಿಯಿತು ತಳಮಳ
ಪಿಶಾಚಿಗೇಕೊ ಕಳವಳ

ಸುಬ್ಬಾಭಟ್ಟ ಹುಡುಕಿದ
ಬೆಲ್ಲದ ಡಬ್ಬ ತಡಕಿದ

ಕೈಗೆ ಸಿಕ್ಕ ದೊಡ್ಡ ಉಂಡೆ
ಸೇರಿತು ಪಾಯಸದ ಹಂಡೆ

ನೋಡಲೇನು! ಮರಿಪಿಶಾಚಿ
ಕುಂಯ್ಯೋ ಮುರ್ರೋ ಎಂದು ಕಿರುಚಿ

ಕಿಟಕಿಯಿಂದ ಒಂದೇ ನೆಗೆತ
ಬೇಡಿ ತಿನುವೆನೆನ್ನುತ

ಕೆಳಗೆ ಬಿದ್ದ ಸುಬ್ಬಾಭಟ್ಟ
ಒಂದು ವಾರ ಮಲಗಿಬಿಟ್ಟ

ಆಗಿದ್ದಾನೆ ಸಣಕಲು
ಹೇಳುತ್ತಾನೆ ಈಗಲೂ

ಇಂಥ ವಿಚಿತ್ರ ಕಂಡದ್ದಿಲ್ಲ
ಹಾರುವಂಥ ಉಂಡೆ ಬೆಲ್ಲ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...